ಗುಬ್ಬಿ | ರಾಷ್ಟ್ರೀಯ ಹೆದ್ದಾರಿಯಿಂದ ತೋಟಗಳಿಗೆ ಹರಿದ ಮಳೆ ನೀರು : ಬೆಳೆ ನಷ್ಟಕ್ಕೆ ಪ್ರಾಧಿಕಾರ ಹೊಣೆ ಎಂದ ಸ್ಥಳೀಯ ರೈತರು

Date:

Advertisements

ಕಳೆದ ಹದಿನೈದು ವರ್ಷದಿಂದ ನಡೆದಿರುವ ರಾಷ್ಟ್ರೀಯ ಹೆದ್ದಾರಿ 206 ರ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಪತ್ರೆ ಮತ್ತಿಘಟ್ಟ ಗ್ರಾಮದ ಬಳಿ ನೂರಾರು ವರ್ಷದ ರಾಜಕಾಲುವೆ ಮುಚ್ಚಿ ಸರಾಗವಾಗಿ ಹರಿಯುತ್ತಿದ್ದ ಮಳೆ ನೀರು ನೇರ ರೈತರ ತೋಟಕ್ಕೆ ಹರಿಬಿಟ್ಟಿರುವುದು ಪ್ರಾಧಿಕಾರದ ಅವೈಜ್ಞಾನಿಕ ಕೆಲಸಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪತ್ರೆ ಮತ್ತಿಘಟ್ಟ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಮಾಜಿ ಸದಸ್ಯ ಪತ್ರೆ ದಿನೇಶ್ ಮಾತನಾಡಿ ನೀರು ಕುಡಿದ ತೆಂಗು ಅಡಿಕೆ ಮರಗಳು ಫಲ ನೀಡದೆ ತನ್ನ ಬಣ್ಣ ಬದಲಿಸುತ್ತಿದೆ. ಕೊಳೆತು ಬೀಳುವ ಮರಗಳು ಸಾಕಿ ಸಲಹಿದ ರೈತರ ನೋವು ಅಧಿಕಾರಿಗಳಿಗೆ ಅರ್ಥ ಆಗುವುದಿಲ್ಲ. ಲಕ್ಷಾಂತರ ರೂ ಬೆಲೆಯ ಗೊಬ್ಬರ ಚೆಲ್ಲಿದ ರೈತ ಕೈಚೆಲ್ಲಿ ಕೂರುವ ದುಸ್ಥಿತಿ ತಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ, ತಾಲ್ಲೂಕು ಆಡಳಿತಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಈ ಬಗ್ಗೆ ಹಲವು ಬಾರಿ ದೂರು ನೀಡಿದರು ಪ್ರಯೋಜವಾಗಿಲ್ಲ. ಶಾಸಕರು, ಜಿಲ್ಲಾ ಸಚಿವರು, ಕೇಂದ್ರ ಸಚಿವರು ಇತ್ತ ಗಮನ ಹರಿಸಿ ರೈತರ ಬೆಳೆ ಉಳಿಸಿ ಎಂದು ಒತ್ತಾಯಿಸಿದರು.

ಹೊದಲೂರು ಕೆರೆಗೆ ಮಳೆ ನೀರು ಹರಿಯುವ ರಾಜಕಾಲುವೆ ಮುಚ್ಚಿದ ಪರಿಣಾಮ ಸುಮಾರು ನಾಲ್ಕು ಗ್ರಾಮದಿಂದ ಹರಿಯುವ ಮಳೆ ನೀರು ನೇರ ಪತ್ರೆ ಮತ್ತಿಘಟ್ಟ ಗ್ರಾಮದ ರೈತರ ಜಮೀನಿಗೆ ನುಗ್ಗಿದೆ. ಹೆದ್ದಾರಿ ಪಕ್ಕ ಗ್ರಾಮಕ್ಕೆ ಸಿದ್ಧಪಡಿಸಿದ ಸಿಸಿ ರಸ್ತೆ ಕೂಡಾ ಕಳಪೆ ಕಾಮಗಾರಿಯಾಗಿದೆ. ರಸ್ತೆ ಕೆಳಭಾಗದಲ್ಲಿ ಮಣ್ಣು ಕಸಿದು ಕಾಂಕ್ರೀಟ್ ಮಾತ್ರ ಉಳಿದಿದೆ. ರಸ್ತೆ ಪಕ್ಕದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಅರ್ಧಕ್ಕೆ ನಿಲ್ಲಿಸಿದ ಪರಿಣಾಮ ಮಳೆ ನೀರು ನೇರ ಪಕ್ಕದ ತೋಟಕ್ಕೆ ನುಗ್ಗಿದೆ. ಸಾವಿರಾರು ತೆಂಗು, ಅಡಿಕೆ ಮರಗಳ ಸುತ್ತ ನಾಲ್ಕು ಅಡಿಗಳಷ್ಟು ನೀರು ಆವೃತವಾಗಿದೆ ಎಂದು ಸ್ಥಳೀಯ ರೈತ ನಂಜುಂಡಪ್ಪ ಕಿಡಿಕಾರಿದರು.

Advertisements
1000508004

ಹೆದ್ದಾರಿ ಪೂರ್ಣಗೊಳ್ಳುವ ಮುನ್ನ ಸಿಸಿ ರಸ್ತೆಯನ್ನು ಬಳಸುವ ಬೃಹತ್ ವಾಹನಗಳು ಈಗಾಗಲೇ ಇಲ್ಲಿ ಸಂಚರಿಸುತ್ತಿವೆ. ಮಣ್ಣು ಕಸಿದು ಕಾಂಕ್ರೀಟ್ ರಸ್ತೆ ಟೊಳ್ಳು ರೀತಿ ಕಾಣುತ್ತಿದೆ. ಬಾರಿ ವಾಹನ ಬಂದಲ್ಲಿ ಯಾವ ಕ್ಷಣದಲ್ಲಾದರೂ ರಸ್ತೆ ಕಸಿಯುವ ಭೀತಿ ಇಲ್ಲಿದೆ. ಗುಬ್ಬಿ ಹೊರ ವಲಯದ ಈ ಹೆದ್ದಾರಿ ರಸ್ತೆ ಜನರ ಬಳಕೆಗೆ ಬಂದಿದೆ. ಆದರೆ ಕೆಲಸ ಮಾತ್ರ ಪೂರ್ತಿಯಾಗಿಲ್ಲ. ಫ್ಲೈ ಓವರ್ ಸೇತುವೆ ಮೇಲಿನ ರಸ್ತೆಯ ನೀರು ಪೈಪ್ ಲೈನ್ ಮೂಲಕ ತೋಟಕ್ಕೆ ಹರಿ ಬಿಡಲಾಗಿದೆ. ಮಳೆ ಬಂದರೆ ಈ ಗ್ರಾಮದ ಸುತ್ತಲಿನ ಎಲ್ಲಾ ನೀರು ರಸ್ತೆ ಬದಿಯ ಸುಮಾರು ಅರವತ್ತು ಎಕರೆ ಪ್ರದೇಶಕ್ಕೆ ಹರಿದು ಸಾವಿರಾರು ತೆಂಗು ಅಡಿಕೆ ಮರವನ್ನು ಆವರಿಸಿದೆ. ಈ ಹೆದ್ದಾರಿಗೆ ಜಮೀನು ನೀಡಿದ ರೈತರಿಗೆ ಅನ್ಯಾಯ ಮಾಡುವ ಪ್ರಾಧಿಕಾರ ಕೂಡಲೇ ರಾಜಕಾಲುವೆ ಮಾರ್ಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಜೊತೆಗೆ ಅರ್ಧಕ್ಕೆ ನಿಂತ ಬಾಕ್ಸ್ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯ ರೈತರು ತಮ್ಮ ಬೇಡಿಕೆ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ರೈತರಾದ ವಿನಯ್, ದಯಾನಂದ್, ರಮೇಶ್ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

ತುಮಕೂರು | ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ : ಡಿಕೆಶಿ ವಿರುದ್ಧ ಕೆ. ಎನ್ ರಾಜಣ್ಣ ವಾಗ್ದಾಳಿ

ಡಿ.ಕೆ.ಶಿವಕುಮಾ‌ರ್ ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದ ಬಗ್ಗೆ  ಮಾಜಿ ಸಚಿವ ಕೆ...

Download Eedina App Android / iOS

X