ಆರ್ಎಸ್ಎಸ್ ಕುರಿತಾಗಿ ನಟ ಪ್ರಕಾಶ್ ರಾಜ್ ಅವರು ನೀಡಿದ ಹೇಳಿಕೆ ಎಂದು ಸುಳ್ಳು ಹೇಳಿಕೆಯ ಪೋಸ್ಟರ್ ವೈರಲ್ ಆಗುತ್ತಿದ್ದು, ಅದರ ವಿರುದ್ಧವಾಗಿ ನಟ ಪ್ರಕಾಶ್ ರಾಜ್ ದೂರು ದಾಖಲಿಸಿದ್ದಾರೆ.
“ಇಂಡೋನೇಷ್ಯಾದಲ್ಲಿ ಶೇಕಡ 90ರಷ್ಟು ಮುಸ್ಲಿಮರು ಇದ್ದಾರೆ. ಶೇಕಡ 2ರಷ್ಟು ಹಿಂದೂಗಳಿದ್ದಾರೆ. ಅಲ್ಲಿ ಒಟ್ಟಾಗಿ 11 ಸಾವಿರ ದೇವಾಲಯಗಳಿದೆ. ಅಲ್ಲಿ ಯಾವುದೇ ದಂಗೆಗಳಾದ ಬಗ್ಗೆ ನಾನು ಕೇಳಿಲ್ಲ. ಯಾಕೆಂದರೆ ಅಲ್ಲಿ ಆರ್ಎಸ್ಎಸ್ ಇಲ್ಲ” ಎಂದು ಪ್ರಕಾಶ್ ರಾಜ್ ಹೇಳಿರುವುದಾಗಿ ಮೇಘ್ ಅಪ್ಡೇಟ್ಸ್ ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿದೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಪ್ರಕಾಶ್ ರಾಜ್, “ಮೇಘ್ ಅಪ್ಡೇಟ್ಸ್ ಈ ಪೋಸ್ಟರ್ ಮಾಡಿರುವುದು ನೀವೇ ಆಗಿದ್ದರೆ ಅಥವಾ ಬೇರೆ ಯಾರಾದರೂ ಮಾಡಿದ್ದರೆ ಇದು ನಿಮ್ಮ ಹೇಳಿಕೆ ಎಂದು ಬರೆದುಕೊಳ್ಳಿ. ಯಾಕೆಂದರೆ ಇದು ನನ್ನ ಹೇಳಿಕೆಯಲ್ಲ. ನಿಮ್ಮ ಹೇಳಿಕೆಗೆ ನನ್ನ ಹೆಸರನ್ನು ಹಾಕಬೇಡಿ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್
ಅದಾದ ಬಳಿಕ ಬುಧವಾರ ಎಕ್ಸ್ ಪೋಸ್ಟ್ ಮಾಡಿ ಈ ಸುಳ್ಳು ಹೇಳಿಕೆಗಳ ವಿರುದ್ಧ ದೂರು ದಾಖಲಿಸಿರುವುದಾಗಿ ಪ್ರಕಾಶ್ ರಾಜ್ ಹೇಳಿದ್ದಾರೆ.
“ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳಿಂದ ನನ್ನ ಬಗ್ಗೆ ತಪ್ಪು ಮಾಹಿತಿ ಮತ್ತು ಸುಳ್ಳು ಹೇಳಿಕೆಗಳನ್ನು ಹರಡಿರುವ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ಕಾನೂನು ಈಗ ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ. ಈ ದ್ವೇಷದ ರಾಜಕಾರಣ ಮತ್ತು ವಾಟ್ಸಪ್ ಮತಾಂಧತೆಯು ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ, ಸತ್ಯವನ್ನು ಮಾತನಾಡುವುದನ್ನು ತಡೆಯಲೂ ಸಾಧ್ಯವಿಲ್ಲ” ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.
In regards to the recent misinformation and false statements attributed to me by certain social media accounts, I have lodged a complaint with the police. The law will take its own course now. This hate politics .. and whatsup bigotry can not silence my Voice… nor stop me from… https://t.co/6XJsz70pCE
— Prakash Raj (@prakashraaj) August 28, 2024
