ಜವಾಬ್ದಾರಿಯುತ ಸರ್ಕಾರ ಹೇಗೆ ನಡೆದುಕೊಳ್ಳಬೇಕು ಎಂಬುದು ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿಲ್ಲ. ಇಷ್ಟು ದಿನದಿಂದ ಪ್ರತಿಭಟನೆ ಮಾಡುತ್ತಿದ್ದೀರಲ್ಲ, ಸಂಬಂಧಿಸಿದ ಸಚಿವರು ಸೌಜನ್ಯಕ್ಕಾದರೂ ಭೇಟಿಯಾಗಿ ಮನವಿ ಸ್ವೀಕರಿಸಿಲ್ಲ. ನಿಮ್ಮ ಸೌಜನ್ಯ ಆಲಿಸದ ದುರಹಂಕಾರ ವರ್ತನೆಯನ್ನು ಯಾರೂ ಕ್ಷಮಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಗದಗ ಪಟ್ಟಣದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಡಿಪಿಆರ್ ಇಲಾಖೆ ನೌಕರರು ಹಾಗೂ ಖಾಸಗಿ ಕಂಪನಿಗಳಲ್ಲಿ ಹಣ ತುಂಬಿ ವಂಚನೆಗೆ ಒಳಗಾದ ಫಲಾನುಭವಿಗಳು ಅಹೋರಾತ್ರಿ ಧರಣಿ ನಡೆಸುತ್ತಿರುವಲ್ಲಿಗೆ ಹೋಗಿ ಮಾತನಾಡಿದರು.
“ಗ್ರಾಮೀಣ ಭಾಗದ ಬೆನ್ನೆಲುಬಾದ ಗ್ರಾಮ ಪಂಚಾಯಿತಿ ನೌಕರರು, ಗ್ರಾಮ ಪಂಚಾಯತ್ ಸದಸ್ಯರು ನ್ಯಾಯಯುತ ಬೇಡಿಕೆಗಾಗಿ ಹೋರಾಟ ಮಾಡುತ್ತಿದ್ದೀರಿ. ಆರ್ಡಿಪಿಆರ್ ಸಚಿವರಿಗೆ ರಾಜ್ಯದ ಎಲ್ಲ ಇಲಾಖೆಯ ಬಗ್ಗೆ ಮೂಗು ತೂರಿಸಲು ಗೊತ್ತಾಗುತ್ತೆ. ಅವುಗಳ ಬಗ್ಗೆ ಚರ್ಚೆ ಮಾಡ್ತಾರೆ. ಜಗತ್ತಿನ ರಾಜಕಾರಣದ ಬಗ್ಗೆ ಮಾತನಾಡ್ತಾರೆ. ಆದರೆ ಅವರ ಇಲಾಖೆಯಲ್ಲಿ ಎಷ್ಟು ಸಮಸ್ಯೆಯಿದೆ. ಬೇಡಿಕೆಗಳು ಸಮಂಜಸ ಇದೆಯೋ, ಇಲ್ಲವೋ, ತಜ್ಞರಿಂದ ಮಾಹಿತಿ ಪಡೆದು ಸ್ಪಂದಿಸುವ ಸೌಜನ್ಯ ತೋರಿಸುತ್ತಿಲ್ಲ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಹಣ ಕಟ್ಟಿಸಿಕೊಂಡು, ಬಡವರಿಗೆ ನಿವೇಶನ ನೀಡಿಲ್ಲ: ಕರವೇ ಗಜಪಡೆ ಆರೋಪ
“ಸಿಎಂ ಹಾಗೂ ಸಂಬಂಧಿಸಿದ ಸಚಿವರು ಈ ಬಗ್ಗೆ ಸಭೆ ಕರೆದು ಮನವಿ ಬಗ್ಗೆ ಚರ್ಚೆ ಮಾಡಿ. ಕೂಲಕುಂಶವಾಗಿ ಪರಿಶೀಲಿಸಿ ಯಾವ ಸಮಸ್ಯೆ ಬಗೆ ಹರಿಸಬಹುದು ಅದರ ಬಗ್ಗೆ ಕ್ರಮ ಕೈಗೊಳ್ಳಿ. ಇಲ್ಲವಾದರೆ ಆರ್ಡಿಪಿಆರ್ ಇಲಾಖೆಯವರು ನಡೆಸುವ ನ್ಯಾಯಬದ್ಧ ಹೋರಾಟಕ್ಕೆ ನಿಮ್ಮ ಬೆಂಬಲವಿದೆ” ಎಂದು ಪ್ರತಿಭಟನಾಕಾರರಿಗೆ ಅಭಯ ನೀಡಿದರು.
ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ ಸಿ ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ಪರಿಷತ್ ಸದಸ್ಯ ಎಸ್ ವಿ ಸಂಕನೂರ, ಜಿಲ್ಲಾಧ್ಯಕ್ಷ ರಾಜು ಕುರುಡಗಿ ಸೇರಿದಂತೆ ಇತರರು ಇದ್ದರು.