ಚಿತ್ರದುರ್ಗ | ವಿವಿ ಸಾಗರ ಕೋಡಿ ತಗ್ಗಿಸುವ ಹುನ್ನಾರಕ್ಕೆ ಧಿಕ್ಕಾರ: ರೈತ ಸಂಘಟನೆಗಳ ಆಕ್ರೋಶ

Date:

Advertisements

ವಿವಿ ಸಾಗರ ಕೋಡಿಯನ್ನು 130 ಅಡಿಗಳಿಂದ ಐದಾರು ಅಡಿ ಕೆಳಗೆ ಇಳಿಸುವ ₹120 ಕೋಟಿ ಯೋಜನೆಯ ಪ್ರಸ್ತಾವನೆಯನ್ನು ವೋಟ್ ಬ್ಯಾಂಕ್ ರಾಜಕರಣೀಯ ಷಡ್ಯಂತ್ರದಂತೆ, ತಾಳಕ್ಕೆ ತಕ್ಕಂತೆ ಕುಣಿಯುವ ಎಂಜಿನಿಯರ್‌ಗಳು ಪ್ರಸ್ತಾವನೆ ಸಲ್ಲಿಸಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಇದು ನಡೆಯಲು ಬಿಡುವುದಿಲ್ಲ ಎಂದು ಕಸವನಹಳ್ಳಿ ರಮೇಶ್ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ವಿವಿಸಾಗರ ಹಾಗೂ ಭದ್ರ ಮೇಲ್ದಂಡೆ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿಯಿಂದ ʼವೋಟ್ ಬ್ಯಾಂಕ್ ರಾಜಕಾರಣಕ್ಕೆ ವಿವಿಸಾಗರ ಬಲಿ ಕೊಡಲಾಗದುʼ ಎಂಬ ಘೋಷ ವಾಕ್ಯದಡಿ ಹಮ್ಮಿಕೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರುಗಳ ಸಭೆಯಲ್ಲಿ ಮಾತನಾಡಿದರು.

“ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜರು ತಮ್ಮ ದೂರದೃಷ್ಠಿ, ಇಂಗ್ಲೆಂಡಿನ ತಜ್ಞ ಎಂಜಿನಿಯರ್‌ಗಳ ತಂತ್ರಜ್ಞಾನದ ಬಳಕೆ ಮಾಡಿ ಅತ್ಯಂತ ಗುಣಮಟ್ಟ ಹಾಗೂ ದೀರ್ಘಾವಧಿ ಬಳಕೆಯ 130 ಅಡಿಗಳ ವಿವಿ ಸಾಗರ ಜಲಾಶಯದ ಕೋಡಿಯನ್ನು ತಗ್ಗಿಸುವ ಹುನ್ನಾರ ನಡೆಸಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisements

“ವಾಣಿವಿಲಾಸ ಸಾಗರ(ವಿವಿ ಸಾಗರ) ಜಲಾಶಯವನ್ನು ನಂಬಿಕೊಂಡು ಬಹುಪಯೋಗಿ ನೀರಿನ ಬಳಕೆ ಸರ್ಕಾರಿ ಯೋಜನೆಗಳು ಜಾರಿಯಲ್ಲಿದ್ದು, ಹಿರಿಯೂರು ಚಿತ್ರದುರ್ಗ ಚಳ್ಳಕೆರೆ, ಡಿಆರ್‌ಡಿಒ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಹೊಸದುರ್ಗ, ಹೊಳಲ್ಕೆರೆ ತಾಲೂಕುಗಳು ಸೇರಿದಂತೆ ಬಹಳಷ್ಟು ಹಳ್ಳಿಗಳಿಗೆ ಕುಡಿಯುವ ನೀರಿನ ಆಶ್ರಯವಾಗಿರುವ ಹಿರಿಯೂರು ತಾಲೂಕಿನ  ಅಚ್ಚುಕಟ್ಟು ವ್ಯಾಪ್ತಿಯ ರೈತರ ಬದುಕಿನ ಭಾಗವಾಗಿರುವ, ವೇದಾವತಿ ನದಿ ಪಾತ್ರದಲ್ಲಿ ನಿರ್ಮಿಸಲಾದ ಚೆಕ್ ಡ್ಯಾಮ್‌ಗಳು ವರ್ಷಪೂರ್ತಿ ನೀರಿನ ಆಶ್ರಯ ತಾಣಗಳಾಗಿವೆ. ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಭಾಗಕ್ಕೂ ನೀರಾವರಿ ಆಶ್ರಯವಾಗಿದೆ” ಎಂದರು. 

“ಅಕ್ಕ ಪಕ್ಕದ ತಾಲೂಕು, ಜಿಲ್ಲೆಗಳ ಅಂತರ್ಜಲ ಸಂರಕ್ಷಣೆಯ ಕೇಂದ್ರ ಬಿಂದುವಾಗಿರುವ ಈ ಜಲಾಶಯದ ಕೋಡಿಯನ್ನು ತಗ್ಗಿಸುವುದು ಇತಿಹಾಸವನ್ನು ಅಪಮಾನಿಸಿದಂತೆ. 120 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ತೊಂದರೆಯಿಲ್ಲದೆ ನಿರಾತಂಕವಾಗಿ ಶಾಂತಿಯುತವಾಗಿ ಜನತೆಗೆ ನೀರುಣಿಸಿದ ಜಲಾಶಯಕ್ಕೆ ಕಂಟಕವಾಗುವ ಇಂತಹ ಯೋಜನೆಗಳನ್ನು ಪ್ರಾರಂಭದಲ್ಲಿಯೇ ಚಿವುಟಿ ಹಾಕಬೇಕು. ನಿರ್ಮಾಣವಾದ ಕಾಲದಿಂದಲೂ ಈವರೆಗೆ ಒಂದು ರೂಪಾಯಿ ನಿರ್ವಹಣಾ ವೆಚ್ಚವನ್ನು ಖರ್ಚು ಮಾಡದೆ, ಗಟ್ಟಿ ಮುಟ್ಟಾಗಿರುವ ಕೋಡಿಯನ್ನು ತಗ್ಗಿಸುವ ಹುನ್ನಾರ ಸಲ್ಲದು. ರಾಜಕಾರಣ ಅಧಿಕಾರ ಇಂದು ಇದ್ದು ನಾಳೆ ಹೋಗುತ್ತದೆ. ಆದರೆ ಬಹುಪಯೋಗಿ ವಿವಿಸಾಗರ ಜಲಾಶಯವನ್ನು ವಿರೂಪಗೊಳಿಸುವುದಾಗಲಿ ಅದರ ಗಾತ್ರವನ್ನು ಕಡಿಮೆ ಮಾಡುವುದಾಗಲಿ ನಡೆಯುವ ಕಾರ್ಯ ಯಾರಿಗೂ ಶೋಭೆ ತರುವಂತಹದ್ದಲ್ಲ” ಎಂದು ಕಿಡಿಕಾರಿದರು.

“ಜಲಾಶಯ ನಿರ್ಮಾಣ ಮಾಡಿದ ಎಚ್ ಡಿ ರೈಸ್ ಅವರ ದೂರ ದೃಷ್ಟಿ ಹಾಗೂ ವರದಿಯನ್ನು ಸರಿಯಾಗಿ ಓದದ, ಗ್ರಹಿಸದ, ಆಧುನಿಕ ಎಂಜಿನಿಯರ್‌ಗಳು, ವೋಟ್ ಬ್ಯಾಂಕ್ ರಾಜಕಾರಣಿಗಳು ಸೇರಿ ವೈಜ್ಞಾನಿಕವಾಗಿ ಕೋಡಿಯನ್ನು ಇಳಿಸುವ ಪ್ರಸ್ತಾವ ಯಾವುದೇ ಕಾರಣಕ್ಕೂ ಕಾರ್ಯಸಾಧುವಾಗಲು ಬಿಡುವುದಿಲ್ಲ. ಇದು ಭವಿಷ್ಯದ ಪ್ರಶ್ನೆ. ಇಂದಿನ ಮಕ್ಕಳು ಮುಂದೆ ನೆಲ ಜಲ ನಾಡು ನುಡಿ ಕೆರೆ ಜಲಾಶಯಗಳ ಬಗ್ಗೆ ಅನಾದರಣೆ ಮಾಡಲಿದ್ದಾರೆ. ಈ ಪೀಳಿಗೆಯ ನಾವುಗಳೇ ಕೊನೆಯ ಕೊಂಡಿ. ಆದ್ದರಿಂದ ತಾಲೂಕಿನ ಎಲ್ಲ ಸಂಘ ಸಂಸ್ಥೆಗಳವರು ರಾಜಕೀಯ ಪಕ್ಷದವರು ನಾಗರಿಕ ಸಂಘಟನೆಗಳು ಸಮಾಜಮುಖಿ ಚಿಂತಕರು ಸೇರಿ ವಿವಿ ಸಾಗರ ಸಾಗರವನ್ನು ಉಳಿಸಬೇಕು” ಎಂದು ಹೇಳಿದರು.

“ಜಲಾಶಯದ ರಕ್ಷಣೆಗೆ ನಿಂತಿರುವ ಕಣಿವೆ ಮಾರಮ್ಮ, ರಂಗನಾಥ ಸ್ವಾಮಿಯ ಶಾಪ ತಟ್ಟದೇ ಬಿಡದು. ಒಂದು ವೇಳೆ ಕೋಡಿ ಇಳಿಸುವ ಅವೈಜ್ಞಾನಿಕ ಹಾಗೂ ಜನವಿರೋಧಿ ಕಾಮಗಾರಿಯನ್ನು ಕೈಗೊಂಡರೆ ಜನಾಂದೋಲನದ ಮೂಲಕ ನಿಲ್ಲಿಸಲಾಗುವುದು. ಅಲ್ಲದೆ  ಸೂಕ್ತ ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಹೂಡಿ ಕಾನೂನಾತ್ಮಕ ರಕ್ಷಣೆ ಪಡೆಯಲಾಗುವುದು” ಎಂದು ಕಸವನಹಳ್ಳಿ ರಮೇಶ್ ಎಚ್ಚರಿಕೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಳೆಗೆ ಸಿಲಕಿ ಹಾನಿಗೊಳಗಾದ ಮೆಕ್ಕೆಜೋಳ; ಪರಿಹಾರದ ನಿರೀಕ್ಷೆಯಲ್ಲಿ ರೈತರು

ರೈತ ಸಂಘದ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ಮಾತನಾಡಿ, “ಜಲಾಶಯದ ಕೋಡಿ ತಗ್ಗಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ರಕ್ತ ಕೊಟ್ಟಾದರೂ ಕೋಡಿ ರಕ್ಷಿಸಿಕೊಳ್ಳುತ್ತೇವೆ. ತಾಲೂಕಿನ ಜಲಮೂಲಗಳ ಅಭಿವೃದ್ಧಿ ಮಾಡಬೇಕು ಇಲ್ಲವಾದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ನಮ್ಮ ಸಂಘಟನೆಯಿಂದ ಸಂಪೂರ್ಣ ಬೆಂಬಲ ಕೊಡುತ್ತೇವೆ” ಎಂದು ಹೇಳಿದರು. 

ಕೃಷಿಕ ಸಮಾಜದ ಅಧ್ಯಕ್ಷ ಎಚ್ ಆರ್ ತಿಮ್ಮಯ್ಯ, ನಿರ್ದೇಶಕರಾದ ಆರ್ ಕೆ ಗೌಡ್ರು, ಪಿಟ್ಲಾಲಿ ಶ್ರೀನಿವಾಸ್, ಬಬ್ಬೂರ್ ಸುರೇಶ್, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗಡಾರಿ ಕೃಷ್ಣಪ್ಪ, ವಾಲ್ಮೀಕಿ ಮಹಾಸಭಾ ಜೆ ಬಿ ರಾಜು, ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್, ನಾಗೇನಹಳ್ಳಿ ಮೂಡಲಗಿರಿಯಪ್ಪ, ಕುಂಚಿಟಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕುಬೇರಪ್ಪ, ರಾಮಚಂದ್ರ ಕಸವನಹಳ್ಳಿ, ನಂದಿಹಳ್ಳಿ ರಂಗಸ್ವಾಮಿ, ಬೀರನಹಳ್ಳಿ ಶಿವಣ್ಣ, ರಾಜಶೇಖರ, ಕರಿಬಸಣ್ಣ, ಬಂಗಾರಪ್ಪ, ಪರಮೇನಹಳ್ಳಿ ಮಹಾಲಿಂಗಪ್ಪ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X