ಅಚ್ಛೇ ದಿನಗಳು ಮುಗಿದವು! ಗುಜರಾತ್ ವಜ್ರಗಳ ಉದ್ಯಮ ಭಾರೀ ಹಿಂಜರಿತದಲ್ಲಿ ತತ್ತರ!

Date:

Advertisements

ಗುಜರಾತಿನ ವಜ್ರಗಳ ಉದ್ಯಮವು ತೀವ್ರ ಹಿಂಜರಿತದಲ್ಲಿ ತತ್ತರಿಸಿದೆ. ಸುಮಾರು ಎರಡು ಸಾವಿರ ಫ್ಯಾಕ್ಟರಿಗಳು ಮುಚ್ಚಿ ಹೋಗಿವೆ. ಈ ವರ್ಷ ಇಲ್ಲಿಯವರೆಗೆ 60ಕ್ಕೂ ಹೆಚ್ಚು ವಜ್ರ ಕಾರ್ಮಿಕರು ಹಣಕಾಸಿನ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಸುಮಾರು 2 ಲಕ್ಷ ಮಂದಿ ಕೆಲಸಗಾರರು ನಿರುದ್ಯೋಗ ಎದುರಿಸಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಸೊರಗಿದ್ದ ಉದ್ಯಮ ಸದ್ಯಕ್ಕೆ ಚೇತರಿಸಿಕೊಳ್ಳುವ ಸೂಚನೆ ಇಲ್ಲ.

ತಮ್ಮ ಕಂಪನಿಯ ಉದ್ಯೋಗಿಗಳಿಗೆ 600 ಕಾರುಗಳನ್ನು ದೀಪಾವಳಿ ಉಡುಗೊರೆಯಾಗಿ ಕೊಟ್ಟಿದ್ದ ದಿನಗಳನ್ನು ಕಂಡಿದ್ದ ಉದ್ಯಮವಿದು. ಆರು ವರ್ಷಗಳ ಹಿಂದೆ ಸೂರತ್ ನ ವಜ್ರದ ವರ್ತಕ ಸಾವಜಿಭಾಯಿ ಧೋಲಾಕಿಯ 600 ಕಾರುಗಳ ಜೊತೆಗೆ 50 ಲಕ್ಷ ರುಪಾಯಿಯಿಂದ ಒಂದು ಕೋಟಿವರೆಗಿನ ಜೀವವಿಮೆಯ ಉಡುಗೊರೆ ನೀಡಿದ್ದುಂಟು.

ಈ ಉದ್ಯಮ ಇಂತಹ ತೀವ್ರ ಬಿಕ್ಕಟ್ಟನ್ನು ಎದುರಿಸಿರುವುದು ಕಳೆದ 50 ವರ್ಷಗಳಲ್ಲಿ ಇದೇ ಮೊದಲು ಎನ್ನಲಾಗಿದೆ.
ಸೂರತ್ ನಗರ ವಜ್ರಗಳ ಉದ್ಯಮ ಕೇಂದ್ರ. ದೀಪಾವಳಿಯ ನಂತರ ಇಲ್ಲಿನ ಶೇ.40ರಷ್ಟು ಫ್ಯಾಕ್ಟರಿಗಳು ಕದ ತೆಗೆದೇ ಇಲ್ಲ. ಅಹ್ಮದಾಬಾದ್ ನಲ್ಲಿ ಶೇ30ರಷ್ಟು ಫ್ಯಾಕ್ಟರಿಗಳು ಮುಚ್ಚಿವೆ. ರಾಜಕೋಟೆ, ಅಮ್ರೇಲಿ, ಭಾವನಗರ ಹಾಗೂ ಬೋಟದ್ ನಗರಗಳಲ್ಲಿನ ಶೇ.50-60ರಷ್ಟು ವಜ್ರದ ಉದ್ಯಮಗಳು ಬಂದ್ ಆಗಿವೆ.

ದಿನಕ್ಕೆ 12 ತಾಸುಗಳ ಕಾಲ ನಡೆಯುತ್ತಿದ್ದ ಫ್ಯಾಕ್ಟರಿಗಳು ಇದೀಗ ಆರು ತಾಸು ನಡೆದರೆ ಹೆಚ್ಚು. ಉದ್ಯೋಗಿಗಳ ಮಾಸಿಕ ಸಂಪಾದನೆ 25-30 ಸಾವಿರ ರುಪಾಯಿಗಳಿಂದ 8ರಿಂದ 12 ಸಾವಿರಕ್ಕೆ ಕುಸಿದಿದೆ. ಆಭರಣ ತಯಾರಿಸುವ ಕುಶಲಕರ್ಮಿಗಳ ವೇತನಗಳು ಶೇ.50ರಷ್ಟು ಕುಸಿದಿವೆ ಎಂದಿದ್ದಾರೆ ಗುಜರಾತ್ ಡೈಮಂಡ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಜಿಲಾರಿಯ.

ಕಳೆದ ಮೂರು ವರ್ಷಗಳಿಂದ ವಜ್ರಗಳ ವಲಯ ತೀವ್ರ ಸವಾಲುಗಳನ್ನು ಎದುರಿಸುತ್ತಿದೆ. ಅಮೆರಿಕಾ, ರಫ್ತು ಮಾರುಕಟ್ಟೆಯ ಕುಸಿತ ಮತ್ತು ರಷ್ಯನ್ ಮೂಲದ ವಜ್ರಗಳ ಮೇಲೆ ಜಿ-7 ರಾಷ್ಟ್ರಗಳು ವಿಧಿಸಿರುವ ನಿರ್ಬಂಧಗಳು ಈ ಬಿಕ್ಕಟ್ಟಿನ ಮೂಲ ಕಾರಣಗಳು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಇತ್ತೀಚೆಗೆ ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದೆ.

ಇತ್ತೀಚೆಗೆ ಪ್ರಯೋಗಾಲಯಗಳಲ್ಲಿ ಬೆಳೆಯಲಾಗುವ ಕೃತಕ ವಜ್ರಗಳು ಜನಪ್ರಿಯವಾಗತೊಡಗಿವೆ. ಈ ಉದ್ಯಮ 8,19,926 ಮಂದಿ ಉದ್ಯೋಗಿಗಳನ್ನು ಹೊಂದಿದೆ ಎಂದು ಎನ್.ಸಿ.ಎ.ಇ.ಆರ್. ಅಂಕಿಅಂಶಗಳು ಹೇಳುತ್ತವೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ದೆಹಲಿಯ 50ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

ದೆಹಲಿಯ 50ಕ್ಕೂ ಅಧಿಕ ಶಾಲೆಗಳಿಗೆ ಬುಧವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ...

Download Eedina App Android / iOS

X