ಶಿವಮೊಗ್ಗ | ಬಡವರಿಗೆ ಸ್ವಾಭಿಮಾನ ತಂದುಕೊಟ್ಟವರು ಬಂಗಾರಪ್ಪ: ಟೆಲಿಕ್ಸ್ ರವಿಕುಮಾರ್

Date:

Advertisements

ಸಮಾಜವಾದಿ ಚಿಂತನೆಗಳಿಂದ ರಾಜಕಾರಣಕ್ಕೆ ಬಂದು, ಬಡವರಿಗೆ ಸ್ವಾಭಿಮಾನ ತಂದುಕೊಟ್ಟವರು ಬಂಗಾರಪ್ಪ. ಇವರು ಕರ್ನಾಟಕದ ಕಾರ್ಲ್ ಮಾರ್ಕ್ಸ್ ಎಂದೇ ಹೇಳಬಹುದು ಎಂದು ಪತ್ರಕರ್ತ ಟೆಲಿಕ್ಸ್ ರವಿಕುಮಾರ್ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಸೊರಬದ ರಾಜಕುಮಾ‌ರ್ ರಂಗಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪರವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಎಸ್ ಬಂಗಾರಪ್ಪನವರ ಸಾಮಾಜವಾದಿ ಚಿಂತನೆಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪತ್ರಕರ್ತ 2

“ಬಂಗಾರಪ್ಪ ಬಡವರಿಗೆ ಸ್ವಾಭಿಮಾನ ತಂದುಕೊಟ್ಟವರು. ಹಿಂದೂ ದೇವಾಲಯಗಳಿಗೆ ಕಾಯಕಲ್ಪ ಕೊಟ್ಟ ಅವರ ನಿಜವಾದ ಹಿಂದು, ಅವರ ಚಿಂತನೆಗಳು ಕೇವಲ ಪ್ರತಿಮೆಗಳನ್ನು ಸ್ಥಾಪಿಸುವುದರಲ್ಲಿ, ಆಚರಣೆಗಳಲ್ಲಿ ಮಾತ್ರ ಇರಬಾರದು ಎಂದರು.
ನಿಜವಾಗಿಯೂ ಅವರ ಆದರ್ಶಗಳನ್ನು, ಹೋರಾಟಗಳನ್ನು, ಅಳವಡಿಸಿಕೊಳ್ಳುವ ಮೂಲಕ ಬಂಗಾರಪನವರನ್ನು ಜೀವಂತವಾಗಿಡುವ ಕೆಲಸವಾಗಬೇಕಿದೆ” ಎಂದರು.

Advertisements

“ಬಂಗಾರಪ್ಪನವರ ರಾಜಕಾರಣ, ವಾದ ಚಿಂತನೆಗಳು ಶಾಶ್ವತವಾಗಿ ಹೋರಾಟದ ಬದುಕು, ಜನಪರ ಉಳಿಯಬೇಕಾದರೆ ಕುವೆಂಪು ವಿವಿಯಲ್ಲಿ ಬಂಗಾರಪ್ಪ ಅಧ್ಯಯನ ಪೀಠ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಸಚಿವ ಮಧು ಬಂಗಾರಪ್ಪನವರು ಚಿಂತನೆ ನಡೆಸಬೇಕು” ಎಂದು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮದ್ಯ ಸೇವಿಸಿ ವಾಹನ ಚಾಲನೆ; ₹10,000 ದಂಡ ವಸೂಲಿ ಮಾಡಿದ ಸಂಚಾರಿ ಪಿಎಸ್‌ಐ

ಉಪನ್ಯಾಸಕ ಸಿರಾಜ್ ಅಹಮದ್ ಮಾತನಾಡಿ, “ರಾಜಕಾರಣವೆಂದರೆ ಈ ಕಾಲಕ್ಕೆ ಯುವಕರಲ್ಲಿ ಸಿನಿಕಥನ ಬಂದಿದೆ. ಆದರೆ ಬಂಗಾರಪ್ಪನವರ ರಾಜಕಾರಣ ಯುವಜನರನ್ನು ಸೆಳೆಯುವಲ್ಲಿ ಆಕರ್ಷಣೀಯವಾಗಿತ್ತು. ಅಂತಹ ರಾಜಕಾರಣದ ಚಿಂತನೆಗಳು ಈಗಿನ ಯುವಸಮೂಹವನ್ನು ಮುಟ್ಟಬೇಕು” ಎಂದರು.

ಸಚಿವ ಮಥುಬಂಗಾರಪ್ಪ, ಬಸವಂತಪ್ಪ ಕೋಟೆ, ಎಲ್ ಎಂ ಮುಕುಂದರಾಜ್, ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ್ ಮೂರ್ತಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X