ತುರುವೇಕೆರೆ | ನಾಯಿ ಬೊಗಳಿದ್ದಕ್ಕೆ ಮಾಲೀಕನ ಕೈಯನ್ನೇ ಮುರಿದ ಭೂಪ

Date:

Advertisements

ಸಾಕಿದ್ದ ನಾಯಿ ಬೊಗಳಿದ್ದಕ್ಕೆ ಸಿಟ್ಟುಗೊಂಡ ಪಕ್ಕದ ಮನೆಯಾತ ನಾಯಿ ಸಾಕಿದ ಮಾಲೀಕನ ಕೈ ಯನ್ನೇ ಮುರಿದಿರುವ  ಘಟನೆ ತುರುವೇಕೆರೆ ಸಮೀಪದ ಅಪ್ಪಸಂದ್ರದಲ್ಲಿ ನಡೆದಿದೆ. 

 ಅಪ್ಪಸಂದ್ರದ ವೆಂಕಟೇಶ್ (50) ತನ್ನ ಮನೆಯಲ್ಲಿ (ಗುಡಿಸಲು) ಎರಡು ನಾಯಿಗಳನ್ನು ಸಾಕಿದ್ದಾರೆ. ಬುಧವಾರ ರಾತ್ರಿ ನಾಯಿಗಳಿಗೆ ಅನ್ನ ಹಾಕುವ ವೇಳೆ ನಾಯಿಗಳು ಹೆಚ್ಚಾಗಿ ಬೊಗಳಿವೆ. ಇದರಿಂದ ಕೋಪಗೊಂಡ ಪಕ್ಕದ ಮನೆಯಲ್ಲಿರುವ ಶಿವರಾಜ್ ಎಂಬಾತ ವೆಂಕಟೇಶ್ ನ ಮೇಲೆ ಏಕಾಏಕಿ ದೊಣ್ಣೆಯಿಂದ ಮನಸಾ ಇಚ್ಚೆ ಥಳಿಸಿದ್ದಾನೆ. ವೆಂಕಟೇಶ್ ನ ಎಡಗೈಗೆ ಹೆಚ್ಚು ಪೆಟ್ಟು ಬಿದ್ದ ಪರಿಣಾಮ ಆತನ ಎಡಗೈ ಮೂಳೆ ಮುರಿದಿದ್ದು ಕೈ, ಮಾಂಸ ಖಂಡಗಳ ಸಹಾಯದಿಂದ ನೇತಾಡುತ್ತಿದೆ. 

 ಹೆಂಡತಿ ಮಕ್ಕಳು ಇಲ್ಲದೇ  ಅನಾಥನಂತಿರುವ ವೆಂಕಟೇಶ್ ನನ್ನು ಗ್ರಾಮದ ದಯಾನಂದ್ ಸೇರಿದಂತೆ ಇತರರು ಮಾನವೀಯತೆಯಿಂದ ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ ವೆಂಕಟೇಶ್ ನನ್ನು ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಎಡಗೈ ಮೂಳೆ ತುಂಡಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಇಲ್ಲಿನ ವೈದ್ಯರು ಶಿಫಾರಸ್ಸು ಮಾಡಿದ್ದಾರೆ. 

Advertisements

 ಮೊದಲೇ ದುಡಿಯಲೂ ಆಗದ ಸ್ಥಿತಿಯಲ್ಲಿರುವ ಅಸಹಾಯಕನಾಗಿರುವ ಅನಾಥ ವೆಂಕಟೇಶ್ ನ ಸ್ಥಿತಿ ಅತಂತ್ರವಾಗಿದೆ. ಎಡಗೈ ತುಂಡಾಗಿದ್ದು ಚಿಕಿತ್ಸೆ ವೆಚ್ಚವನ್ನೂ ಭರಿಸುವ ಸ್ಥಿತಿಯೂ ಆತನಿಗೆ ಇಲ್ಲ. ಅಲ್ಲದೇ ಅವನ ಚಿಕಿತ್ಸಾ ವೆಚ್ಚವನ್ನು ಭರಿಸಲು ಯಾರೂ ಮುಂದೆ ಬರುತ್ತಿಲ್ಲ.   

 ವೆಂಕಟೇಶ್ ಗೆ ಇರಲು ಸೂರು ಇಲ್ಲ. ಕಟ್ಟಿಕೊಂಡಿರುವ ಗುಡಿಸಲೂ ಸಹ ಇಂದೋ ನಾಳೆಯೋ ಬಿದ್ದು ಹೋಗುವ ಸ್ಥಿತಿಯಲ್ಲಿದೆ. ವೆಂಕಟೇಶ್ ನ ಸಹಾಯಕ್ಕೆ ಯಾರಾದರೂ ಮುಂದೆ ಬರುವರೇ ಕಾದು ನೋಡಬೇಕಿದೆ. 

 ವೆಂಕಟೇಶ್ ನ ಕೈ ಮುರಿದಿರುವ ಶಿವರಾಜ್ ವಿರುದ್ಧ ದಂಡಿನಶಿವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಮುಂದುವರೆಸಿದ್ದಾರೆ. 

ವರದಿ – ಎಸ್. ನಾಗಭೂಷಣ್ ತುರುವೇಕೆರೆ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X