ಯತಿ ನರಸಿಂಹಾನಂದ ಅವರು ಇಸ್ಲಾಂ ಧರ್ಮ ಪ್ರವಾದಿ ಮಹಮ್ಮದ್ ಪೈಗಂಬರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಅವಮಾನ ಮಾಡಿದ್ದು, ಅವರಿಗೆ ಕಾನೂನಿನನ್ವಯ ಕಠಿಣ ಶಿಕ್ಷೆ ಕೊಡಬೇಕು ಎಂದು ತಂಜಮೀಲ್ ಮುಸ್ಲಿಂಮೀನ್ ಫಂಡ್ ಅಸೋಸಿಯೇಷನ್ ಕಾರ್ಯಕರ್ತರು ಒತ್ತಾಯಿಸಿದರು.
ದಾವಣಗೆರೆಯ ತಂಜಮೀಲ್ ಮುಸ್ಲಿಂಮೀನ್ ಫಂಡ್ ಅಸೋಸಿಯೇಷನ್ ನೇತೃತ್ವದಲ್ಲಿ ಧರ್ಮಗುರುಗಳು, ಮೌಲ್ವಿಗಳು, ಮುಸ್ಲಿಂ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಮುಸ್ಲಿಂ ಸಮಾಜದ ಬಾಂಧವರು, ತಂಜೀಮುಲ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ನೀಡಿ ಒತ್ತಾಯಿಸಿದರು.
“ಯತಿ ನರಸಿಂಹಾನಂದ ಸರಸ್ವತಿ ಸ್ವಾಮಿಯವರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ನಿಂದಿಸಿ ಆಹೇಳನ ಮತ್ತು ಪ್ರಚೋದನಕಾರಿ ಭಾಷಣ ಮಾಡಿ ಕೋಮುಭಾವನೆಗೆ ಧಕ್ಕೆ ತರಲು ಪ್ರಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಮಸ್ತ ಮುಸ್ಲಿಂ ಸಮಾಜಕ್ಕೆ ನೋವನ್ನುಂಟುಮಾಡಿದೆ. ಪದೇಪದೆ ಇಂತಹ ಅವಹೇಳನಕಾರಿ ಭಾಷಣ ಮಾಡುತ್ತಿರುವ ನರಸಿಂಹಾನಂದ ಸ್ವಾಮಿಯ ಮೇಲೆ ಯುಎಪಿಎ ಕಾಯಿದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಕಠಿಣ ಶಿಕ್ಷೆ ನೀಡಬೇಕು” ಎಂದು ಮುಖಂಡರು ಒತ್ತಾಯಿಸಿದರು.
“ಯಾವುದೇ ಜಾತಿಯ, ಧರ್ಮದ ವ್ಯಕ್ತಿಯಾಗಲಿ ಯಾವುದೇ ಸಮುದಾಯದ ಧರ್ಮ ಗುರುಗಳ ಹಿರಿಯರ ಬಗ್ಗೆ ಅವಹೇಳನ ಮತ್ತು ಪ್ರಚೋದನಾಕಾರಿ ಭಾಷಣ ಮಾಡುವುದಾಗಲಿ, ನಿಂದಿಸುವುದಾಗಲಿ ಮಾಡಿದರೆ ಅವರು ಯಾವುದೇ ಧರ್ಮದ ಜಾತಿಯ ವ್ಯಕ್ತಿಯಾಗಿದ್ದರೂ, ಆತನ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಲೋಕಸಭಾ ಅಧಿವೇಶನದಲ್ಲಿ ಕಾಯ್ದೆ ಮಂಡಿಸಿ ತೀರ್ಮಾನ ತೆಗೆದುಕೊಳ್ಳಬೇಕು” ಎಂದು ಮುಖಂಡರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಜಾತಿಗಣತಿ ವರದಿ ಬಿಡುಗಡೆಗೆ ಮಾಜಿ ಶಾಸಕ ರಾಜು ಆಲಗೂರ ಆಗ್ರಹ
ಪ್ರತಿಭಟನೆಯಲ್ಲಿ ಅಂಜಿಮಲ್ ಮುಸ್ಲಿಮೀನ್ ಅಂಡ್ ಅಸೋಸಿಯೇಷನ್ ಅಧ್ಯಕ್ಷ ದಾದಾಪೀರ್ ಉಪಾಧ್ಯಕ್ಷ ಅಮ್ಜದುಲ್ಲಾ, ಸೆಕ್ರೆಟರಿ ಶಬೀರ್ ಅಲಿಖಾನ್ ಮತ್ತು ಸದಸ್ಯ ಎ ದಾದಾಪೀರ್, ಮೌಲ್ವಿಗಳಾದ ಹಫೀಝ್ ರಜಾ ಇತರ ಮುಖಂಡರು ಮೌಲಾನಗಳು, ನೂರಾರು ಮಂದಿ ಮುಸ್ಲಿಂ ಸಮುದಾಯದವರು ಇದ್ದರು.