ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ರವರಿಗೆ ಅವಮಾನ ಮಾಡಿ ಆಡಿದ ಮಾತುಗಳು ಮತ್ತು ಕರ್ನಾಟಕ ವಿಧಾನ ಸಭಾ ಅಧಿವೇಶನದಲ್ಲಿ ಶಾಸಕ ಸಿ.ಟಿ ರವಿಯವರು ರಾಜ್ಯದ ಮಹಿಳಾ ಮತ್ತು ಮಕ್ಕಳ ಸಚಿವರಾದ ಲಕ್ಷೀ ಹೆಬ್ಬಲ್ಕರ್ ಬಗ್ಗೆ ಅಕ್ಷೇಪಾರ್ಹಮಾತುಗಳನ್ನು ಖಂಡಿಸಿ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ದಲಿತ ಹಕ್ಕುಗಳ ಸಮಿತಿ ಹಾಗೂ ಜನವಾದ ಮಹಿಳಾ ಸಂಘ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ಅಮಿತ್ ಶಾರವರಿಗೆ ಸಚಿವರಾಗಿ ಮುಂದುವರಿಯುವ ಯಾವ ಅಧಿಕಾರವೂ ಇಲ್ಲ ಅವರು ತಕ್ಷಣವೇ ರಾಜಿನಾಮೆ ಕೊಡಬೇಕು. ಕರ್ನಾಟಕದ ವಿಧಾನ ಪರಿಷತ್ನಲ್ಲಿ ಬಿಜೆಪಿಯ ಶಾಸಕ ಸಿ.ಟಿ.ರವಿಯವರು ರಾಜ್ಯದ ಮಹಿಳಾ ಸಚಿವರನ್ನು ಉದ್ದೇಶಿಸಿ ಅಕ್ಷೇಪಾರ್ಹ ಮಾತುಗಳನ್ನು ನಾವು ಖಂಡಿಸುತ್ತೆವೆ. ಸಡಿಲ ನಾಲಗೆಯ ಹಗುರ ಮಾತುಗಳಾನ್ನಾಡುವ ಚಾಳಿಯನ್ನು ಹೊಂದಿರುವ ಸಿ.ಟಿ. ರವಿಯವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಸಂಘವು ಒತ್ತಾಯಿಸಿತು.
ದೇಶದ ಸಂವಿಧಾನದ ಬೆಳಕಿನಲ್ಲಿ ಸರ್ವಸಮಾನತೆಯನ್ನು ಒಪ್ಪಿಕೊಂಡು, ಲಿಂಗಜಾತಿ ಮತ ಧರ್ಮಬೇಧವಿಲ್ಲದೇ ಬಾಳುವ ಆಶಯವನ್ನು ಹೊಂದಿರುವ ಬಹು ತತ್ವ ಭಾರತದ ಜನತೆಯಾಗಿ ನಾವು ಈ ಮೇಲಿನ ಒತ್ತಾಯಗಳನ್ನು ಮಾಡುತ್ತಿದ್ದೆವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನಾ ಸಭೆಯಲ್ಲಿ ಜನವಾದಿ ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಕುಂದಾಪುರ ಮಹಿಳಾ ಸಂಘದ ಅಧ್ಯಕ್ಷರಾದ ಬಲ್ಕೀಸ್, ಬೈಂದೂರು ಮಹಿಳಾ ಸಂಘದ ಅಧ್ಯಕ್ಷರಾದ ನಾಗರತ್ನ ನಾಡ, ಮುಖಂಡರಾದ ನಳಿನಿ.ಎಸ್, ಗಿರಿಜಾ, ರವಿಕಲಾ, ಪದ್ದು, ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ರಾದ ಸಂಜೀವ ಬಳ್ಕೂರು, ಮುಖಂಡರಾದ ರವಿ.ವಿ.ಎಮ್ ಕುಂದಾಪುರ, ರಾಮ ಕಾರ್ಕಡ, ಸಾಲಿಗ್ರಾಮ, ರಂಗನಾಥ ಉಡುಪಿ, ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಕೋಶಾಧಿಕಾರಿ ಶಶಿಧರ ಗೋಲ್ಲ, ಉಪಾಧ್ಯಕ್ಷ ರಾದ ಎಚ್.ನರಸಿಂಹ, ಚಿಕ್ಕ ಮೊಗವೀರ, ಕಾರ್ಯದರ್ಶಿ ಚಂದ್ರಶೇಖರ, ಸಿಐಟಿಯು ಉಡುಪಿ ವಲಯ ಸಂಚಾಲಕ ರಾದ ಕವಿರಾಜ್. ಎಸ್.ಕಾಂಚನ್, ಮುಖಂಡರಾದ ಸುಭಾಸ್ ನಾಯಕ್, ಸದಾಶಿವ ಪೂಜಾರಿ, ಉಮೇಶ್ ಕುಂದರ್, ಮೋಹನ್ ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘದ ಜಿಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಉಪಸ್ಥಿತರಿದ್ದರು.
