ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದನ ಹೊಸಹಳ್ಳಿ ಗ್ರಾಮದ ಗ್ರಾಮ ಸಹಾಯಕ ಶ್ರೀನಿವಾಸ್ ಹಲವು ವರ್ಷಗಳ ಹಿಂದೆ ಅಂತ್ಯೋದಯ ಪಡಿತರ ಚೀಟಿ ಪಡೆದು, ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಂಡಿದ್ದರು. ಈ ಮೂಲಕ ಅವರು ಸರ್ಕಾರವನ್ನು ಮೋಸ ಮಾಡಿದ್ದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಶಿರಸ್ತೇದಾರ ನಟರಾಜ್ ರೆಡ್ಡಿ, ಈ ಘಟನೆ ಕುರಿತು ಕ್ರಮ ಕೈಗೊಂಡಿದ್ದು, ಅಂತ್ಯೋದಯ ಪಡಿತರ ಚೀಟಿಯನ್ನು ರದ್ದುಪಡಿಸಿದ್ದಾರೆ. ಆದರೆ, ಈ ಅವಧಿಯವರೆಗೆ ಶ್ರೀನಿವಾಸ್ ಪಡೆದ ಸರ್ಕಾರಿ ಸೌಲಭ್ಯಗಳ ಕುರಿತು ಯಾವುದೇ ರೀತಿಯ ಶಿಕ್ಷೆ ಅಥವಾ ದಂಡ ವಿಧಿಸದೆ ಈ ಪ್ರಕರಣವನ್ನು ಸದ್ದಿಲದೇ ಮುಗಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಾಮಾನ್ಯ ಜನರು ಇಂತಹ ತಪ್ಪುಗಳನ್ನು ಮಾಡಿದ್ದರೆ, ಅವರನ್ನು ಕಠಿಣವಾಗಿ ಶಿಕ್ಷೆಗೊಳಪಡಿಸುತ್ತಾರೆ ಎಂಬುದು ಬಹುತೇಕ ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಪ್ರಕರಣದಲ್ಲಿ ವಿಶೇಷ ದಾಖಲಾತಿಗಳಿಲ್ಲದೇ ಹೀಗೆ ಮಾಡಿರುವುದು, ಅಧಿಕಾರಿಗಳು ಶ್ರೀನಿವಾಸ್ ಅವರನ್ನು ಏಕೆ ಸುಮ್ಮನೆ ಬಿಡುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಇದೇ ವಿಚಾರವಾಗಿ ಕೆಆರ್ ಎಸ್ ಪಕ್ಷದ ಮುಖಂಡ ಅಬ್ದುಲ್ ಖಯ್ಯೂಮ್ ಪ್ರಾಮಾಣಿಕ ಪ್ರಯತ್ನ ಮಾಡಿ, ಸುದ್ದಿ ಬಯಲಿಗೆಳೆದಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ.
ಇದನ್ನು ಓದಿದ್ದೀರಾ? ಉಡುಪಿ | ಇತರ ಧರ್ಮದ ಬೋಧನೆ ತಿಳಿದುಕೊಂಡಾಗ ಗೌರವ ಹುಟ್ಟುತ್ತದೆ: ಫಾದರ್ ಡೆನ್ನಿಸ್ ಡೇಸಾ
ಇನ್ನೂ ಅಧಿಕಾರಿಯಾಗಿ ಸರ್ಕಾರಿ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದರೂ, ಪಡಿತರ ಚೀಟಿಯಲ್ಲಿ ಸದಸ್ಯರನ್ನು ಸೇರಿಸಿದ ಅಧಿಕಾರಿ ಇದನ್ನು ಗಮನಿಸಿಲ್ವಾ ಅಥವಾ ಯಾರೂ ಇದರ ಬಗ್ಗೆ ಮಾತನಾಡುವುದಿಲ್ಲ ಎಂದು ಬೇಜವಾಬ್ದಾರಿ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
