ವಿಜಯಪುರ | ಕಾನೂನು ಅಡಿಯಲ್ಲಿ ಸಮಾನತೆ ನ್ಯಾಯ ಪಡೆಯಬೇಕು: ಫಾದರ್ ಸುಮನ್ ಬಾಲು‌

Date:

Advertisements

ಕಾನೂನು ಎಲ್ಲರಿಗೂ ಸಮಾನವಾಗಿದೆ. ಅದು ಮಹಿಳೆಯರೇ ಇರಲಿ, ಪುರುಷರೇ ಇರಲಿ ನಾವು ಯಾವುದೇ ಹಕ್ಕು ಸೌಲಭ್ಯ ಪಡೆಯಬೇಕಾದರೆ ಕಾನೂನು ಅಡಿಯಲ್ಲಿ ಸಮಾನತೆ ನ್ಯಾಯ ಪಡೆಯಬೇಕು ಎಂದು ಫಾದರ್ ಸುಮನ್ ಬಾಲು‌ ಹೇಳಿದರು.

ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆ ಹಾಗೂ ಸಂತ ಜೋಸೆಫ್ ಆರೋಗ್ಯ ಮತ್ತು ಸಮುದಾಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಹಾಗೂ ಎಚ್‌ಐವಿ ಭಾದಿತರ ಬೆಂಬಲ ಸಭೆಯಲ್ಲಿ ಸಂವಿಧಾನ ಪ್ರಸ್ತಾವನೆ ಪ್ರತಿಜ್ಞೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಮುಖ್ಯವಾಗಿ ಎಲ್ಲ ರಂಗಗಳಲ್ಲೂ ನಮಗೆ ಸಮಾನವಾದ ಅವಕಾಶಗಳು ಬೇಕೇ ಹೊರತು ಅನುಕಂಪವಲ್ಲ. ಅದಕ್ಕೆ ನಾವು ಸಮಾನ ನ್ಯಾಯ ಕಾನೂನುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಕೆಲವು ಸಮಯಗಳಲ್ಲಿ ಆಸ್ತಿ ವಿಚಾರ ಬಂದಾಗ ನೀವು ಎಚ್‌ಐವಿ ಭಾದಿತರು, ನಿಮಗೆ ಆಸ್ತಿ ಯಾಕೆ ಕೋಡಬೇಕೆಂದು ಮನೆಯಿಂದ ಹೊರಗೆ ಹಾಕಿರುವ ಉದಾಹರಣೆಗಳು ನಮ್ಮ ಮುಂದಿವೆ. ಅದಕ್ಕೆ ನಾವು ಹೇಗೆ ಇರಲಿ ನಮಗೂ ಎಲ್ಲರ ಹಾಗೆ ಸಮಾನವಾದ ನ್ಯಾಯ ಮತ್ತು ಹಕ್ಕುಗಳಿವೆ. ಅದು ನಮ್ಮ ಕಾನೂನಿನಲ್ಲಿದೆ. ಇಂತಹ ಸಮಯದಲ್ಲಿ ಕೆಲವು ಬಾರಿ ನಾವು ನ್ಯಾಯಾಲಯಕ್ಕೆ ಹೋಗುವ ಅನಿವಾರ್ಯತೆಯೂ ಬರಬಹುದು” ಎಂದು ಹೇಳಿದರು.

Advertisements

“ಕಾನೂನುಗಳಿಗೆ ಸಂಬಂಧಿಸಿದಂತೆ ಸಲಹೆ, ಮಾರ್ಗದರ್ಶನ, ಸಹಾಯ, ಸಹಕಾರ ಬೇಕಾದಾಗ ವೈಯಕ್ತಿಕವಾಗಿ ಭೇಟಿಯಾಗಿ ಸಹಾಯ ಪಡೆಯಬಹುದು ಹಾಗೂ ಎಲ್ಲ ವಿಚಾರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಉಡುಪಿ | ‘ಟೋಲ್’ ಶನಿಯಿಂದ ಮುಕ್ತಿ ನೀಡಲು ಒಂದಾದ ಸಾಸ್ತಾನದ ನಾಗರಿಕರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಸ್ಟರ್ ಅಮಲಾ ರಾಣಿ ಮಾತನಾಡಿ, “ಸಮಾಜದಲ್ಲಿ ನಾವು ಎಲ್ಲರ ಹಾಗೆ ಸಮಾನರಾಗಿ ಗೌರವದಿಂದ ಬದುಕುವ ಹಕ್ಕು ಕಾನೂನಿನಲ್ಲಿದೆ. ನಮಗೂ ಸಮಾನವಾದ ನ್ಯಾಯ ಪಡೆಯುವ ಹಕ್ಕಿದೆ. ಅದಕ್ಕೆ ನಾವು ಎಚ್‌ಐವಿ ಬಾಧಿತರು ನಮ್ಮನ್ನು ಎಲ್ಲರೂ ತಾರತಮ್ಯದಿಂದ ನೋಡುತ್ತಾರೆಂಬ ಭಾವನೆಯನ್ನು ನಮ್ಮ ತಲೆಯಿಂದ ತೆಗೆಯಬೇಕು. ನಮ್ಮಲ್ಲಿರುವ ಹಿಂಜರಿಕೆ ಭಯ ತೊರೆದು ಸಮಾಜದಲ್ಲಿ ಘನತೆ ಗೌರವದ ಬದುಕು ಬದಕಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 60ಕ್ಕಿಂತ ಹೆಚ್ಚು ಮಂದಿ ಎಚ್‌ಐವಿ ಬಾಧಿತರು ಭಾಗಿಯಾಗಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X