ಕನ್ನಡ ಭಾಷೆ ಮತ್ತು ಕನ್ನಡಿಗರ ಲಿಪಿಗಳಿಗೆ ಶತಮಾನಗಳ ಇತಿಹಾಸವಿದೆ. ಭಾಷೆ ಎಂಬುದು ಜ್ಞಾನ, ಭಾಷೆಯೆಂಬುದು ಸಾಹಿತ್ಯವಾಗಿದೆ. ಕನ್ನಡ ಭಾಷೆ ಮಾತ್ರ ಭಂಡಾರವನ್ನು ತುಂಬಿಕೊಂಡಿರುವ ಭಾಷೆಯಾಗಿದೆ. ಕನ್ನಡದ ಬಳಕೆಯು ಇತ್ತೀಚಿಗೆ ಕಡಿಮೆ ಆಗುತ್ತಿದ್ದು, ಕನ್ನಡ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಶ್ವೇತ ಬಿಡಿಕರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಹೊಕ್ಕಳಬಾವಿಯಲ್ಲಿ ನಡೆದ 69 ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 1973 ರಲ್ಲಿ ಕನ್ನಡ ಸಂಘ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಕನ್ನಡದ ಶ್ರೀಮಂತಿಕೆ ಮತ್ತು ಕನ್ನಡ ಭಾಷಾವಾರು ಬಗ್ಗೆ ನಿರಂತರ ಮೆಲುಕು ಹಾಕಬೇಕಿದೆ.
ಜಮಖಂಡಿ ನಗರದಲ್ಲಿ 50 ವರ್ಷದ ಹಿಂದೆ ಮರಾಠಿ ಭಾಷೆ ರೂಡಿಯಲ್ಲಿತ್ತು. ಈಗಲೂ ಸಹ ಬೆಳಗಾವಿಯ ಕೆಲವು ಭಾಗಗಳಲ್ಲಿ ಮಾರಾಠಿ ಮಾತನಾಡುವ ಜನ ಸಿಗುತ್ತಾರೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದ್ದು, ಕನ್ನಡದ ಅಭಿಮಾನಿಗಳು ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ವಿವಿಧ ರಾಜ್ಯಗಳಲ್ಲೂ ಇದ್ದಾರೆ. ಬ್ರಿಟಿಷರ ಆಡಳಿತದ ವಿರುದ್ಧ ಕರ್ನಾಟಕ ಏಕೀಕರಣ ಮತ್ತು ಸ್ವತಂತ್ರ ಚಳುವಳಿ ಎಂಬ ಎರಡು ಹೋರಾಟಗಳು ಹುಟ್ಟಿಕೊಂಡವು.
ಇದನ್ನು ಓದಿದ್ದೀರಾ? ವಿಜಯಪುರ | ಆದಷ್ಟು ಶೀಘ್ರ ವಿಮಾನ ನಿಲ್ದಾಣದ ಕಾಮಗಾರಿ ಮುಗಿಯಲಿದೆ: ರಾಜ್ಯೋತ್ಸವ ಭಾಷಣದಲ್ಲಿ ಸಚಿವ ಎಂ.ಬಿ.ಪಾಟೀಲ್
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಅರುಣ ಕುಮಾರ, ವಿಧಾನಪರಿಷತ್ ಮಾಜಿ ಸದಸ್ಯ ಜಿ. ಎಸ್. ನ್ಯಾಮಗೌಡ, ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ನಗರ ಪ್ರಾಧಧಿಕಾರಿ ಅಧ್ಯಕ್ಷ ಅನ್ವರ ಮೊಸಿನ, ಶಿಕ್ಷಕರ ಸಂಘದ ಅಧ್ಯಕ್ಷ ಪಿ. ಬಿ. ಅಜ್ಜನ್ನವರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಂತೋಷ ತಳಕೇರಿ, ಡಿ. ಎಸ್. ಶಾಂತವೀರ, ಸಂಜು ಬನ್ನೂರು, ನಗರ ಪೌರಾಯುಕ್ತ ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು.