ಬುದ್ಧ-ಬಸವ-ಅಂಬೇಡ್ಕರ್‌ ಹೆಸರಿನಲ್ಲಿ ಪ್ರಮಾಣ ವಚನವೆಂಬ ಅದ್ಬುತ

Date:

Advertisements

ಬುದ್ಧ, ಬಸವ ಮತ್ತು ಅಂಬೇಡ್ಕರ್‌ ಅವರ ಚಿಂತನೆಗಳು ತುಳಿತಕ್ಕೊಳಗಾದವರ, ದೌರ್ಜನ್ಯಕ್ಕೆ ಒಳ್ಳಗಾದವರೆಲ್ಲರ ಜೀವನಕ್ಕೆ ಸ್ಪೂರ್ತಿಯಾಗಬಲ್ಲ, ಮಾನವ ಕುಲವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೈ ಹಿಡಿದು ಸಾಗಿಸಬಲ್ಲ ಅಭೂತಪೂರ್ವ ಸಿದ್ಧಾಂತಗಳೆ ಆಗಿವೆ. ಇಂತಹ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುವುದಲ್ಲದೆ ತಮ್ಮ ರಾಜಕಾರಣದ ಜೀವನದಲ್ಲಿ ಗಟ್ಟಿಯಾಗಿ ಉಳಿಸಿಕೊಂಡು ಬೆಳೆಸುತ್ತಿರುವ ಅಪರೂಪದ ರಾಜಕಾರಣಿ ಸಚಿವರಾಗಿ ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವಿಕರಿಸಿದ ಸತೀಶ ಜಾರಕಿಹೋಳಿ.

ಅಕ್ಷರಶಃ ಬುದ್ಧ, ಬಸವ ಮತ್ತು ಅಂಬೇಡ್ಕರ್‌ ಸಿದ್ಧಾಂತಕ್ಕೆ ಬದ್ಧರಾಗಿರುವ ಇವರು ಬಸವಣ್ಣ ಅವರ ವಚನದಂತೆ ಮೂಢನಂಬಿಕೆಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಿರುವರು. ರಾಹುಕಾಲ, ಯಮಗಂಡ ಕಾಲ, ಒಳ್ಳೆಯ ಸಮಯ ಮತ್ತು ದಿನ ಯಾವುದೆಂದು ಜ್ಯೋತಿಷಿಗಳ ಹಿಂದೆ ಬಿದ್ದು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ರಾಜಕಾರಣಿಗಳ ನಡುವೆ ಸತೀಶ ಜಾರಕಿಹೊಳಿಯವರು. “ದಿನ ಶ್ರೇಷ್ಠವೆಂದು ಮಾಡುವ ಪಂಚ ಮಹಾಪಾತಕರ ಮುಖವ ನೋಡಲಾಗದು” ಎಂದು ಶರಣರು ಹೇಳಿದಂತೆ ಒಳ್ಳೆಯ ಮತ್ತು ಕೆಟ್ಟ ಸಮಯವೆಂಬ ಮೌಢ್ಯಕ್ಕೆ ಜೋತು ಬೀಳದೆಯೇ, ಸೂರ್ಯ ಗ್ರಹಣದ ಸಮಯದಲ್ಲಿಯೇ ನಾಮಪತ್ರ ಸಲ್ಲಿಸಿ ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿ ಉಳಿದವರು.

ಚುನಾವಣೆಯಲ್ಲಿ ಬಹುಮತಗಳಿಂದ ಜಯಗಳಿಸುವ ಮೂಲಕ ಒಳ್ಳೆಯ ಮತ್ತು ಕೆಟ್ಟ ಸಮಯ ಎಂಬುವದಿಲ್ಲ ಎಂಬುದನ್ನು ಸಾಬಿತು ಪಡಿಸುವಲ್ಲಿ ಯಶಸ್ವಿಯಾದ ರಾಜಕಾರಣಿ. ಅಷ್ಟೆ ಅಲ್ಲದೆ ಪ್ರತಿ ವರ್ಷ ಇವರು ನಾಗರ ಪಂಚಮಿಯಂದು, “ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡೊಡೆ ಕೊಲ್ಲೆಂಬರಯ್ಯಾ” ಎಂದು ಡಾಂಭಿಕ ಭಕ್ತಿಯನ್ನು ವಿರೋಧಿಸದ ಬಸವಣ್ಣವರ ಹಾಗೆ ನಾಗರ ಪಂಚಮಿಯಂದು ಮಣ್ಣಿನ ನಾಗರಕ್ಕೆ ಹಾಲೆರದು ಹಾಲು ವ್ಯರ್ಥಮಾಡದಿರಿ, ಆ ಹಾಲನ್ನು ಬಡವರಿಗೆ ನೀಡಿ ಬಸವ ಪಂಚಮಿ ಆಚರಿಸುವ ಕಾರ್ಯವನ್ನು ಮಾನವ ಬಂಧುತ್ವ ವೇಧಿಕೆಯ ಮೂಲಕ ರಾಜ್ಯಾದಾದ್ಯಂತ ಆಚರಿಸಿದರು.

Advertisements

ಪ್ರತಿ ವರ್ಷ ಸ್ಮಶಾನದಲ್ಲಿ ಕಾರ್ಯಕ್ರಮಗಳನ್ನು ಮಾಡಿ ಮೂಢ ನಂಬಿಕೆಗಳ ವಿರುದ್ಧ ಜಾಗೃತಿಗೊಳಿಸುವದಲ್ಲದೆ ಗ್ರಹಣದ ಸಮಯಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಯಶಸ್ವಿಯಾಗಿರುವ ಸಚಿವ ಸತೀಶ್ ಜಾರಕಿಹೊಳಿ. ಇಂತಹ ಅನೇಕ ವಿಷಯಗಳಿಂದ ಮನುವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಟಿಕೆಗಳಿಗೊಳ್ಳಗಾದರೂ ಎಂದು ಕೂಡ ತಮ್ಮ ಸಿದ್ಧಾಂತವನ್ನು ಬಿಟ್ಟುಕೊಡದೆ ಬುದ್ಧ, ಬಸವ, ಅಂಬೇಡ್ಕರರ ಸಿದ್ಧಾಂತಗಳೊಂದಿಗೆ ಗಟ್ಟಿಯಾಗಿ ನಿಂತಿರುವವರು.

ರಾಜಕಾರಣದಲ್ಲೂ ಈ ಸಿದ್ಧಾಂತಗಳೊಂದಿಗೆ ಹೋರಾಡುತ್ತಿರುವ ಇವರು ಈ ಹಿಂದಿನ 2013ರ ಅವದಿಯ ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಜಾರಕಿಹೊಳಿ ಅವರಿಗೆ ಅಬಕಾರಿ ಖಾತೆಯ ಸಚಿವರನ್ನಾಗಿ ಮಾಡಿದಾಗ ಅದನ್ನು ವಿರೋಧಿಸಿ ಇಂತಹ ಖಾತೆಯಿಂದ ಜನರಿಗೆ ನಾನು ಏನು ಉಪಕಾರ ಮಾಡಲು ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿದ ಇವರು ಇಂದಿನ ರಾಜಕಾರಣಕ್ಕೆ ಒಂದೊಳ್ಳೆಯ ಸಂದೇಶ ನೀಡಿ ಬೇಷ್ ಎನ್ನಿಸಿಕೊಂಡರು.

ಒಟ್ಟಿನಲ್ಲಿ ಕೋಮುವಾದ ಹಾಗೂ ದ್ವೇಷ ರಾಜಕಾರಣದ ಮಧ್ಯೆ ಸಾಮರಸ್ಯ ಮತ್ತು ಪ್ರೀತಿ ಮೂಡಿಸಿ ಮೌಢ್ಯಾಚಾರಣೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸತೀಶ್‌ ಜಾರಕಿಹೊಳಿಂಯಂತಹ ರಾಜಕಾರಣಿಗಳು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅವಶ್ಯವಾಗಿ ಬೇಕಾಗಿದ್ದಾರೆ.

– ಸುನಿಲ ಹಂಪನ್ನವರ
ಬೆಳಗಾವಿ ಜಿಲ್ಲೆ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಮೂಢನಂಬಿಕೆಯನ್ನು ವಿರೋಧಿಸಿ ಎಲ್ಲಾ ಒಳ್ಳೆಯದು ಆಗುತ್ತದೆ. ಎಂಬ ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತಾ ಬೆಳೆದ ವಿಶಿಷ್ಟ ರಾಜಕಾರಣಿ.

  2. ಈ ಚಿಂತನೆಗಳನ್ನು ‌ಪಾಲಿಸಿ ಮುಂದುವರೆಸಲು‌‌ ಇಂತಹ ರಾಜಕಾರಣಿಗಳ ಅವಶ್ಯಕತೆ ಇದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಶಾಲಾ ಮೇಲ್ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯ; ಗ್ರಾಮಸ್ಥರಿಂದ ಪ್ರತಿಭಟನೆ

ಸೇಡಂ ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ...

ಗದಗ | ನಾಲ್ಕು ದಿನಗಳಿಂದ ರೈತರು ಪ್ರತಿಭಟನೆ, ಸ್ಪಂದಿಸದ ಆಡಳಿತ: ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಕಿಡಿ

"ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ರೈತರು ನಾಲ್ಕು ದಿನಗಳಿಂದ...

ಕೊಪ್ಪಳ | ಅಕ್ರಮ ಗಾಂಜಾ ಮಾರಾಟ : ಒಂದೇ ಕುಟುಂಬದ 3 ಸೇರಿ ನಾಲ್ವರ ಬಂಧನ

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ...

ಧಾರವಾಡ | ಹೆಬ್ಬಳ್ಳಿ ಗ್ರಾಮದಲ್ಲಿ 91 ಪಿಓಪಿ ಗಣೇಶ ವಿಗ್ರಹಗಳ ವಶಕ್ಕೆ ಪಡೆದ ತಪಾಸಣೆ ತಂಡ

ತಾಲೂಕಿನ ಹೆಬ್ಬಳ್ಳಿಯಲ್ಲಿ 91 ಪಿಓಪಿ ಗಣಪತಿಗಳನ್ನು ಜಿಲ್ಲಾಧಿಕಾರಿ ಆದೇಶದಂತೆ ರಚಿಸಿದ ಕಾರ್ಯ...

Download Eedina App Android / iOS

X