ಉತ್ತರ ಕನ್ನಡ | ಅನಾಥರನ್ನು ಕರೆತಂದು ಸಲಹುವ ಕಾರ್ಯ ಎಲ್ಲರಿಂದ ಸಾಧ್ಯವಿಲ್ಲ: ಗಣೇಶ್ ನಾಯ್ಕ

Date:

Advertisements

ಮಾನವ ಹಕ್ಕುಗಳ ರಕ್ಷಣಾ ಪರಿಷತ್’ನ ಪದಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ರಕ್ಷಣಾ ಪರಿಷತ್’ನ ರಾಜ್ಯಾಧ್ಯಕ್ಷ ಗಣೇಶ ನಾಯ್ಕ ಮಾತನಾಡಿ, ಅನಾಥಾಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ಮತ್ತು ಮಮತಾ ನಾಯ್ಕ ಅವರ ಮಾನವೀಯ ಕಾರ್ಯ ಶ್ರೇಷ್ಠವಾದದ್ದು. ಅನಾಥರನ್ನು ಕರೆತಂದು ಸಲಹುವ ಕಾರ್ಯ ಎಲ್ಲರಿಂದ ಸಾದ್ಯವಿಲ್ಲ. ಇದಕ್ಕೆ ತ್ಯಾಗ ಮತ್ತು ಪರಿಶ್ರಮ ಬೇಕು. ಈ ಮಾನವೀಯ ಕಾರ್ಯದಲ್ಲಿ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ನಾಗರಾಜ ನಾಯ್ಕರಿಗೆ ಸದಾ ಬೆಂಬಲವಾಗಿರುತ್ತದೆ. ನಮ್ಮ ಎಲ್ಲಾ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ತನು, ಮನ, ಧನದಿಂದ ಆಶ್ರಯಧಾಮದ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.

ಇದೇ ವೇಳೆ ಆಶ್ರಯಧಾಮದಲ್ಲಿರುವ ಸುಮಾರು 65ಕ್ಕೂ ಅಧಿಕ ಅನಾಥ, ಅನಾರೋಗ್ಯ ಪೀಡಿತ ವ್ಯಕ್ತಿಗಳು, ಮಕ್ಕಳು, ಅನಾಥರಂತೆ ಬೀದಿಯಲ್ಲಿ ಬಿದ್ದಿರುವ ವಯಸ್ಸಾದವರು, ಶಾಲೆಗೆ ಹೋಗುತ್ತಿರುವ ಚಿಕ್ಕ ಮಕ್ಕಳು, ಕೈ ಇಲ್ಲದವರು, ಕಣ್ಣಿಲ್ಲದವರು, ವಿಕಲಚೇತನರಿಗೆ ಮಾನವ ಹಕ್ಕುಗಳ ರಕ್ಷಣಾ ಪರಿಷತ್’ನ ಕಡೆಯಿಂದ ಆಶ್ರಮ ವಾಸಿಗಳಿಗೆ ಉಪಯೋಗ ಆಗುವಂತಹ ಆಹಾರದ ಕಿಟ್, ಹಣ್ಣು, ತರಕಾರಿಗಳನ್ನು ವಿತರಿಸಿದರು.

Advertisements

ಈ ವರದಿ ಓದಿದ್ದೀರಾ? ಧಾರವಾಡ | ಕ್ರಿಮಿನಲ್ ಜೊತೆಗೇ ಪರಾರಿಯಾಗಿದ್ದ ಪೇದೆ: ಹುಬ್ಬಳ್ಳಿ ಪೊಲೀಸರ ವಶಕ್ಕೆ

ಈ ಸಂದರ್ಭದಲ್ಲಿ ಮಹಿಳಾ ಪ್ರಧಾನ ಕಾರ್ಯದರ್ಶಿ ಲೀಲಾವತಿ ವಿಷ್ಣು ದೇವಾಡಿಗ, ರಾಜ್ಯ ವಕ್ತಾರ ನಿರಂಜನ್ ಪಾಟೀಲ್, ಅಡಲ್ಟ್ಸ್ ಕಾರ್ಯದರ್ಶಿ ವಿಜಯ ಹೆಗಡೆ, ಲಲಿತಾ ಪರಮೇಶ್ವರ್ ನಾಯ್ಕ, ಆಡಳಿತ ಕಮೀಟಿ ಸದಸ್ಯರುಗಳಾದ ಜಿತೇಂದ್ರ, ನರೇಶ, ಶಿವಮೊಗ್ಗ ಜಿಲ್ಲಾಧ್ಯಕ್ಷರು ಮತ್ತು ಮುಂಡಗೋಡ ಉಸ್ತುವಾರಿ ಧನರಾಜ್ ಸಿ, ಅಧ್ಯಕ್ಷ ಉದಯ ಕುಮಾರ ಕವಟೆ, ಉಪಾಧ್ಯಕ್ಷ ಪರಶುರಾಮ ಎನ್ ಮೆಂತೆಕಾರ, ಪ್ರಧಾನ ಕಾರ್ಯದರ್ಶಿ ಮಂಜು ನೇಮಣ್ಣನವರ, ಉಪಾಧ್ಯಕ್ಷ ಮಾರುತಿ ಎ ಪುರದವರ, ಸಂಚಾಲಕ ಪ್ರಶಾಂತ ಎಸ್ ಕಾಂಬಳೆ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಎಸ್ ಕವಟೆ, ಮಹಿಳಾ ಪ್ರತಿನಿಧಿ ಚೈತ್ರಾ ಎಂ ಇಂಗಳಗಿ, ಕಲ್ಪನ ಮತ್ತು ಗಂಗವ್ವ ಹಾಗೂ ಅನಾಥಾಶ್ರಮದ ಮುಖ್ಯಸ್ಥ ಡಾ. ನಾಗರಾಜ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X