ಚಿಕ್ಕಬಳ್ಳಾಪುರ | ನಗರಸಭೆ ಚುನಾವಣೆ: ಧನದಾಹಕ್ಕೆ ಸೋತ ಕಾಂಗ್ರೆಸ್ ಸದಸ್ಯರು; ಬಿಜೆಪಿಗೆ ಗರಿಷ್ಠ ಮತ

Date:

Advertisements

ಕುತೂಹಲಕಾರಿ ಬೆಳವಣಿಗೆಗಳ ನಡುವೆ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯು ಗುರುವಾರ ಮಧ್ಯಾಹ್ನ ಅಂತ್ಯ ಕಂಡಿತು. ದನದಾಹಕ್ಕೆ ಸೋತ ಕಾಂಗ್ರೆಸ್‌ ಸದಸ್ಯರಿಂದ, ಗರಿಷ್ಠ ಮತ ಪಡೆದ ಬಿಜೆಪಿಯು ‘ಅನಧಿಕೃತ ಜಯ’ವನ್ನು ಸಂಭ್ರಮಿಸಿತು.

ಕಾಂಗ್ರೆಸ್‌ನ 6 ಮಂದಿ ಸದಸ್ಯರು ಬಿಜೆಪಿಗೆ ಬೆಂಬಲ ಸೂಚಿಸಿದ್ದರಿಂದ, ಬಿಜೆಪಿಯ 9 ಮಂದಿ, 3 ಜನ ಪಕ್ಷೇತರರು ಮತ್ತು ಸಂಸದ ಕೆ.ಸುಧಾಕರ್‌ ಸೇರಿ ಬಿಜೆಪಿಯ ಗಜೇಂದ್ರ ಒಟ್ಟು 19 ಮತಗಳನ್ನು ಪಡೆದರು. ಉಪಾಧ್ಯಕ್ಷ ಜೆ.ನಾಗರಾಜು 20 ಮತಗಳನ್ನು ಪಡೆದರು.

ಜೆಡಿಎಸ್‌ ಇಬ್ಬರು ಸದಸ್ಯರು, ಒಬ್ಬ ಪಕ್ಷೇತರ ಸದಸ್ಯ, ಕಾಂಗ್ರೆಸ್‌ನ 10 ಮಂದಿ ಸದಸ್ಯರು, ಶಾಸಕ ಪ್ರದೀಪ್‌ ಈಶ್ವರ್‌, ಎಂ.ಎಲ್.ಸಿಗಳಾದ ಅನಿಲ್‌ ಕುಮಾರ್‌ ಹಾಗೂ ಸೀತಾರಾಮ್‌ ಸೇರಿ ಕಾಂಗ್ರೆಸ್‌ನ ಅಂಬರೀಶ್ 16 ಮತಗಳನ್ನು ಪಡೆದರು. ಉಪಾದ್ಯಕ್ಷೆ ಮೀನಾಕ್ಷಿ ವೆಂಕಟೇಶ್‌ 15 ಮತ ಪಡೆದರು.

Advertisements

ಫಲಿತಾಂಶ ಘೋಷಣೆ ಇಲ್ಲ

ಇತ್ತೀಚೆಗಷ್ಟೇ ಮತದಾರರ ಪಟ್ಟಿಗೆ ಸೇರಿರುವ ಎಂ.ಎಲ್.ಸಿಗಳಾದ ಅನಿಲ್‌ ಕುಮಾರ್‌ ಹಾಗೂ ಸೀತಾರಾಮ್‌ ಅವರ ಮತದಾನ ಹಕ್ಕನ್ನು ಪ್ರಶ್ನಿಸಿ ಬಿಜೆಪಿ ಸದಸ್ಯ ಆನಂದ್‌ ರೆಡ್ಡಿ ಹೈಕೋರ್ಟ್‌ ಮೆಟ್ಟಿಲೇರಿರುವ ಹಿನ್ನೆಲೆ ಚುನಾವಣಾ ಫಲಿತಾಂಶ ಘೋಷಣೆಯಾಗಿಲ್ಲ. ಚುನಾವಣೆಯ ಮತದಾನ ಪ್ರಕ್ರಿಯೆಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದು, ಕೋರ್ಟ್‌ ಅಂತಿಮ ತೀರ್ಪಿನ ಬಳಿಕವಷ್ಟೇ ಫಲಿತಾಂಶ ನಿರ್ಧಾರವಾಗಲಿದೆ ಎಂದು ಚಿಕ್ಕಬಳ್ಳಾಪುರ ನಗರಸಭೆ ಚುನಾವಣಾಧಿಕಾರಿ ಅಶ್ವಿನ್‌ ತಿಳಿಸಿದ್ದಾರೆ.

ಸಂಸದ ಡಾ.ಕೆ.ಸುಧಾಕರ್‌ ಕೋವಿಡ್‌ ಕಳ್ಳ

ನಗರಸಭೆ ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರ ನಗರ ಶಾಸಕ ಪ್ರದೀಪ್‌ ಈಶ್ವರ್‌, ನನ್ನನ್ನ ಸುಧಾಕರ್‌ ಅಷ್ಟೇ ಅಲ್ಲ ಅವರಪ್ಪ ಬಂದ್ರೂ ಏನೂ ಮಾಡೋಕಾಗಲ್ಲ. ಸಂಸದ ಡಾ.ಕೆ.ಸುಧಾಕರ್‌ ಕೋವಿಡ್‌ ಕಳ್ಳ. ಆತನನ್ನು ಒಳಗೆ ಕಳಿಸಿಯೇ ತೀರುತ್ತೇನೆ ಎಂದು ಕೆಂಡಾಮಂಡಲರಾದರು.

ಬಿಜೆಪಿ3

ಪೊಲೀಸರಿಗೆ ತರಾಟೆ

ಬಿಜೆಪಿ ನಗರಸಭಾ ಸದಸ್ಯರನ್ನು ಹೊತ್ತು ದಾರ್ಜಿಲಿಂಗ್‌ ಪ್ರವಾಸ ತೆರಳಿದ್ದ ಬಸ್‌ ಗುರುವಾರ ಮಧ್ಯಾಹ್ನದ ವೇಳೆಗೆ ನಗರಸಭೆ ಕಾರ್ಯಾಲಯ ತಲುಪಿತು. ಈ ವೇಳೆ ನಗರಸಭೆ ಆವರಣದಲ್ಲಿದ್ದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಅವರನ್ನು ಕಂಡ ಸಂಸದ ಡಾ.ಕೆ.ಸುಧಾಕರ್‌ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ನಗರಸಭಾ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರೂ ಇರುವಂತಿಲ್ಲ. ನಿಷೇಧ ಹೇರಿದ್ದರೂ ಹೇಗೆ ಬಂದರು. ನಾವು ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಅಧಿಕಾರಿಗಳ ವಿರುದ್ಧ ಸಿಟ್ಟಾದರು. ಬಳಿಕ ಚುನಾವಣಾಧಿಕಾರಿ ಅಶ್ವಿನ್‌ ಅವರು 1.20ಗಂಟೆಯೊಳಗೆ ಕೋರಂ ಇಲ್ಲದಿದ್ದರೆ ಚುನಾವಣೆ ಮುಂದೂಡುವುದಾಗಿ ತಿಳಿಸಿದರು. ಆನಂತರ ಬಿಜೆಪಿ ಸದಸ್ಯರು ಒಳಗಡೆ ತೆರಳಿ ಮತದಾನದಲ್ಲಿ ಪಾಲ್ಗೊಂಡರು.

ವಿಪ್‌ ಅಡ್ಡಿ, ಹೈಡ್ರಾಮ

ನಗರಸಭೆ ಆವರಣಕ್ಕೆ‌ ಬಸ್‌ನಲ್ಲಿ ಬಂದಿಳಿದ ಕಾಂಗ್ರೆಸ್ ಸದಸ್ಯರಿಗೆ ವಿಪ್‌ ನೀಡಲು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮುಂದಾದರು. ಈ ವೇಳೆ ಸಂಸದ ಸುಧಾಕರ್‌ ಕಾಂಗ್ರೆಸ್‌ ಮುಖಂಡರು ಇಲ್ಲಿರುವಂತಿಲ್ಲ. ಇದು ಕಾನೂನು ಬಾಹಿರ ಎಂದು ವಿಪ್‌ ನೀಡಲು ಅಡ್ಡಿಪಡಿಸಿದ ಪ್ರಸಂಗ ನಡೆಯಿತು. ಈ ವೇಳೆ ಬಿಜೆಪಿ ಸದಸ್ಯರು, ಕಾಂಗ್ರೆಸ್‌ ಮುಖಂಡರೊಂದಿಗೆ ತಳ್ಳಾಟ ನೂಕಾಟಗಳ ಹೈಡ್ರಾಮವೂ ನಡೆಯಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X