ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆನಕೋಳಿ ಗ್ರಾಮದಲ್ಲಿ ಅಡ್ಡಾದಿಡ್ಡಿಯಾಗಿ ಲಾರಿ ಚಾಲನೆ ಮಾಡಿದ ಲಾರಿ ಚಾಲಕನ ಹತ್ಯೆ ಮಾಡಿದ ಘಟನೆ ನಡೆದಿದೆ.
ಸಂಕೇಶ್ವರದಿಂದ ಬೆಳಗಾವಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿ ಕ್ಯಾಂಟರ್ಗೆ ಗುದ್ದಿದ ವೇಳೆ ಪರಸಪ್ಪ ನಾಯಿಕ್ಗೆ ಸೇರಿದ ಬೈಕ್, ಹಾಗೂ ಹಣಮಂತ ಇಡ್ಲಿಗೆ ಸೇರಿದ ಕ್ಯಾಂಟರ್ಗೆ ಗುದ್ದಿದೆ. ಎರಡು ಸಾರಿ ಅಪಘಾತ ಎಸಗಿದರೂ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕನನ್ನು ಪರಸಪ್ಪ ಹಾಗೂ ಅವನ ಸ್ನೇಹಿತರು ಅಡ್ಡಗಟ್ಟಿ ವಾಗ್ವಾದ ನಡೆದು ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.
ಪರಸಪ್ಪ, ಹನಮಂತ, ಈರಪ್ಪ, ಅಮಿತ್ ಮತ್ತೋರ್ವ ಸೇರಿದಂತೆ ಐವರು ಹಲ್ಲೆಗೈದ ಆರೋಪಿಗಳಾಗಿದ್ದು, ಹುಕ್ಕೇರಿ ತಾಲೂಕಿನ ಸೊಲ್ಲಾಪೂರ ಗ್ರಾಮದ ಚಾಲಕ ಅಜೀಮ್ ಇಪ್ಪೇರಿ ತೀವ್ರ ಅಸ್ವಸ್ತಗೊಂಡಿದ್ದರಿಂದ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ವರದಿ ಓದಿದ್ದೀರಾ? ಬೆಳಗಾವಿ | ಅರಬೆತ್ತಲೆಗೊಳಿಸಿ ಮಹಿಳೆಗೆ ಹಲ್ಲೆ ಪ್ರಕರಣ; ಸಂತ್ರಸ್ತರ ಮನೆಗೆ ಶಾಸಕರು, ಪೋಲಿಸ್ ಆಯುಕ್ತರ ಭೇಟಿ
ಲಾರಿ ಚಾಲಕನ ಹತ್ಯೆಗೆ ಕಾರಣವಾದ ಐವರು ಆರೋಪಿಗಳನ್ನು ಯಮಕನಮರಡಿ ಪೋಲಿಸರು ಬಂಧಿಸಿ ಹಿಂಡಲಗಾ ಜೈಲಿಗೆ ರವಾನೆ ಮಾಡಿದ್ದಾರೆ.