ಚಾಮರಾಜನಗರ | ಬುದ್ಧ, ಅಂಬೇಡ್ಕರ್ ಮಾರ್ಗವೇ ನಮಗೆ ಆದರ್ಶವಾಗಬೇಕು: ಸುಭಾಷ್ ಮಾಡ್ರಹಳ್ಳಿ

Date:

Advertisements

ಬುದ್ಧ ಮತ್ತು ಅಂಬೇಡ್ಕರ್ ಮಾರ್ಗವೇ ನಮಗೆ ಆದರ್ಶವಾಗಬೇಕು ಎಂದು ತಕ್ಷಶಿಲ ಬುದ್ದವಿಹಾರ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಸುಭಾಷ್ ಮಾಡ್ರಹಳ್ಳಿ ಹೇಳಿದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಬೋದಿಸತ್ವ ಬೆಟ್ಟದಲ್ಲಿ
ಸೀಗೆ ಹುಣ್ಣುಮೆ ಅಂಗವಾಗಿ ಹಮ್ಮಿಕೊಂಡಿದ್ದ ಬುದ್ದ ವಂದನೆ, ಧಮ್ಮ ಧ್ಯಾನ, ಸಸಿಗಳನ್ನು ನೆಡುವ ಹಾಗೂ ಅನ್ನದಾನ ಕಾರ್ಯಕ್ರಮ ಮಾತನಾಡಿದರು.

“ಬುದ್ದ ಮತ್ತು ಅಂಬೇಡ್ಕರ್ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯುವ ಮಾರ್ಗವೇ ನಮಗೆ ದಾರಿ ದೀಪವಾಗಿದೆ. ಅನ್ಯ ಧರ್ಮಗಳಲ್ಲಿ ಸ್ವಾತಂತ್ರ್ಯ ಮತ್ತು ಸಾಮರಸ್ಯದ ಕೊರತೆಯನ್ನು ಕಾಣಬಹುದು. ಹಾಗೂ ಅನೇಕ ರೀತಿಯ ಮೂಢನಂಬಿಕೆಗಳಿಂದ ಕಂದಾಚಾರಗಳು ಮನೆ ಮಾಡಿವೆ. ಆದರೆ ಬುದ್ದರ ಹಾದಿ ವೈಚಾರಿಕತೆಯಿಂದ ಕೂಡಿದ್ದು, ಸಕಲ ಜೀವರಾಶಿಗಳ ನೆಮ್ಮದಿಯನ್ನು ಬಯಸಿದೆ” ಎಂದರು.

Advertisements

“ಬುದ್ದ ವಂದನೆ, ಧಮ್ಮ ಧ್ಯಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ ನವೀನ್ ಮೌರ್ಯ ಧಮ್ಮ ದಾನ ನೆರವೇರಿಸಿ ಮಾತನಾಡಿ, “ಜಗತ್ತಿಗೆ ಧ್ಯಾನವನ್ನು ಪರಿಚಯಿದವರೇ ಬುದ್ದರಾಗಿದ್ದಾರೆ. ಧ್ಯಾನದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಧೃಢಗೊಳ್ಳುತ್ತದೆ. ಜಗತ್ತಿನಲ್ಲಿರುವ ಸರ್ವ ಜೀವಿಗಳ ಲೇಸನ್ನು(ಒಳ್ಳೆಯದು) ಧಮ್ಮ ನೀಡುತ್ತದೆ.
ಮಾನಸಿಕವಾಗಿ ಆರೋಗ್ಯ, ದೈಹಿಕ ಆರೋಗ್ಯಕ್ಕೆ ಪ್ರೇರಣೆಯಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು: ಡಾ.ಶರಣಬಸವಪ್ಪ ಕ್ಯಾತನೂರ

ಉಪಾಧ್ಯಕ್ಷ ಆರ್ ಸೋಮಣ್ಣ, ಸಹ ಕಾರ್ಯದರ್ಶಿ ಆರ್ ಡಿ ಉಲ್ಲಾಸ್, ಟ್ರಸ್ಟ್ ನಿರ್ದೇಶಕರುಗಳಾದ ಎಂ ಎನ್ ಸಂಪತ್, ಎಂ ಶ್ರೀನಿವಾಸ್, ಮುತ್ತಣ್ಣ, ರಾಜೇಂದ್ರ, ಶಾಂತ್ ಕುಮಾರ್, ಮಂಜುನಾಥ್, ನಾಗಸ್ವಾಮಿ, ಮಲ್ಲೇಶ್, ಶೀರಯ್ಯ, ಜೆ ಸ್ವಾಮಿ, ಶಿವ ಕುಮಾರ್, ದೇಶ ಲಿಂಗು, ರಮೇಶ್ ಹಾಗೂ ಮುದ್ದಯ್ಯ, ಉಪಾಸಕರುಗಳಾದ ಮೂಖಳ್ಳಿ ಗೋಪಾಲ್, ರವಿ ಬಲಚವಾಡಿ ಗಿರೀಶ್, ಕೊಡಸೋಗೆ ಪ್ರಸಾದ್, ಚಿನ್ನಸ್ವಾಮಿ ಬೆಂಡರವಾಡಿ ಹಾಗೂ ಗ್ರಾಮದ ಬೌದ್ಧ ಉಪಾಸಕ ಬಂಧುಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X