ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಡಿದ್ದು, ಆತ್ಮಹತ್ಯೆಗೂ ಎರಡು ದಿನದ ಮೊದಲು ಸಚಿನ್ ಬೀದರ್ ನಗರದ ಬಾರ್ವೊಂದರಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಇದ್ದದ್ದು ಸಿಸಿ ಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ಡಿ.24 ರಂದು ಸಂಜೆ 6:27 ಕ್ಕೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಆಗಮಿಸಿದ್ದ ಸಚಿನ್ ಪಾಂಚಾಳ, ಬಿಯರ್ ಕುಡಿದು, ಊಟ ಮಾಡಿ ರಾತ್ರಿ 8.46ಕ್ಕೆ ಬಾರ್ನಿಂದ ವಾಪಸ್ ಹೋಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೋಟೆಲ್ನಲ್ಲಿ ವೇಟರ್ ಕೃಷ್ಣ ಎಂಬಾತನ ಮೊಬೈಲ್ನಿಂದ ಸಹೋದರಿಯರಿಗೆ ಕಾಲ್ ಮಾಡಿದ್ದ. ಇದು ಕುಟುಂಬಸ್ಥರಿಗೆ ಆತ ಮಾಡಿದ ಕೊನೆಯ ಕಾಲ್ ಆಗಿತ್ತು. ಅಷ್ಟೇ ಅಲ್ಲ ತನ್ನ ಭಾವನಿಂದ ವೇಟರ್ ಕೃಷ್ಣಗೆ 1,500 ರೂ. ಹಾಕಿಸಿಕೊಂಡಿದ್ದರು. 650 ರೂ. ಬಾರ್ ಬಿಲ್ ಪೇ ಮಾಡಿ , ಉಳಿದ ಹಣ ವೇಟರ್ ಕೃಷ್ಣನಿಂದ ಪಡೆದಿದ್ದರು. ಹೋಗುವಾಗ ಯಾರದೇ ಫೋನ್ ಕಾಲ್ ಬಂದರೂ ಸ್ವೀಕರಿಸದಂತೆ ವೇಟರ್ ಕೃಷ್ಣಾಗೆ ಸಚಿನ್ ಹೇಳಿ ಬಾರ್ನಿಂದ ಹೋಗಿದ್ದರು ಎಂಬುದು ಗೊತ್ತಾಗಿದೆ.
ಈ ಸುದ್ದಿ ಓದಿದ್ದೀರಾ? ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬದ ಮೇಲೇಕೆ ಆರೆಸ್ಸೆಸ್ನಿಂದ ವ್ಯವಸ್ಥಿತ ದಾಳಿ?
ಡಿ.25ಕ್ಕೆ ಸಚಿನ್ ಮರಣ ಪತ್ರ ಬರೆದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ಗಮನಿಸಿದ್ದ ಸಹೋದರಿಯರು ಅಂದು ವೇಟರ್ ಕೃಷ್ಣ ಮೊಬೈಲ್ಗೆ ಸಚಿನ್ ಸಹೋದರಿಯರು. ಡಿ.26ರಂದು ಸಚಿನ್ ಪಾಂಚಾಳ್ ರೈಲ್ವೆ ಹಳಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.