ಬೆಳಗಾವಿ | ʼಶರಣರ ಶಕ್ತಿʼ ಚಿತ್ರದ ಪ್ರದರ್ಶನ ತಡೆ ಹಿಡಿಯಲು ಆಗ್ರಹ

Date:

Advertisements

ನಿರ್ಮಾಪಕಿ ಆರಾಧನಾ ಕುಲಕರ್ಣಿ ಹಾಗೂ ದಿಲೀಪ ಶರ್ಮಾ ನಿರ್ದೇಶಕದಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ಶರಣರ ಬಗ್ಗೆ ತಪ್ಪು ಸಂದೇಶಗಳನ್ನು ಬಿಂಬಿಸಲಾಗಿದ್ದು, ಕೂಡಲೇ ʼಶರಣರ ಶಕ್ತಿʼ ಚಿತ್ರ ಪ್ರದರ್ಶನ ತಡೆ ಹಿಡಿಯಬೇಕು ಎಂದು ಬೆಳಗಾವಿ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಆಗ್ರಹಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಶರಣರ ಶಕ್ತಿʼ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಅದರಲ್ಲಿ ಶರಣರ ಬಗ್ಗೆ ಸತ್ಯ ಸಂಗತಿಗೆ ವಿರುದ್ಧವಾದ ಸನ್ನಿವೇಶಗಳಿವೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಅದರಲ್ಲಿ ಶರಣರ ಬಗ್ಗೆ ಅವಹೇಳನಕಾರಿಯಾದ ಮತ್ತು ಸತ್ಯಸಂಗತಿಗೆ ವಿರುದ್ಧವಾದ ಸನ್ನಿವೇಶಗಳಿವೆ. ಬಸವಣ್ಣ ಅವರನ್ನು ಖಡ್ಗದಿಂದ ಸಂಹಾರ ಮಾಡುವ ಸನ್ನಿವೇಶವಿದೆ. ಅಕ್ಕನಾಗಮ್ಮನವರ ವೈವಾಹಿಕ ಜೀವನ ಚರಿತ್ರೆ ತಿರುಚಲಾಗಿದೆ ಹಾಗೂ ಜಂಗಮರನ್ನು ‘ಪುಂಡಜಂಗಮ’ ಎಂದು ಜರಿಯಲಾಗಿದೆʼ ಎಂದು ಕಿಡಿಕಾರಿದರು.

ʼ30-35 ಸೆಕೆಂಡುಗಳ ಟ್ರೇಲರಿನಲ್ಲಿನಲ್ಲಿಯೇ ಇಷ್ಟೊಂದು ತಪ್ಪುಗಳಿರಬೇಕಾದರೆ ಚಿತ್ರದುದ್ದಕ್ಕೂ ಇನ್ನೆನು ಗಂಡಾಂತರಕಾರಿಯಾದ ಸನ್ನಿವೇಶ, ಸಂಭಾಷಣೆಗಳಿರಬಹುದೆಂಬ ಆತಂಕ ಲಿಂಗಾಯತರಲ್ಲಿ ಹುಟ್ಟುಹಾಕಿದೆ. ಇದು ಲಿಂಗಾಯತರ ಭಾವನೆಗಳಿಗೆ ದಕ್ಕೆ ತರುತ್ತವೆ. ಒಂದು ಧರ್ಮವನ್ನು ಅವಹೇಳನ ಮಾಡುವುದು ಕಾನೂನು ಬಾಹಿರ ಮಾತ್ರವಲ್ಲದೇ, ಭಾರತ ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆʼ ಎಂದರು.

Advertisements

ಇದನ್ನೂ ಓದಿ ಬೆಳಗಾವಿ | ಬೆಳ್ಳುಳ್ಳಿ ಬೆಳೆಗೆ ಉತ್ತಮ ಬೆಲೆ; ರೈತರ ಮುಖದಲ್ಲಿ ಮಂದಹಾಸ

ಕರ್ನಾಟಕ ಸರಕಾರ ವಿಶ್ವ ಗುರುಬಸವಣ್ಣನವರನ್ನು ʼಸಾಂಸ್ಕೃತಿಕ ನಾಯಕʼ ನೆಂದು ಘೋಷಿಸಿ ತನ್ನನ್ನು ತಾನೇ ಗೌರವಿಸಿಕೊಂಡಿದೆ. ಅವರ ಆದರ್ಶವನ್ನು ಕೊಂಡಾಡಬೇಕಾದ ದಿನಗಳಲ್ಲಿ ಶರಣರ ಬಗ್ಗೆ ತಪ್ಪು ಸಂದೇಶ ನೀಡುವುದು ಅಕ್ಷಮ್ಯವಾಗಿದೆʼ ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

Download Eedina App Android / iOS

X