ಕಂದಾಯ ಸಚಿವ ಕೃಷ್ಣಬೈರೇಗೌಡ ಖಾಸಗಿ ವಾಹನದಲ್ಲಿ ಬಂದು, ದೊಡ್ಡಬಳ್ಳಾಪುರ ತಾಲೂಕು ಕಚೇರಿಯ, ಉಪವಿಭಾಗಧಿಕಾರಿ ಕಚೇರಿಗೆ ಗುರುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಿಗ್ಗೆ 10.30 ಅಗಿದ್ದರೂ ಯಾರೊಬ್ಬ ಅಧಿಕಾರಿಗಳೂ ಕಚೇರಿಗೆ ಬಾರದೆ ಇರುವ ಬಗ್ಗೆ ಜಿಲ್ಲಾಧಿಕಾರಿಗೆ ಕರೆ ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಸರ್ಕಾರದ ಯೋಜನೆ ಸೌಲಭ್ಯಗಳು ಕುರಿಗಾಹಿಗಳಿಗೆ ಸಮರ್ಪಕವಾಗಿ ತಲುಪಬೇಕು: ಜಿ.ಪಂ ಸಿಇಒ ರಾಹುಲ್ ರತ್ನಂ
ಸಚಿವರ ಭೇಟಿ ಅರ್ಧ ಗಂಟೆ ನಂತರ ವಿಷಯ ಕಾರ್ಯ ನಿರ್ವಾಹಕರು ಮಾತ್ರ ಬಂದರು. ಸಮಯ 10.30 ಅಗಿದ್ದರೂ ಕೂಡಾ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದೆ, ಅನ್ಯ ಕಾರ್ಯ ನಿಮಿತ್ತ ಹೊರಗೆ ಹೋಗಿರುವ ಬಗ್ಗೆ ಹಾಜರಾತಿ ಪುಸ್ತಕದಲ್ಲಿ ನಮೂದಿಸದೆ ಇರುವ ಬಗ್ಗೆಯೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.