ʼಆರ್‌ಆರ್‌ಆರ್‌ʼ ಚಿತ್ರದ ಖಳನಟ ರೇ ಸ್ಟೀವನ್‌ಸನ್‌ ನಿಧನ

Date:

Advertisements

ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್‌ʼ ಚಿತ್ರದಲ್ಲಿ ಬ್ರಿಟಿಷ್‌ ಗವರ್ನರ್‌ ಪಾತ್ರದಲ್ಲಿ ಮಿಂಚಿದ್ದ ಖ್ಯಾತ ಐರಿಷ್‌ ನಟ ರೇ ಸ್ವೀವನ್‌ಸನ್‌ ಸೋಮವಾರ ನಿಧನರಾಗಿದ್ದಾರೆ. ಹಿರಿಯ ನಟನ ಸಾವಿನ ಸುದ್ದಿಯನ್ನು ಆಪ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

58 ವರ್ಷದ ಸ್ಟೀವನ್‌ ಅವರ ಸಾವಿಗೆ ಖಚಿತ ಕಾರಣಗಳೇನು ಎಂಬುದು ಈವರೆಗೆ ತಿಳಿದುಬಂದಿಲ್ಲ. ಇದೇ ಮೇ 25ರಂದು ಸ್ಟೀವನ್‌ 59ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದರು. ಹುಟ್ಟುಹಬ್ಬಕ್ಕೆ ಮೂರು ದಿನ ಬಾಕಿ ಇರುವಾಗಲೇ ನಟ ಹಠಾತ್‌ ನಿಧನರಾಗಿದ್ದಾರೆ.

ಸ್ಟೀವನ್‌ ಅವರ ಹಠಾತ್‌ ನಿಧನಕ್ಕೆ ರಾಜಮೌಳಿ ಕಂಬನಿ ಮಿಡಿದಿದ್ದು, “ಈ ಸುದ್ದಿ ನಿಜಕ್ಕೂ ಅಘಾತವನ್ನುಂಟು ಮಾಡಿದೆ. ರೇ ಚಿತ್ರೀಕರಣದ ಸಂದರ್ಭದಲ್ಲಿ ಸದಾ ಚೈತನ್ಯದಿಂದ ಇರುತ್ತಿದ್ದರು. ಅವರ ಸಾಮರ್ಥ್ಯ ಮತ್ತು ಲವಲವಿಕೆಯ ವ್ಯಕ್ತಿತ್ವ ಚಿತ್ರತಂಡಕ್ಕೆ ಸ್ಫೂರ್ತಿಯಾಗಿತ್ತು. ಅವರ ಜೊತೆ ಕೆಲಸ ಮಾಡಿದ ಅನುಭವ ನಿಜಕ್ಕೂ ಖುಷಿ ನೀಡುವಂಥದ್ದು. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್‌ ಮಾಡಿದ್ದಾರೆ.

Advertisements

ʼಆರ್‌ಆರ್‌ಆರ್‌ʼ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ತೆಲುಗಿನ ಖ್ಯಾತ ನಟರಾದ ಜೂನಿಯರ್‌ ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ಇಬ್ಬರೂ ಸ್ಟೀವನ್‌ ಜೊತೆಗೆ ಕೆಲಸ ಮಾಡಿದ ಅನುಭವವನ್ನು ಮೆಲುಕು ಹಾಕಿ, ಟ್ವೀಟ್‌ ಮೂಲಕ ನಟನ ಅಗಲಿಕೆ ಕಂಬನಿ ಮಿಡಿದಿದ್ದಾರೆ.

1998ರಲ್ಲಿ ತೆರೆಕಂಡ ಪೌಲ್‌ ಗ್ರೀನ್‌ಗ್ರಾಸ್‌ ನಿರ್ದೇಶನದ ʼದಿ ಥಿಯರಿ ಆಫ್‌ ಫ್ಲೈಟ್‌ʼ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಹಾಲಿವುಡ್‌ ಪ್ರವೇಶಿಸಿದ ಸ್ಟೀವನ್‌, ʼಕಿಂಗ್‌ ಆರ್ಥರ್‌ʼ, ʼಪನಿಷರ್‌ : ವಾರ್‌ಝೋನ್‌ʼ, ʼಕಿಲ್‌ ದಿ ಐರಿಷ್‌ಮ್ಯಾನ್‌, ʼಥಾರ್‌ʼ, ʼಆರ್‌ಆರ್‌ಆರ್‌ʼ ಸೇರಿದಂತೆ 26ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ʼವೈಕಿಂಗ್ಸ್‌ʼ, ʼಬ್ಲ್ಯಾಕ್‌ ಸೇಲ್ಸ್‌ʼ, ʼಸೇಂಟ್ಸ್‌ ಆಂಡ್‌ ಸ್ಟ್ರೇಂಜರ್ಸ್‌ʼ ಸೇರಿದಂತೆ 30ಕ್ಕೂ ಹೆಚ್ಚು ಜನಪ್ರಿಯ ವೆಬ್‌ ಸರಣಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X