ಸಿನೆಮಾ ರಂಗದಲ್ಲಿ ಲೈಂಗಿಕ ಕಿರುಕುಳ ದೂರು ಸಮಿತಿ ಆದೇಶ ತಾಸುಗಳಲ್ಲೇ ವಾಪಸು; ‘ಫೈರ್’ ಖಂಡನೆ

Date:

Advertisements

ಕನ್ನಡ ಸಿನೆಮಾ ರಂಗದ ಲೈಂಗಿಕ ಕಿರುಕುಳ ದೂರುಗಳ ಪರಿಶೀಲನಾ ಸಮಿತಿ (ಆಂತರಿಕ ದೂರುಗಳ ಸಮಿತಿ) ರಚನೆಯ ಆದೇಶವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಹೊರಡಿಸಿದ ಕೆಲವೇ ತಾಸುಗಳಲ್ಲಿ ವಾಪಸು ಪಡೆದಿದೆ. ಈ ವಾಪಸಾತಿಯನ್ನು ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವ್ಯಾಲಿಟಿ’ (ಫೈರ್) ತೀವ್ರವಾಗಿ ಖಂಡಿಸಿದೆ. ಈ ಆದೇಶವನ್ನು ವಾಪಸು ಪಡೆಯಲು ಮಂಡಳಿಯಲ್ಲಿನ ಆಂತರಿಕ ವಿರೋಧ ಕಾರಣವೇ ವಿನಾ ಚುನಾವಣಾ ನೀತಿ ಸಂಹಿತೆ ಅಲ್ಲವೆಂದು ಆಪಾದಿಸಿದೆ.

ಆಂತರಿಕ ದೂರುಗಳ ಸಮಿತಿಯನ್ನು ಜಾರಿಗೆ ತರಲು ಬಯಸದಿರುವ ಈ ನಡೆಯು ಕಾನೂನಿನ ಕಡೆಗಣನೆ. ಅಷ್ಟೇ ಅಲ್ಲದೆ ಮಾನವಘನತೆಯ ಮೇಲಿನ ದಾಳಿಯನ್ನು (ಲೈಂಗಿಕ ಕಿರುಕುಳ) ಮುಂದುವರೆಸಲು ನೀಡಲಾಗುತ್ತಿರುವ ಅನುಮತಿ ಎಂದು ‘ಫೈರ್’ ಆರೋಪಿಸಿದೆ.

ಮಂಡಳಿಯ ಚುನಾವಣೆಗಳು ಮುಗಿಯುವ ತನಕ (ಡಿ.15) ಕಾದು ನೋಡುತ್ತೇವೆ. ಆನಂತರವೂ ಆಂತರಿಕ ದೂರು ಸಮಿತಿ ರಚನೆಯಾಗದಿದ್ದರೆ ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳುವುದಾಗಿ ‘ಫೈರ್’ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಇದೇ ತಿಂಗಳ 12ರಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆಗಳು ನಡೆಯಲಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಆದೇಶವನ್ನು ವಾಪಸು ಪಡೆಯಲಾಗಿದೆ ಎಂದು ವಾಣಿಜ್ಯ ಮಂಡಳಿ ಸಮಜಾಯಿಷಿ ನೀಡಿದೆ. ಸಮಿತಿ ರಚನೆಯ ಈ ಸಂಗತಿಯನ್ನು ಚುನಾವಣೆಯ ನಂತರ ಮರುಪರಿಶೀಲಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಎನ್.ಎಂ ಸುರೇಶ್ ತಿಳಿಸಿದ್ದಾರೆ.

ಆದರೆ, ತನ್ನ ಸದಸ್ಯರ ವಿರೋಧದ ಕಾರಣ ಮಂಡಳಿ ಈ ಆದೇಶವನ್ನು ವಾಪಸು ಪಡೆದಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಮಲೆಯಾಳಂ ಸಿನೆಮಾ ಉದ್ಯಮದಲ್ಲಿ ಲೈಂಗಿಕ ಕಿರುಕುಳ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯ ನಂತರ ಎದ್ದ ಬಿರುಗಾಳಿಯ ಸಂದರ್ಭದಲ್ಲಿ ಕನ್ನಡ ಸಿನೆಮಾ ರಂಗದಲ್ಲಿಯೂ ಅಂತಹ ಸಮಿತಿಯನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಯೋಗವೊಂದು ಆಗ್ರಹಪಡಿಸಿತ್ತು. ಈ ಒತ್ತಡದಲ್ಲಿ ಕೆ.ಎಫ್.ಸಿ.ಸಿ. ಕವಿತಾ ಲಂಕೇಶ್ ಸಮಿತಿಯನ್ನು ನೇಮಕ ಮಾಡಿತ್ತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರೀಕ್ಷೆ ಸಮಯ,ನಡೆಯದ ಪಾಠ; ಪರೀಕ್ಷೆ ಮುಂದೂಡಿಕೆಗೆ ಕುಲಸಚಿವರಿಗೆ ವಿದ್ಯಾರ್ಥಿಗಳ ಆಗ್ರಹ

ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು...

‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಇತಿಹಾಸಕಾರ ರಾಮಚಂದ್ರ ಗುಹಾ ಆಯ್ಕೆ

ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಹಾಗೂ ಚಿಂತಕ ಡಾ.ರಾಮಚಂದ್ರ ಗುಹಾ ಅವರನ್ನು...

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

Download Eedina App Android / iOS

X