ಸಾಮ್ರಾಜ್ಯ ವಿಸ್ತರಣೆಗಾಗಿ ಜಗತ್ತಿನಲ್ಲಿ ಅನೇಕ ಕದನಗಳು ನಡೆದು ಹೋಗಿವೆ. ಆದರೆ ಅಸಮಾನ ವ್ಯವಸ್ಥೆಯ ವಿರುದ್ಧ ಸಿಡಿದು, ಆತ್ಮಗೌರವ, ಸ್ವಾಭಿಮಾನಕ್ಕಾಗಿ ನಡೆದ ಏಕೈಕ ಯುದ್ಧವೇ ಭೀಮಾ ಕೋರೆಗಾಂವ್ ವಿಜಯೋತ್ಸವ ಎಂದು ಕವಿ ವೀರಪ್ಪ ತಾಳದವರ ಹೇಳಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದಲ್ಲಿ ಅಂಬೇಡ್ಕರ್ ಯುವ ತರುಣ ಸಂಘದಿಂದ ಹಮ್ಮಿಕೊಂಡಿದ್ದ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕೋರೆಗಾಂವ್ ಯುದ್ಧವು ವೀರರ ಸಾಹಸ, ಧೈರ್ಯ, ಶಿಸ್ತು ಸಕಲ ಭಾರತೀಯರಿಗೆ ದೊಡ್ಡ ಮಾದರಿ. ಆದ್ದರಿಂದ ಬದುಕಿನ ಸವಾಲುಗಳನ್ನು ಎದುರಿಸಲು ನಾವೂ ಕೂಡಾ ಶಿಸ್ತಿನ ಸಿಪಾಯಿಗಳಾಗುತ್ತಲೇ ಮಹರ್ ಕಲಿಗಳ ಸ್ಮರಣೆಯನ್ನು ಪ್ರತಿ ವರ್ಷ ನಾವು ಮಾಡಬೇಕು” ಎಂದು ಕವಿ ವೀರಪ್ಪ ತಾಳದವರ ಅನಿಸಿಕೆ ವ್ಯಕ್ತಪಡಿಸಿದರು.
ಸಂಜೆ ಮೇಣದ ಬೆಳಕಿನೊಂದಿಗೆ ಊರಿನ ಮುಖ್ಯ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದ ಗ್ರಾಮದ ಯುವಕರು, 1818ರ ಜನವರಿ 01ರ ರೋಚಕ ದಂಗೆಯನ್ನು ಮೆಲುಕು ಹಾಕುತ್ತಲೇ ಅಂಬೇಡ್ಕರರು ಕಟ್ಟಿಕೊಟ್ಟ ಇತಿಹಾಸವನ್ನು ಉಳಿಸಲು ನಾವೆಲ್ಲರೂ ಸನ್ನದ್ದರಾಗೋಣ ಎಂದು ಪರಸ್ಪರ ಶಪಥ ಮಾಡಿಕೊಂಡರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಾಣಂತಿಯರ ಸಾವು ಪ್ರಕರಣ; ಸಚಿವ ದಿನೇಶ್ ಗುಂಡೂರಾವ್ ವಜಾಕ್ಕೆ ಬಿಜೆಪಿ ಪ್ರತಿಭಟನೆ
ಭರಮಪ್ಪ ಕೊಳ್ಳಪ್ಪನವರ, ನಿಂಗರಾಜ ಕಡಿ ಕಾರ್ಯಕ್ರಮದ ಗೌರವ ಉಪಸ್ಥಿತಿ ವಹಿಸಿದ್ದರು. ಯುವ ಮುಖಂಡರಾದ ರವಿ ಕಾಳಿ, ಅಶೋಕ ತಾಳದವರ, ನಿಂಗರಾಜ ಚಲವಾದಿ, ವಸಂತ ಹೆಬಸೂರು, ರಾಜು ಕೊಳ್ಳಪ್ಪನವರ, ವಿಶ್ವ ಕೊಳ್ಳಪ್ಪನವರ, ಹನುಮಂತ ಜೆ ಬಿ ದೇವಪ್ಪ ಕೊಳ್ಳಪ್ಪನವರ, ಮಂಜು ಹೆಬಸೂರು, ಮುತ್ತು ಕುರ್ತಕೋಟಿ, ಪುಂಡಲೀಕ ಕೆ, ಶರಣಪ್ಪ ಕೊಳ್ಳಪ್ಪನವರ, ಪ್ರಶಾಂತ ತಾಳದವರ ಸೇರಿದಂತೆ ಅನೇಕ ಸಂಘಟಕರಿದ್ದರು. ವಿದ್ಯಾರ್ಥಿಗಳು ಗೌರವ ವಂದನೆ ಸಲ್ಲಿಸಿದರು.