ಗುಬ್ಬಿ | ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದು ಶ್ರದ್ಧಾಂಜಲಿ ಸಲ್ಲಿಸಿದ ಅಭಿಮಾನಿಗಳು

Date:

Advertisements

ವಿಶ್ವ ವಿಖ್ಯಾತಿ ಉದ್ಯಮಿ ಪದ್ಮವಿಭೂಷಣ ಡಾ.ರತನ್ ನಾವಲ್ ಟಾಟಾ ಅವರ ನಿಧನ ಉದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಉದ್ಯಮ ಲೋಕದ ಸಾಮ್ರಾಟ ರತನ್ ಟಾಟಾ ಅವರ ಇಹಲೋಕ ಯಾತ್ರೆಗೆ ಸಂತಾಪ ಸೂಚಿಸಿದ ಗುಬ್ಬಿ ಪಟ್ಟಣದ ಅಭಿಮಾನಿಗಳ ತಂಡ ರತನ್ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಗುಬ್ಬಿ ಪಟ್ಟಣದ ಸರ್ಕಲ್ ಬಳಿ ರತನ್ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಅಭಿಮಾನಿಗಳು ಭಾರತ ಮಾತೆಯ ಹೆಮ್ಮೆಯ ಪುತ್ರ ಘೋಷಣೆ ಕೂಗಿದರು. ಎರಡು ನಿಮಿಷಗಳ ಕಾಲ ಮೌನಚರಿಸಿ ಟಾಟಾ ಅವರ ಸಾಧನೆ ಕುರಿತು ಗಣ್ಯರು ನುಡಿ ನಮನ ಕೂಡಾ ಸಲ್ಲಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ ಮಾತನಾಡಿ ಉದ್ಯಮದ ನಾನಾ ಮಜಲುಗಳಲ್ಲಿ ಸಾರ್ವಭೌಮ ಸಾಧಿಸಿದ ರತನ್ ಟಾಟಾ ಬಾಲ್ಯದಲ್ಲಿ ಸಾಕಷ್ಟು ನೋವುಂಡು ಗೆದ್ದು ಸಾಧಿಸಿದವರು. ಟಾಟಾ ಪ್ರಾಡೆಕ್ಟ್ ಇಂದಿಗೂ ವಿಶ್ವ ವ್ಯಾಪಿಸಿದ ಬ್ರಾಂಡ್ ಎನಿಸಿದೆ. ದೇಶದ ಕೈಗಾರಿಕಾ ವಲಯ ಮುಂದುವರೆಯಲು ಟಾಟಾ ಕುಟುಂಬದ ಶ್ರಮ ಸ್ಮರಣೀಯ. ಇಂತಹ ಭಾರತದ ಹೆಮ್ಮೆಯ ಪುತ್ರನ ನಿಧನ ಇಡೀ ದೇಶಕ್ಕೆ ನಷ್ಟ ಎಂದು ಸಂತಾಪ ಸೂಚಿಸಿದರು.

Advertisements

ಇದೇ ಸಂದರ್ಭದಲ್ಲಿ ಟಾಟಾ ಅಭಿಮಾನಿಗಳಾದ ಸಿ.ಆರ್.ಶಂಕರ್ ಕುಮಾರ್, ಪ್ರಮೋದ್, ಜಿ.ಆರ್.ರಮೇಶ್, ಅರ್ಜುನ್, ಜಿ.ಎಸ್.ಮಂಜುನಾಥ್, ಮಧು, ಜಿ.ಎಲ್.ರಂಗನಾಥ್, ವಿರೂಪಾಕ್ಷ, ಆಟೋಮೊಬೈಲ್ ಶ್ರೀನಿವಾಸ್, ಜಿ.ಸಿ.ರಾಕೇಶ್, ಮಂಜುನಾಥರೆಡ್ಡಿ, ಗುಂಡೂರಾವ್, ಚೇತನ್, ಶಶಿಧರ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X