ಕೋಲ್ಕತ್ತಾದಲ್ಲಿ ಅರ್ಧಕ್ಕಿಂತ ಹೆಚ್ಚು ‘ಹಳದಿ ಟ್ಯಾಕ್ಸಿ’ಗಳು ರಸ್ತೆಯಿಂದ ಹೊರಬೀಳಲಿವೆ; ಕಾರಣ ಇಲ್ಲಿದೆ!

Date:

Advertisements

ಪಶ್ಚಿಮ ಬಂಗಾಳ ರಾಜ್ಯ ಸಾರಿಗೆ ಇಲಾಖೆಯು ವಾಹನಗಳಿಗೆ 15 ವರ್ಷಗಳ ಸೇವಾ ಮಿತಿಯನ್ನು ವಿಧಿಸಿರುವ ಕಾರಣದಿಂದಾಗಿ 2025ರ ಮಾರ್ಚ್‌ ವೇಳೆಗೆ ಕೋಲ್ಕತ್ತಾದ ಸುಮಾರು 64% ಹಳದಿ ಟ್ಯಾಕ್ಸಿಗಳು ರಸ್ತೆಯಿಂದ ಹೊರಗುಳಿಯಲಿವೆ. ದಾಖಲೆಗಳ ಪ್ರಕಾರ, ಕೋಲ್ಕತ್ತಾದಲ್ಲಿ ಸುಮಾರು 7,000 ನೋಂದಾಯಿತ ಹಳದಿ ಟ್ಯಾಕ್ಸಿಗಳಿವೆ. ಅವುಗಳಲ್ಲಿ ಸುಮಾರು 4,500 ಟ್ರಾಕ್ಸಿಗಳು 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳಷ್ಟು ಹಳೆಯವು. ಅವುಗಳ ಸೇವೆಯನ್ನು ನಿರ್ಬಂಧಿಸಲು ಸಾರಿಗೆ ಇಲಾಖೆ ಮುಂದಾಗಿದೆ.

ಈ ಟ್ಯಾಕ್ಸಿಗಳು ಬಹುತೇಕ ಎಲ್ಲ ಟ್ಯಾಕ್ಸಿಗಳು ಹಿಂದೂಸ್ತಾನ್ ಮೋಟಾರ್ಸ್ ಲಿಮಿಟೆಡ್ (HML) ಕಂಪನಿಯ ‘ಅಂಬಾಸಿಡರ್’ ವಾಹನಗಳಾಗಿವೆ. ಕಂಪನಿಯು ಈ ನಿರ್ದಿಷ್ಟ ಬ್ರಾಂಡ್‌ನ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಆ ವಾಹನಗಳನ್ನು ಬದಲಿಸಲು ಕೂಡ ಅವಕಾಶ ಇಲ್ಲವಾಗಿದೆ. ಹೀಗಾಗಿ, ಹಳದಿ ಟ್ಯಾಕ್ಸಿಗಳು ಕೋಲ್ಕತ್ತಾ ನೆಲದಲ್ಲಿ ಕಣ್ಮರೆಯಾಗುವ ಸಾಧ್ಯತೆ ಇದೆ.

ಕೋಲ್ಕತ್ತಾದಲ್ಲಿ ಹಳದಿ ಟ್ಯಾಕ್ಸಿಗಳು ಯಾವಾಗ ರಸ್ತೆಗಳಿದವು ಎಂಬುದು ಸ್ಪಷ್ಟವಾಗಿಲ್ಲ. ಆದರೆ, 1908ರಲ್ಲಿ ಮೊದಲ ಬಾರಿಗೆ ಹಳದಿ ಟ್ಯಾಕ್ಸಿಗಳು ಸಂಚಾರ ಆರಂಭಿಸಿದ್ದವು ಎಂದು ರಾಜ್ಯ ಸಾರಿಗೆಯ ಕೆಲವು ದಾಖಲೆಗಳು ಹೇಳುತ್ತವೆ. ಆದಾಗ್ಯೂ, ಕಲ್ಕತ್ತಾ ಟ್ಯಾಕ್ಸ್ ಅಸೋಸಿಯೇಷನ್ ​​1962ರಲ್ಲಿಯೇ ಸ್ಟ್ಯಾಂಡರ್ಡ್ ಟ್ಯಾಕ್ಸ್ ಮಾಡೆಲ್ ಆಗಿ ‘ಅಂಬಾಸಿಡರ್’ಅನ್ನು ಅಳವಡಿಸಿಕೊಂಡಿತು. ಅಲ್ಲದೆ, ಸಂಜೆಯ ನಂತರವೂ ಬಣ್ಣವು ಸ್ಪಷ್ಟವಾಗಿ ಗೋಚರಿಸುವ ಕಾರಣ ಟ್ಯಾಕ್ಸಿಗಳ ಬಣ್ಣವಾಗಿ ಹಳದಿ ಬಣ್ಣವನ್ನು ಆಯ್ಕೆ ಮಾಡಿಕೊಂಡಿತು ಎಂದು ಹೇಳಿಕೊಂಡಿದೆ.

Advertisements

ಆದರೆ, ಇತ್ತೀಚೆಗೆ ಅಪ್ಲಿಕೇಷನ್ ಕ್ಯಾಬ್‌ಗಳ ರಸ್ತೆಗಳಿದ ಬಳಿಕ, ಹಳದಿ ಟ್ಯಾಕ್ಸಿಗಳ ಜನಪ್ರಿಯತೆ ಕಡಿಮೆಯಾಗಿದೆ. ಆದರೂ, ಹಳದಿ ಟ್ಯಾಕ್ಸಿಗಳಿಗೆ ಸಂಬಂಧಿಸಿದ ‘ನಾಸ್ಟಾಲ್ಜಿಯಾ’ವನ್ನು ಪರಿಗಣಿಸಿ, ಅವುಗಳನ್ನು ಜೀವಂತವಾಗಿಡಲು ರಾಜ್ಯ ಸಾರಿಗೆ ಇಲಾಖೆಯು ಪ್ರಯತ್ನಿಸುತ್ತಿದೆ.

ಈ ವರದಿ ಓದಿದ್ದೀರಾ?: ಅದಾನಿ ಸೋಲಾರ್ ಒಪ್ಪಂದದ ಹಿಂದಿದೆ ಕೇಂದ್ರ-ಆಂಧ್ರ ಸರ್ಕಾರಗಳ ಚಮತ್ಕಾರ

“ಅಂಬಾಸಿಡರ್ ರೀತಿಯ ವಾಹನಗಳನ್ನು ಪತ್ತೆ ಕಾರ್ಯಾಚರಣೆಗೆ ತರುವ ಪ್ರಶ್ನೆ ಇಲ್ಲ. ಅಂಬಾಸಿಡರ್‌ಅನ್ನು ತಯಾರಿಸುವ ಕಂಪನಿಯು ಈಗ ಈ ಬ್ರಾಂಡ್‌ನ ಉತ್ಪಾದನೆಯನ್ನು ನಿಲ್ಲಿಸಿದೆ. ಆದಾಗ್ಯೂ, ಹಳೆಯ ಹಳದಿ ಟ್ಯಾಕ್ಸಿಗಳ ಪರವಾನಗಿಗಳನ್ನು ಹೊಂದಿರುವ ಮಾಲೀಕರು ಹಳೆಯದಕ್ಕೆ ಬದಲಾಗಿ ಹೊಸ ವಾಣಿಜ್ಯ ಸಾರಿಗೆ ಪರವಾನಗಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅದರ ನಂತರ ಯಾವುದೇ ಮಾಲೀಕರು, ತಮ್ಮ ವಾಹನಕ್ಕೆ ಹಳದಿ ಬಣ್ಣವನ್ನು ಬಳಿಯಲು ಇಚ್ಛಿಸಿದರೆ ರಾಜ್ಯ ಸಾರಿಗೆ ಇಲಾಖೆಯಿಂದ ವಿಶೇಷ ಅನುಮತಿ ನೀಡಲಾಗುತ್ತದೆ. ಟ್ಯಾಕ್ಸಿ ಅಸೋಸಿಯೇಷನ್‌ಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X