ಗುಬ್ಬಿ | ಕೇಂದ್ರದ ಗೃಹಮಂತ್ರಿ ಅಮಿತ್ ಷಾ ಅವರನ್ನು ಗಡಿಪಾರು ಮಾಡಬೇಕು : ಛಲವಾದಿ ಮಹಾಸಭಾ ಆಗ್ರಹ

Date:

Advertisements

ಇಡೀ ವಿಶ್ವಮಾನ್ಯ ಪಡೆದ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಛಲವಾದಿ ಮಹಾಸಭಾದ ತಾಲ್ಲೂಕು ಘಟಕ ಆಗ್ರಹಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಬಂದ ಛಲವಾದಿ ಮಹಾಸಭಾದ ಸದಸ್ಯರು ಹಾಗೂ ದಲಿತ ಪರ ಸಂಘಟನೆಯ ಮುಖಂಡರು ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಈರಣ್ಣ ಮಾತನಾಡಿ ಅಂಬೇಡ್ಕರ್ ಹೆಸರು ಜಪ ಮಾಡುವ ಬದಲು ದೇವರ ಹೆಸರು ಜಪ ಮಾಡಿ ಅನ್ನುವ ಅಮಿತ್ ಷಾ ಅವರು ಚುನಾವಣಾ ಮೂಲಕ ಆಯ್ಕೆಯಾದ ನಿಮಗೆ ಮತ ನೀಡಿದ್ದು ಅಂಬೇಡ್ಕರ್ ಅನುಯಾಯಿಗಳು. ಯಾವ ದೇವರು ನಿಮಗೆ ಮತ ನೀಡಿಲ್ಲ. ಸಂವಿಧಾನದ ಚೌಕಟ್ಟಿನ ಎಲ್ಲಾ ಜಾತಿ ಧರ್ಮದ ಜನರ ಮತದಿಂದ ಆಯ್ಕೆಯಾಗಿ ಈಗ ಅವರನ್ನು ಹೀಯಾಳಿಸುವ ಪ್ರವೃತ್ತಿ ನಿಮ್ಮ ದುರ್ಬುದ್ಧಿ ತೋರುತ್ತದೆ. ಹೇಳಿಕೆ ನೀಡಿ ಈಗ ಕ್ಷಮೆ ಕೇಳಿದರೂ ನಿಮಗೆ ಶಿಕ್ಷೆ ಆಗುವವರಿವಿಗೂ ಉಗ್ರ ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Advertisements

ಭಾರತ್ ಭೀಮ್ ಸೇನೆಯ ಸಚಿನ್ ಮಾತನಾಡಿ ಅಂಬೇಡ್ಕರ್ ಹೆಸರು ಅಜರಾಮರ. ಇಡೀ ವಿಶ್ವವೇ ಹೊಗಳುವ ಅವರ ತತ್ವಾದರ್ಶಗಳನ್ನು ಸಹಿಸದ ಈ ಬಿಜೆಪಿ ಮುಖಂಡ ಅಮಿತ್ ತಮ್ಮ ಅಸೂಯೆ ಗುಣ ವ್ಯಕ್ತಪಡಿಸಿದ್ದಾರೆ. ವರ್ಷ ಕಳೆದಂತೆ ಅಂಬೇಡ್ಕರ್ ಅವರ ಅಭಿಮಾನಿಗಳು, ಅನುಯಾಯಿಗಳ ಸಂಖ್ಯೆ ಸಾವಿರಾರು ಜನ ಸಿಡಿದೇಳುತ್ತಾರೆ. ಅಮಿತ್ ಷಾ ಅವರ ಹೇಳಿಕೆಗೆ ಯುವ ಜನಾಂಗವೇ ಆಕ್ರೋಶಭರಿತವಾಗಿದೆ. ಕೂಡಲೇ ಗೃಹ ಮಂತ್ರಿ ಸ್ಥಾನದಿಂದ ವಜಾಗೊಳಿಸಿ ಎಂದು ಒತ್ತಾಯಿಸಿದರು.

ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಿಗೆ ಮನವಿ ಸಲ್ಲಿಸಿ ರಾಷ್ಟ್ರಪತಿಗಳಿಗೆ ಪತ್ರ ರವಾನೆಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹಾಸಭಾ ಮುಖಂಡರಾದ ಕಿಟ್ಟದಕುಪ್ಪೆ ನಾಗರಾಜ್, ಹರಿವೇಸಂದ್ರ ಕೃಷ್ಣಪ್ಪ, ಮಹಿಳಾ ಘಟಕದ ಗಿರಿಜಮ್ಮ, ಸಾತೇನಹಳ್ಳಿ ರಮೇಶ್, ಗೋಪಾಲ್, ಮಧು, ಮಂಜುನಾಥ್, ಕೊಲ್ಕಾರ್ ರವಿ, ಇಮ್ರಾನ್ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕೇಸರಿ ಶಾಲು ಹಾಕಿಕೊಂಡ ದಲಿತ ನಾಯಕರು ನಾಪತ್ತೆ ಆಗಿದ್ದಾರೆ,,,, ನೀವುಗಳು ಟೀವಿ ಮುಂದೆ ಬಂದು ನಿಮ್ಮದೇ ವರ್ಗದವರನ್ನು ಹಿಂದುಳಿದ ವರ್ಗದ ಮುಖ್ಯಮಂತ್ರಿಯನ್ನು ಬೈಯ್ದುಕೊಳ್ಳಲು, ಅಧಿಕಾರ ಹಕ್ಕು ನೀಡಿದ್ದೆ ಅಂಬೇಡ್ಕರ್ ಮತ್ತು ಸಂವಿಧಾನ,,ಈಗ ನಿಮ್ಮದೆ ಜುಮ್ಲಾ ವ್ಯಾಪಾರಿಗಳು ಅವರ ಬಗ್ಗೆ ತಮ್ಮ ತಿರಸ್ಕಾರ ಭಾವನೆ ವಾಂತಿ ಮಾಡಿಕೊಂಡಾಗ ನೀವುಗಳು ನಿಮ್ಮ ಸ್ವಾಭಿಮಾನ ಸ್ವಂತಿಕೆಯನ್ನು ಜುಮ್ಲಾಗಳ ಪಾದಾರವಿಂದಗಳಲ್ಲಿ ಅರ್ಪಣೆ ಮಾಡಿ ಶತಮಾನಗಳಿಂದ ತಲೆ ಮೇಲೆ ಹೊತ್ತುಕೊಂಡ ಗುಲಾಮಗಿರಿ ಖಾಯಂ ಮಾಡಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

ತುಮಕೂರು | ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ : ಡಿಕೆಶಿ ವಿರುದ್ಧ ಕೆ. ಎನ್ ರಾಜಣ್ಣ ವಾಗ್ದಾಳಿ

ಡಿ.ಕೆ.ಶಿವಕುಮಾ‌ರ್ ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದ ಬಗ್ಗೆ  ಮಾಜಿ ಸಚಿವ ಕೆ...

Download Eedina App Android / iOS

X