ಬಿಜೆಪಿ ನಾಯಕಿ, ಮಾಜಿ ಸಂಸದೆ ನವನೀತ್ ರಾಣಾ ಭಾಗವಹಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಗುಂಪೊಂದು ಚುರ್ಚಿಗಳನ್ನು ಎಸೆದು, ದಾಂಧಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ.
ಮಹರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಮರಾವತಿಯ ಖಲ್ಲರ್ ಗ್ರಾಮದಲ್ಲಿ ನವನೀತ್ ರಾಣಾ ಶನಿವಾರ ರಾತ್ರಿ ಚುನಾವಣಾ ರ್ಯಾಲಿ ನಡೆಸಿದ್ದಾರೆ. ಈ ವೇಳೆ, ಗುಂಪೊಂದು ಕುರ್ಚಿಗಳನ್ನು ಎಸೆದು ದಾಂಧಲೆ ನಡೆಸಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಣಾ ಅವರನ್ನು ಭದ್ರತಾ ಸಿಬ್ಬಂದಿ ರಕ್ಷಿಸಿದ್ದಾರೆ. ಬಳಿಕ, ಪೊಲೀಸ್ ಠಾಣೆಗೆ ತೆರಳಿದ್ದ ದಾಂಧಲೆ ನಡೆಸಿ, ಗಲಾಟೆ ಸೃಷ್ಟಿಸಿದವರನ್ನು ಬಂಧಿಸುವಂತೆ ಒತ್ತಾಯಿದ್ದಾರೆ.
𝔸𝕄ℝ𝔸𝕍𝔸𝕋𝕀 | BJP leader and former MP Navneet Rana was attacked during her rally in Amravati, Maharashtra. Fortunately, she escaped unharmed. During her speech, she was subjected to lewd gestures and offensive slogans, including "Allahu Akbar." The crowd then began throwing… pic.twitter.com/MLIxl8GzB6
— ℝ𝕒𝕛 𝕄𝕒𝕛𝕚 (@Rajmajiofficial) November 17, 2024
ಅಪರಿಚಿತ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
“ನಾವು ಪ್ರಚಾರ ನಡೆಸುತ್ತಿದ್ದೆವು. ನಾನು ಭಾಷಣ ಮಾಡುವ ವೇಳೆ, ನನ್ನ ಕಡೆಗೆ ಕೆಲವರು ಅಶ್ಲೀಲವಾಗಿ ಸನ್ನೆಗಳನ್ನು ಮಾಡಿದರು. ಬಳಿಕ, ಅವರು ಘೋಷಣೆ ಕೂಗಿ, ಕುರ್ಚಿಗಳನ್ನು ಎಸೆದಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಗಾಯಗಳಾಗಿವೆ” ಎಂದು ರಾಣಾ ತಿಳಿಸಿದ್ದಾರೆ.