ಮಾಜಿ ಶಾಸಕ ಕಳಕಪ್ಪ ಬಂಡಿಯವರು ಗಜೇಂದ್ರಗಡ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಸಾರ್ವಜನಿಕರ ಎದುರಿಗೆ ಏಕವಚನದಲ್ಲಿ ನಿಂದಿಸಿ ಸರ್ಕಾರಿ ನೌಕರರಿಗೆ ಬೆದರಿಕೆ ಒಡ್ಡಿರುವುದು ಖಂಡನೀಯ. ಹೀಗಾಗಿ, ಇದರ ವಿರುದ್ಧ ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸರ್ಕಾರಿ ಕಂದಾಯ ನೌಕರರ ಸಂಘವು ಒತ್ತಾಯಿಸಿದೆ.
ಗದಗ ಜಿಲ್ಲೆಯ ರೋಣ ಪಟ್ಟಣದ ತಹಶೀಲ್ದಾರ್ ಮೂಲಕವೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ರಾಜ್ಯದ ರೈತರ, ದೇವಾಲಯ, ಮಠ ಮಾನ್ಯಗಳ ಆಸ್ತಿಗಳ ಮೇಲೆ ವಕ್ಷ್ ಬೋರ್ಡ್ ಹೆಸರು ದಾಖಲಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದರು. ಈ ವೇಳೆ ತಹಶೀಲ್ದಾರ್ ಅವರನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ. ಇದರಿಂದ ಸರಕಾರಿ ನೌಕರರಿಗೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ” ಎಂದು ಸರಕಾರಿ ನೌಕರರು ಹೇಳಿದರು.
“ಕೂಡಲೇ ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಹಾವೇರಿ | ಹಾಸ್ಟೆಲ್ ಸೌಲಭ್ಯ ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲ: ವಾರ್ಡನ್ಗಳ ಮೇಲೆ ಕ್ರಮಕ್ಕೆ ವಿದ್ಯಾರ್ಥಿಗಳ ಧರಣಿ
ಈ ಸಂದರ್ಭದಲ್ಲಿ ಕೆ.ಎಸ್. ಬೆಟಿಗೇರಿ ಉಪ ತಹಸಿಲ್ದಾರ ಎಸ್.ಎಸ್.ಗಿರಿಯಪ್ಪಗೌಡರ, ಎಂ.ಡಿ. ಚಕಾರಿ, ಜಿ.ಎಂ. ಹವಾಲ್ದಾರ, ಸುವರ್ಣ ಜುಮ್ಮನಕಟ್ಟಿ, ಎಲ್. ಎಮ್. ಅರಹುಣಸಿ, ಪಿ.ಡಿ.ಪಾಟೀಲ, ಶೋಭಾ ಬಿಳಗಿ, ಉಮಾ ಜಾಲಿಹಾಳ, ರೇಖಾ ತರಿವಾಳ, ವೆಂಕಟೇಶ ರಜಪೂತ, ಅಬ್ದುಲ್ ಪಾಪಣ್ಣನವರ, ಹನುಮಂತ ಮ್ಯಾಗೇರಿ, ಜಗದೀಶ್ ಮಡಿವಾಳರ, ಮಲ್ಲಿಕಾರ್ಜುನ ಹನಿಸಿ, ಕಂದಾಯ ನೌಕರರ ಸಂಘದ ಸದಸ್ಯರು ಹಾಜರಿದ್ದರು.
