ಮಂಡ್ಯ | ಕುಲಾಂತರಿ ಆಹಾರ ತಿರಸ್ಕರಿಸಲು ಆಗ್ರಹಿಸಿ ಮಳವಳ್ಳಿಯಲ್ಲಿ ರೈತರ ಪ್ರತಿಭಟನೆ

Date:

Advertisements

ಇತ್ತೀಚಿಗೆ ಸುಪ್ರೀಂ ಕೋರ್ಟ್ ಆದೇಶವೊಂದನ್ನು ಹೊರಡಿಸಿದ್ದು, ಅದು ಕುಲಾಂತರಿ ಆಹಾರವನ್ನು ಮಾರುಕಟ್ಟೆಗೆ ಬಿಡುವ ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರಕ್ಕೆ ದಾರಿಯನ್ನು ಸುಳಿವು ಮಾಡಿಕೊಟ್ಟಿದೆ. ಈ ವ್ಯವಸ್ಥೆ ನಮ್ಮ ಒಕ್ಕೂಟದ ಹವಾಮಾನಕ್ಕೆ ಒಗ್ಗುವ, ವೈಪರೀತ್ಯಗಳಿಗೆ ಹೊಂದಿಕೊಳ್ಳುವ ಗುಣದ ಸಾವಯವ ಕೃಷಿ ಪದ್ಧತಿಗೆ ವಿರುದ್ಧವಾಗಿದೆ. ಇದನ್ನು ನಾವು ಒಗ್ಗಟ್ಟಾಗಿ ತಡೆಯಲೇ ಬೇಕು ಎಂದು ಸಾವಯವ ಕೃಷಿಕರ ಸಂಘದ ಮಳವಳ್ಳಿ ಅಧ್ಯಕ್ಷ ಎಂ ಎನ್ ಮಹೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಅವರು ಕುಲಾಂತರಿ ಕಾನೂನುಗಳಿಂದ ಆಗುವ ದುಷ್ಪರಿಣಾಮದ ಬಗ್ಗೆ ತಿಳಿಸಲು ಸೆ. 26ರ ಗುರುವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ತುಮಕೂರು ಜಿಲ್ಲೆ ದೊಡ್ಡ ಹೊಸೂರು ಗ್ರಾಮದ ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ನಾಲ್ಕು ದಿನಗಳ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ನಮ್ಮ ತಳಿಗಳು, ನಮ್ಮ ಪದ್ಧತಿ ನಾಶವಾಗುವ ಪರಿಸ್ಥಿತಿ ತಲೆ ದೊರಿದೆ. ಕುಲಾಂತರಿ ತಳಿಯ ಆಹಾರಗಳನ್ನು ತಿರಸ್ಕರಿಸಿ ಹೋರಾಟ ಮಾಡುವ ಸಲುವಾಗಿ ಮಂಡ್ಯ ಜಿಲ್ಲೆಯ ವತಿಯಿಂದ ಇದೇ ತಿಂಗಳ 29ನೇ ತಾರೀಕು ಭಾನುವಾರ ಸತ್ಯಾಗ್ರಹ ಆಯೋಜಿಸಲಾಗಿದೆ. ಈ ಒಂದು ಕಾನೂನು ರೈತರಿಗೆ ಮರಣ ಶಾಸನವಾಗಿರುವುದರಿಂದ ತೀವ್ರ ಪ್ರತಿಭಟನೆ ಮಾಡುವ ಮೂಲಕ ಈ ಕಾನೂನನ್ನು ರದ್ದುಗೊಳಿಸುವ ಮಹತ್ಕಾರ್ಯಕ್ಕೆ ರೈತರು ಕೈಜೋಡಿಸುವಂತೆ ಮನವಿ ಮಾಡಿದರು.

Advertisements

ಮಳವಳ್ಳಿ ತಾಲೂಕು ಪಂಚಾಯಿತಿ ಆವರಣದಿಂದ ಮೆರವಣಿಗೆ ಮೂಲಕ ಹೊರಟು ಅನಂತರಾಮ ಸುತ್ತಿನ ಬಳಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿಗೆ ತೆರಳಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಂಪೂರ್ಣ ಸಾವಯವ ಕೃಷಿಕ ಮುಖಂಡರುಗಳಾದ ನಂಜೇಗೌಡ್ರು ಬಿ ಎಂ ಭಾರತಿ ಕಾಲೇಜು ಕಾರ್ಯದರ್ಶಿ, ಚಿಕ್ಕಣ್ಣ ಕಾರ್ಯದರ್ಶಿ, ಗಜೇಂದ್ರ ಖಜಾಂಚಿ, ಡಾ. ಕಪನಿಗೌಡ್ರು, ಶಿವಕುಮಾರ್ ವಡ್ಡರಹಳ್ಳಿ, ನಾಗರಾಜ್ ಹಂಚಿಪುರ, ನಿತೀಶ್ ದುಗ್ಗನಹಳ್ಳಿ , ಕೇಶವಮೂರ್ತಿ, ಶಿವಕುಮಾರ್ ಜೆಸಿಬಿ, ಬೂದ್ನೂರ್ ಬೊಮ್ಮಯ್ಯ ಮಂಡ್ಯ, ಕುಮಾರ್ ನಂದೀಪುರ, ಅಶೋಕ್ ಕ್ಯಾತ್ನಳ್ಳಿ, ದಯಾಶಂಕರ್ ಪುರಸಭೆ ಮಾಜಿ ಅಧ್ಯಕ್ಷರು ರೈತ ಮಹಿಳೆಯರಾದ ಶ್ರೀಮತಿ ಶಾಂತ ಕೃಷ್ಣ ಮೈಸೂರು, ಶ್ರೀಮತಿ ತನುಜ, ಶ್ರೀಮತಿ ಸಿಂಧು ಸಂಘದ ಸದಸ್ಯರುಗಳು ಮತ್ತು ರೈತ ಮುಖಂಡರುಗಳು ಪಾಲ್ಗೊಂಡಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X