ಗುಬ್ಬಿ | ಮಕ್ಕಳಿಗೆ ವಹಿವಾಟು ಕಲಿಸಿದ ಸಂತೆಮೇಳ : ಸಂತೆ ಮೈದಾನವಾದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ

Date:

Advertisements

ವ್ಯಾಪಾರ ವ್ಯವಹಾರ ಜ್ಞಾನ ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಸಂತೆ ವ್ಯಾಪಾರದ ಪರಿಕಲ್ಪನೆಯಲ್ಲಿ ಆಯೋಜಿಸಿದ್ದ ಸಂತೆ ಮೇಳ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಿಜವಾದ ಸಂತೆಯ ಪ್ರತಿರೂಪ ಸೃಷ್ಟಿಸಿತ್ತು.

ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಹೆಚ್ಚಾಗಿ ಅಧ್ಯಯನ ಮಾಡುವ ಈ ಶಾಲೆಯಲ್ಲಿ ಹಳ್ಳಿ ಸೊಗಡಿನ ಮಕ್ಕಳು ಸಂತೆಯ ಅಪರಾವತಾರ ನಿರ್ಮಿಸಿದರು. ರೈತರ ಮಕ್ಕಳೇ ಬಹುತೇಕ ಇರುವ ಕಾರಣ ತಾವೇ ಬೆಳೆದ ತರಕಾರಿ, ಹಣ್ಣಗಳ ಜೊತೆ ಚುರುಮುರಿ, ಪಾನಿಪುರಿ, ಜ್ಯೂಸ್, ಕಾಫಿ ಟೀ ಹೀಗೆ ಎಲ್ಲವೂ ಶಾಲೆಯ ಆವರಣದಲ್ಲಿ ರಂಗು ರಂಗಾಗಿ ಕಾಣಿಸಿತು. ಹೆಣ್ಣು ಮಕ್ಕಳೇ ವ್ಯಾಪಾರಸ್ಥರಾಗಿ ವ್ಯವಹಾರ ನಡೆಸಿದ್ದು, ಚೌಕಾಸಿ ವ್ಯಾಪಾರ, ಗ್ರಾಹಕರ ನಡುವಿನ ಸಂಪರ್ಕ, ಲೆಕ್ಕಾಚಾರದ ಮನಸ್ಥಿತಿ ಎಲ್ಲವನ್ನೂ ಕಲಿಯುವ ವಾತಾವರಣ ಅಲ್ಲಿ ಸೃಷ್ಟಿಯಾಗಿತ್ತು.

1000785280

ಮಕ್ಕಳ ಸಂತೆಯಲ್ಲಿ ವ್ಯಾಪಾರ ಮಾಡಿದ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ ಮಕ್ಕಳಲ್ಲಿ ವ್ಯವಹಾರ ಜ್ಞಾನ ಇಲ್ಲವಾಗಿದೆ. ಮಕ್ಕಳ ತೀಕ್ಷ್ಣ ಮತಿ ಹೊರಬರಲು ಈ ಸಂತೆಮೇಳ ಉಪಯೋಗವಾಗಿದೆ. ಶಿಕ್ಷಣ ಇಲಾಖೆಯ ಈ ಕಲ್ಪನೆ ಮಕ್ಕಳಲ್ಲಿ ಗಣಿತಜ್ಞಾನ ವೃದ್ಧಿ ಮಾಡುತ್ತದೆ. ಅದರಲ್ಲೂ ಗ್ರಾಮೀಣ ಮಕ್ಕಳು ಹೆಚ್ಚಾಗಿರುವ ಈ ಶಾಲೆಯಲ್ಲಿ ಹೆಣ್ಣು ಮಕ್ಕಳು ವ್ಯಾಪಾರ ವ್ಯವಹಾರ ಮಾಡುವುದರಲ್ಲಿ ಎತ್ತಿದ ಕೈ ಎಂದು ತೋರಿಸಿದ್ದಾರೆ. ತರಕಾರಿ, ಹಣ್ಣುಗಳ ಜೊತೆ ಕೆಲ ವಸ್ತುಗಳು ಮಾರಾಟಕ್ಕೆ ಬಂದಿದ್ದು ನಿಜವಾದ ಸಂತೆಯ ವೈಭವ ಕಂಡು ಬಂತು. ನಾಲ್ಕು ಗೋಡೆಯ ಶಿಕ್ಷಣಕ್ಕಿಂತ ಹೊರಗಿನ ಪ್ರಪಂಚ ತೋರಿಸುವ ಈ ಶಿಕ್ಷಣ ಉತ್ತಮ ಎಂದರು.

Advertisements
1000785278

ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಸಂತೆಗೆ ಭೇಟಿ ನೀಡಿ ಮಕ್ಕಳ ಆಸಕ್ತಿ ಆಲಿಸಿದರು. ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ರೇಣುಕಪ್ಪ, ಮುಖ್ಯಶಿಕ್ಷಕಿ ದೇವಿಕಾ ಇತರರು ಇದ್ದರು.


‘ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ನಡೆಸಿ ಮಕ್ಕಳ ಪ್ರತಿಭೆಗೆ ವೇದಿಕೆ ಸೃಷ್ಟಿಸಿದೆ. ಈ ಜೊತೆಗೆ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಸಂತೆ ಮೇಳ ನಡೆಸುತ್ತಿದ್ದು ಮಕ್ಕಳಿಗೆ ಶಾಲೆಯ ಹೊರತಾದ ಪ್ರಪಂಚ ಪರಿಚಯ ಮಾಡಲಾಗುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X