ಅಮೃತಸರದ ಗೋಲ್ಡನ್ ಟೆಂಪಲ್ನ ಪ್ರವೇಶದ್ವಾರದಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.
ತಕ್ಷಣವೇ ಸ್ಥಳದಲ್ಲಿದ್ದ ಜನರು ಗುಂಡಿನ ದಾಳಿ ನಡೆಸಿದವನನ್ನು ತಡೆದಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
VIDEO | Punjab: A man opened fire at Shiromani Akali Dal leader Sukhbir Singh Badal at the entrance of Golden Temple, Amritsar. The person was overpowered by people present on the spot. More details are awaited.#PunjabNews #SukhbirSinghBadal
— Press Trust of India (@PTI_News) December 4, 2024
(Full video available on PTI… pic.twitter.com/LC55kCV864
ಗುಂಡಿನ ದಾಳಿ ನಡೆಸಿದಾತ ಮಾಜಿ ಬಬ್ಬರ್ ಖಾಲ್ಸಾ ಇಂಟರ್ನ್ಯಾಶನಲ್ (ಬಿಕೆಐ) ಭಯೋತ್ಪಾದಕ ನರೇನ್ ಸಿಂಗ್ ಚೌರಾ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಪಂಜಾಬ್ ಉಪಚುನಾವಣೆ | ಶಿರೋಮಣಿ ಅಕಾಲಿದಳ ನಾಯಕ ಸೋಹನ್ ತಾಂಡಲ್ ಬಿಜೆಪಿ ಸೇರ್ಪಡೆ
ಸಿಖ್ ಸಮುದಾಯದ ನ್ಯಾಯಪೀಠ ಎಂದೇ ಪರಿಗಣಿಸಲಾಗುವ ಶ್ರೀ ಅಕಾಲ್ ತಖ್ತ್ ಸಾಹಿಬ್ ಪಂಜಾಬ್ನ ಮಾಜಿ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ಗೆ ಅವರಿಗೆ ಧಾರ್ಮಿಕ ಶಿಕ್ಷೆಯನ್ನು ವಿಧಿಸಿದೆ.
ಅಮೃತಸರದ ಗುರುದ್ವಾರ ಸಾಹಿಬ್ನಲ್ಲಿ ಪಾತ್ರೆಗಳನ್ನು ತೊಳೆಯುವುದು ಸೇರಿದಂತೆ ಇತರ ಧಾರ್ಮಿಕ ಶಿಕ್ಷೆಗಳನ್ನು ಸುಖ್ಬೀರ್ ಸಿಂಗ್ ಅವರಿಗೆ ವಿಧಿಸಿದೆ. ಅದರಂತೆ ಸುಖ್ಬೀರ್ ಸಿಂಗ್ ಸದ್ಯ ಅಮೃತಸರದ ಗೋಲ್ಡನ್ ಟೆಂಪಲ್ನ ಪ್ರವೇಶದ್ವಾರದಲ್ಲಿ ಸೇವಾದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ವೇಳೆ ಗುಂಡಿನ ದಾಳಿ ನಡೆದಿದ್ದು, ಸುಖ್ಬೀರ್ ಸಿಂಗ್ ಬಾದಲ್ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
