ಶಿಗ್ಗಾಂವ ಬಸ್ ನಿಲ್ದಾಣದ ಶೌಚಾಲಯವನ್ನು ಸ್ವಚ್ಛತೆ ಮಾಡುವ ಕುರಿತು ಹಲವಾರು ಬಾರಿ ಸಂಬಂದಪಟ್ಟ ಡಿಪೋ ವ್ಯವಸ್ಥಾಪಕರಿಗೆ ಮೌಖಿಕವಾಗಿ ಮತ್ತು ಲಿಖಿತ ರೂಪದಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಕರವೇ ಗಜಪಡೆ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠ ಅಸಮಧಾನ ವ್ಯಕ್ತಪಡಿಸಿದರು.
ಶಿಗ್ಗಾಂವ ಬಸ್ ನಿಲ್ದಾಣವನ್ನು ಸ್ವಚ್ಚಗೊಳಿಸಿ, ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜಪಡೆ ಕಾರ್ಯಕತೃರು ಪ್ರತಿಭಟನೆ ನಡೆಸಿ, ಸವನೂರು ಡಿಪೋ ಮ್ಯಾನೇಜರ ಕೆ ಬಿ ಅಮ್ಮನಗಿ ಅವರಿಗೆ ಮನವಿ ಸಲ್ಲಿಸಿ, ಜಿಲ್ಲಾಧ್ಯಕ್ಷ ಮಾತನಾಡಿದರು.
“ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸ ಪ್ಲಾಸ್ಟಿಕ್ ಬಿದ್ದಿದೆ. ವಿಕಲಚೇತನರ ಶೌಚಾಲಯ, ಸಾರ್ವಜನಿಕ ಶೌಚಾಲಯ ಸ್ವಚ್ಚತೆಯಿಂದ ಮರೀಚಿಕೆಯಾಗಿದೆ. ಇಂದಿರಾ ಕ್ಯಾಂಟೀನ ಕಾಮಗಾರಿ ಅಪೂರ್ಣಗೊಂಡದೆ. ಇದರಿಂದ ದಾರಿಹೋಕರು ಬಹಿರ್ದೆಸೆಗೆ ಹೋಗುತ್ತಾರೆ. ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಆದಷ್ಟು ಬೇಗ ಸರಿಪಡಿಸಬೇಕು. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಬಸ್ ನಿಲ್ದಾಣಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಒಂದು ವೇಳೆ ಈ ಕ್ರಮ ಕೈಗೊಳ್ಳದಿದ್ದರೆ ಬಸ್ ನಿಲ್ದಾಣದ ಎದುರಿಗೆ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ. ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕೆಆರ್ಎಸ್ ಅಣೆಕಟ್ಟೆಯ ಹಳೆಯ ಕ್ರಸ್ಟ್ಗೇಟ್ ಕಡಿಮೆ ಬೆಲೆಗೆ ಮಾರಾಟ: ರೈತ ಮುಖಂಡರ ಆರೋಪ
ಈ ಸಂದರ್ಬದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಗಂಗಾಧರಯ್ಯಾ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಯುಸೂಫ ಸೈಕಲಗಾರ, ಪ್ರಾಧಾನ ಕಾರ್ಯದರ್ಶಿ ಪ್ರಕಾಶ ಪರಪ್ಪಗೌಡ್ರ, ತಾಲೂಕ ಅಧ್ಯಕ್ಷ ಶಂಕರ ಬಡಿಗೇರ, ರಟ್ಟಿಹಳ್ಳಿ ತಾಲೂಕ ಅಧ್ಯಕ್ಷ ರಾಮಚಂದ್ರಪ್ಪ ಹಿಂಡಸಗಟ್ಟಿ, ರಟ್ಟಿಹಳ್ಳಿ ತಾಲೂಕ ಯುವ ಘಟಕದ ಅಧ್ಯಕ್ಷರು ಕಲಂದರ ಯಲದಹಳ್ಳಿ, ಜಾಫರ ಕುಡುಪಲ್ಲಿ, ತಡಸ ಗ್ರಾ ಘ ಅಧ್ಯಕ್ಷ ದಾವಲಸಾಬ ಸಿಕಂಧರ, ವಿನಾಯಕ ರೇವಣಕರ, ನಾಸೀರಖಾನ ಪಾಟೀಲ, ರಾಮಣ್ಣ ಕಮ್ಮಾರ, ಮಹಾವೀರ ಹಳ್ಳಿಯವರ, ಅದ್ದುಸಾಬ ಕೊಲ್ಲಾಪೂರ, ಮೌಲಾಲಿ ಹುಚುಸಾಬನ್ನವರ ಸೇರಿದಂತೆ ಉಪಸ್ಥಿತರಿದ್ದರು.
