ಬೆಂಗಳೂರು | ನಗರಗಳಲ್ಲಿ ಸಮಾನ ಪಾಲುದಾರಿಕೆ ಕಣ್ಮರೆ: ಬಂಜಗೆರೆ ಜಯಪ್ರಕಾಶ್

Date:

Advertisements

“ನಗರ ಕೇಂದ್ರಿತವಾದ ಉದ್ಯಮೀಕರಣ ನಗರಗಳಲ್ಲಿ ಸಮಾನ ಪಾಲುದಾರಿಕೆಯನ್ನು ಕಣ್ಮರೆ ಮಾಡಿದೆ. ನಗರೀಕರಣಕ್ಕೆ ವಿಪುಲವಾದ ಅವಕಾಶ ನೀಡಿದೆ. ಲಾಭಕ್ಕಾಗಿ ಮಾರುಕಟ್ಟೆ ವ್ಯವಸ್ಥೆಯ ವಿಸ್ತರಣೆ ಮಾಡಿ ತಮ್ಮ ಉತ್ಪಾದನೆಗೆ ಜನ ಸಮೂಹವನ್ನು ಗ್ರಾಹಕರನ್ನಾಗಿಸುವ ನಾಗರಿಕತೆಯನ್ನು ಪ್ರೋತ್ಸಾಹಿಸುತ್ತದೆ. ಇದಕ್ಕೆ ಹೊಂದಿಕೊಳ್ಳದವರನ್ನು ಅನರ್ಹರೆಂದು ಡಿಸ್‌ಕಾರ್ಡ್ ಮಾಡಲಾಗುತ್ತಿದೆ” ಎಂದು ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ‘ಸ್ಲಂ ಜನಾಂದೋಲನ-ಕರ್ನಾಟಕ’ ಸಂಘಟನೆ ಆಯೋಜಿಸಿದ್ದ ನಗರೀಕರಣದಲ್ಲಿ ಸ್ಲಂ ಜನರು ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರಗಳ ಕುರಿತು ರಾಜ್ಯಮಟ್ಟದ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

“ನಗರೀಕರಣ ಕೃಷಿ ಮತ್ತು ಶ್ರಮ ಸಂಸ್ಕೃತಿಯ ಚಟುವಟಿಕೆಗಳನ್ನು ನಾಶ ಮಾಡಿ ದುಡಿಮೆಗೆ ಸಮಾನ ಹಂಚಿಕೆ ನೀಡದೆ ನಗರಗಳ ಮೇಲಿನ ಸಮಾನ ಪಾಲುದಾರಿಕೆಯನ್ನು ತಂತ್ರಜ್ಞಾನ ಇಲ್ಲದಂತಾಗಿಸುತ್ತಿದೆ. ತಂತ್ರಜ್ಞಾನದಿಂದ ಹೆಚ್ಚು ಪ್ರಾಡೆಕ್ಟ್ಗಳ ಉತ್ಪಾದನೆ ಮತ್ತು ಸಂಪನ್ಮೂಲಗಳ ವಿಸ್ತರವಾಗಿರುವ ಕಾರಣ ಪ್ರಾಡೆಕ್ಟ್ಗಳು ಎಕ್ಸ್ಪೈರಿಯಾಗಿ ಚೆಲ್ಲಲ್ಪಡುತ್ತಿವೆ. ಲಾಭಗಳಿಕೆ ತುತ್ತ ತುದಿಯಲ್ಲಿದ್ದು ಸೌಕರ್ಯಗಳು ಉನ್ನತ್ತ ಮಟ್ಟದಲ್ಲಿವೆ, ಆದರೆ ನಗರಗಳಲ್ಲಿ ಬಡಜನರಿಗೆ ಲಭ್ಯತೆಗಳು ಇಲ್ಲದ್ದಂತೆ ಮಾಡಲಾಗಿದೆ. ನಗರಗಳಲ್ಲಿ ಉತ್ಪಾದನೆ ಜಾಸ್ತಿಯಾದಂತೆ ಸ್ಲಂಗಳು ಹೆಚ್ಚಾಗುತ್ತಿವೆ. ನಗರಗಳಲ್ಲಿ ಈಗಾಗಲೇ ಒಳ್ಳೆಯ ಜಾಗಗಳನ್ನು ಶ್ರೀಮಂತರ ಕಂಪನಿಗಳು ಅವಾರಿಸಿವೆ ಸ್ಲಂ ಜನರಿಗೆ ಜೋಗು ಪ್ರದೇಶಗಳನ್ನು ಮಾತ್ರ ನೀಡಲಾಗುತ್ತಿದೆ. ಹಾಗಾಗಿ ಸಂಪತ್ತಿನ ಹಂಚಿಕೆ ವಿಚಾರದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ದೀರ್ಫಕಾಲಿಕವಾಗಿ ಆಲೋಚಿಸಿದರೆ ಮಾತ್ರ ಅಸಮಾನತೆ ಅಥವಾ ಅಭಿವೃದ್ಧಿ ತಾರತಮ್ಯ ಸ್ಥಿತ್ಯಾಂತರವಾಗಲು ಸಾಧ್ಯ” ಎಂದರು.

Advertisements

“ಜಾಗತೀಕರಣ ಸಾಮ್ರಾಜ್ಯಶಾಹಿಯ ಅತಿಯಾದ ಲಾಭ ಮಾಡುವ ದೃಷ್ಟಿಯಿಂದ ಜೀವನಾಧಾರ ಭದ್ರತೆ ಸಂಕುಚಿತಗೊಳ್ಳುತ್ತಿದೆ. ಇದ್ದರಿಂದಾಗಿ ಆರೋಗ್ಯ, ಶಿಕ್ಷಣ, ವಸತಿಗಾಗಿ ಬಡವರ ಜೀವನ ಮುಗಿಯುತ್ತಿದೆ. ಸಾಲದ ಸಂಘಗಳಿಗೆ ಮರುಪಾವತಿ ಮಾಡಲು ಸಾಧ್ಯವಾಗದೇ ಅನಿವಾರ್ಯವಾದ ಒತ್ತಡಕ್ಕೆ ಒಳಗಾಗಿ ಹಳ್ಳಿಗಳಿಂದ ಭೂಮಿ ಮಾರಿಕೊಂಡು ಪಟ್ಟಣಗಳಿಗೆ ಅಥವಾ ಬೆಂಗಳೂರಿಗೆ ಬರುವವರು ಸ್ಲಂಗಳಲ್ಲಿ ನೆಲೆಸುತ್ತಾರೆ. ಈ ಜನರು ಹಾಗೆಯೇ ಇರಬೇಕೆಂದೇ ವಿನ್ಯಾಸಗೊಳಿಸಲಾಗಿದೆ. ಏಕೆಂದರೆ, ನಗರಗಳ ಆರ್ಥಿಕತೆಯ ಚಲನೆಯೇ ಸ್ಲಂಗಳು. ನಗರಗಳಲ್ಲಿ ಬಡತನವನ್ನು ವಿನ್ಯಾಸಗೊಳ್ಳಿಸಲಾಗಿದೆ. ಇದು ಗೊತ್ತಿಲ್ಲದೆ ಸಂಭವಿಸುವ ಪ್ರಕ್ರಿಯೆಯಲ್ಲಿ. ಬಡವರಿಗೆ ಅಗತ್ಯಕ್ಕಿಂತ ಜಾಸ್ತಿಕೊಟ್ಟರೆ ಸಂಪತ್ತಿನಲ್ಲಿ ಸಮಾನ ಹಂಚಿಕೆ ಕೇಳುತ್ತಾರೆ ಎನ್ನುವುದು ಪ್ರಭುತ್ವದ ಭಯವಾಗಿದೆ. ಶ್ರಮ ಸಂಸ್ಕೃತಿಯ ಸ್ಲಂ ಶಕ್ತಿಯನ್ನು ವ್ಯವಸ್ಥೆ ಮೇಂಟೇನ್ ಮಾಡಲಿಲ್ಲವೆಂದರೆ ಅಥವಾ ಅವರ ಕೊರತೆಗಳನ್ನು ಕಾಪಾಡದಿದ್ದರೆ ನಗರೀಕರಣದ ಸಿದ್ದಾಂತಕ್ಕೆ ಅಪಾಯ. ಹಾಗಾಗಿ ಶಿಕ್ಷಣ, ಕೆಲಸ, ಕೂಲಿ, ವಸತಿ ಸೌಕರ್ಯಗಳನ್ನು ವಿನ್ಯಾಸಗೊಳಿಸಲಾಗಿದೆ. ಅಂದರೆ ಸ್ಲಂಗಳನ್ನು ಚೀಪ್ ಲೇಬರ್ ಪ್ಯಾಕೇಟ್‌ಗಳಾಗಿ ನಗರೀಕರಣ ನಿರ್ವಹಿಸುತ್ತಿದೆ. ಹಾಗಾಗಿ ಕೆಲವು ಜನರ ಬಿಕ್ಕಟ್ಟಗಳನ್ನು ಪ್ರಭುತ್ವ ಸೃಷ್ಟಿಸಿ ಸ್ಲಂ ನಿವಾಸಿಗಳನ್ನು ಅಸಹಾಯಕವನ್ನಾಗಿಸಿದೆ” ಎಂದು ಪ್ರತಿಪಾಧಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಕ್ಷಿತಿಜ್ ಅರಸ್, “ನೈಸರ್ಗಿಕ ಸಂಪನ್ಮೂಲಗಳನ್ನು ಜನರು ಹಣಕೊಟ್ಟು ಪಡೆಯುವ ಯಾಜಮಾನಿಯನ್ನು ನಾವೇ ಒಪ್ಪಿಕೊಳ್ಳುವಂತೆ ನಗರೀಕರಣ ಪ್ರಕ್ರಿಯೆಯಲ್ಲಿ ಮಾಡಲಾಗಿದೆ. ಇಂದು ಅತೀವೇಗವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ನಗರೀಕರಣ ಬೆಳೆದು ಅಲ್ಲಿನ ಕೃಷಿ ಚಟುವಟಿಕೆಯನ್ನೇ ನಾಶವಾಗಿ ಹವಮಾನ ವೈಪರಿತ್ಯದಿಂದ ಹಾಗೂ ಅತೀಯಾದ ಗ್ರಾಹಕೀಕರಣದಿಂದ ನಗರಗಳಲ್ಲಿ ಜನರು ವಾಸಿಸಲು ಸಾಧ್ಯವಾಗುತ್ತಿಲ್ಲಾ. 2050ರ ವೇಳೆಗೆ ಪ್ರಪಂಚದಲ್ಲಿ ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ನಗರೀಕರಣದ ಪ್ರಮಾಣ ಶೇ80%ಕ್ಕೆ ಮುಟ್ಟಿಸುವ ಗುರಿಯನ್ನು ಅಂತರ್ ರಾಷ್ಟ್ರೀಯ ಮಾರುಕಟ್ಟೆ ಹೊಂದಿದೆ. ಭಾರತದಲ್ಲಿ ಸ್ಮಾರ್ಟ್ ಸಿಟಿಗಳ ಮೂಲಕ ಹೊಸ ನಗರೀಕರಣದ ಆಯಾಮಕ್ಕೆ ಸ್ಲಂ ನಿವಾಸಿಗಳನ್ನು ಜಿ+ (ಬಹುಮಡಿಗಳ ನಿರ್ಮಾಣ) ಮಾದರಿಯ ಬದುಕಿಗೆ ಹೋಗ್ಗಿಸಿದೆ. ನಗರಗಳ ಪರಿವರ್ತನೆಯ ಸಂದರ್ಭದಲ್ಲಿ ನಮಗೆ ಹುಸಿ ಭರವಸೆಯನ್ನು ತೋರಿಸಿ ಪರ್ಯಾಯ ಅಲೋಚನೆ ಮಾಡದ್ದಂತೆ ಮಾಡಲಾಗುತ್ತಿದೆ. ಇಂತಹ ಸಂಧಿಘ್ನತೆಯಲ್ಲಿ ನಾವು ಸ್ಲಂ ಆಸ್ಮಿತೆಯನ್ನು ಹೇಗೆ ನೋಡಬೇಕು, ನಗರಗಳು ತಾರತಮ್ಯ ಸೃಷ್ಟಿಸುವ ಸಮಯದಲ್ಲಿ ಘನತೆಯ ಕೆಲಸಗಳನ್ನು ನಾಶ ಮಾಡುವಾಗ, ಪ್ರಭುತ್ವ ಸ್ಲಂಗಳನ್ನು ಅನೈರ್ಮಲ್ಯವೆಂದು ನೋಡುವಾಗ ಸಾಮಾಜಿಕ ನ್ಯಾಯದ ನಮ್ಮ ಹೋರಾಟ ಒಂದು ಹೆಚ್ಚೆಗಿಂತ ಜಿಗಿತವಾಗಬೇಕು” ಎಂದರು.

ಈ ಸಂದರ್ಭದಲ್ಲಿ ಸ್ಲಂ ನಿವಾಸಿಗಳಿಗೆ ನಗರೀಕರಣದಲ್ಲಿ ಎದುರಾಗಿರುವ ಸವಾಲುಗಳ ಪರಿಹಾರಕ್ಕೆ ‘ರೈಟ್ ಟು ಸಿಟಿ’ ತತ್ವಸಿದ್ದಾಂತವನ್ನು ಸ್ಲಂ ಜನರು ಅನುಸಿಸಬೇಕೆಂದು ಹೈಕೋರ್ಟ್ ವಲೀಕರಾದ ವಿನಯ್ ಶ್ರೀವಾಸ್ ಅಭಿಪ್ರಾಯಪಟ್ಟರು. ಹಾಗೆಯೇ ದುಂಡು ಮೇಜಿನ ಸಭೆಯ ಅಧ್ಯಕ್ಷತೆಯನ್ನ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ವಹಿಸಿದರು ಮತ್ತು ಸಾವಿತ್ರಿಬಾಯಿ ಮಹಿಳಾ ಸಂಘಟನೆಯ ಸಂಚಾಲಕರಾದ ಚಂದ್ರಮ್ಮ ಗೌರವ ಉಪಸ್ಥಿತಿತರಿದ್ದರು ಹಾಗೂ ವಿವಿಧ ಜಿಲ್ಲೆಗಳ ಸಂಘಟನಾ ಕಾರ್ಯಕರ್ತ ಮತ್ತು ರಾಜ್ಯ ಸಮಿತಿ ಪದಾಧಿಕಾರಿಗಳು ಭಾಗಿಯಾಗಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X