ಹೂಳಲು ಸ್ಮಶಾನವಿಲ್ಲದೆ ತಿ. ನರಸೀಪುರದಿಂದ ದಾವಣಗೆರೆಗೆ ಮೃತದೇಹ ಕೊಂಡೊಯ್ದ ಅಲೆಮಾರಿ ಕೊರಚ ಸಮುದಾಯ

Date:

Advertisements

ಅನಾರೋಗ್ಯದಿಂದ ಮೃತಪಟ್ಟ ಪರಿಶಿಷ್ಟ ಜಾತಿ ಅಲೆಮಾರಿ ಕೊರಚ ಸಮುದಾಯದ ವ್ಯಕ್ತಿಯೊಬ್ಬರ ಮೃತದೇಹವನ್ನು ಹೂಳಲು ಸ್ಮಶಾನವಿಲ್ಲದೆ ಕುಟುಂಬದವರು ನೂರಾರು ಕಿ.ಮೀ ದೂರದ ದಾವಣಗೆರೆಗೆ ಮೃತದೇಹ ಕೊಂಡೊಯ್ದ ಅಮಾನವೀಯ ಘಟನೆ ಮೈಸೂರಿನ ತಿ ನರಸೀಪುರದಲ್ಲಿ ನಡೆದಿದೆ.

ತಿ.ನರಸೀಪುರ ಟೌನಿನ ಹೊಸ ರೇಷ್ಮೆ ಗೂಡಿನ ಎದುರು, ಮಾರ್ಕೆಟ್ ರಸ್ತೆ ನಿವಾಸಿ, ಪರಿಶಿಷ್ಟ ಜಾತಿ ಅಲೆಮಾರಿ ಕೊರಚ ಜನಾಂಗದ 50 ವರ್ಷದ ರತ್ನಮ್ಮ ಎಂಬುವವರು ಅನಾರೋಗ್ಯದಿಂದ ನಿನ್ನೆ(ಜ.08) ದಿನ ಮೃತಪಟ್ಟಿದ್ದರು. ಹೂಳಲು ಸ್ಥಳವಿಲ್ಲದ ಕಾರಣ ರತ್ನಮ್ಮ ನವರ ಮೃತದೇಹವನ್ನು ಅವರ ಕುಟುಂಬದ ಸದಸ್ಯರು ತವರೂರು ದಾವಣಗೆರೆಗೆ ತೆಗೆದುಕೊಂಡು ಹೋಗಿದ್ದಾರೆ.

ಸುಮಾರು 35 ವರ್ಷಗಳ ಹಿಂದೆ ದಾವಣಗೆರೆಯಿಂದ ವಲಸೆ ಬಂದ ರತ್ನಮ್ಮನವರ ಕುಟುಂಬಸ್ಥರು ತಿ.ನರಸೀಪುರ ಪಟ್ಟಣದ ಈಗಿನ ಕೆ.ಎಸ್ ಆರ್.ಟಿ.ಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಅರ್ಧಗುಂಟೆ ಜಾಗ ಖರೀದಿಸಿ ವಾಸವಿದ್ದರು. ಕಬಿನಿ ನದಿಗೆ ನೂತನ ಸೇತುವೆ ನಿರ್ಮಾಣ ಸಮಯದಲ್ಲಿ ಸ್ವಂತ ಜಾಗವನ್ನು ಕಳೆದುಕೊಂಡು ಬೀದಿಗೆ ಬಿದ್ದ ರತ್ನಮ್ಮನ ಕುಟುಂಬಸ್ಥರು, ಖಾಸಗಿ ಜಮೀನಿನಲ್ಲಿ ಬಾಡಿಗೆ ಪಾವತಿಸುತ್ತ ಜೋಪಡಿ ನಿರ್ಮಿಸಿಕೊಂಡು ವಾಸವಿದ್ದರು.

Advertisements

ಜೀವನೋಪಾಯಕ್ಕಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಲೆಕೂದಲು,ಬಟ್ಟೆಪಿನ್ನು ವ್ಯಾಪಾರ ಮಾಡಿಕೊಂಡಿದ್ದರು. ಇತ್ತೀಚೆಗೆ ಮೃತಪಟ್ಟ ಗಂಡನ ಸಾವಿನಿಂದ ಕಂಗಾಲಾಗಿದ್ದ ರತ್ನಮ್ಮ, ತನ್ನ ತಮ್ಮ ಕೊಟ್ರೇಶಿಯೊಂದಿಗೆ ವಾಸವಾಗಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾವೋವಾದಿಗಳು ಮುಖ್ಯವಾಹಿನಿಗೆ ಮರಳುತ್ತಿರುವುದು ಸ್ವಾಗತಾರ್ಹ

ವಾಸಿಸಲು ಸ್ವಂತ ಸ್ಥಳವಿಲ್ಲದೆ, ಮೃತಪಟ್ಟಾಗ ಹೂಳಲು ಸ್ಮಶಾನವಿಲ್ಲದೆ ಸ್ವಂತ ಸೂರಿಗಾಗಿ ಹೋರಾಡುತ್ತ ತಲೆಕೂದಲು,ಬಟ್ಟೆಪಿನ್ನು ವ್ಯಾಪಾರ ಮಾಡುತ್ತ ಬಡತನದಲ್ಲಿಯೇ ರತ್ನಮ್ಮ ಬದುಕು ಸವೆಸುತ್ತಿದ್ದರು.

ಆದರೆ ಅನಾರೋಗ್ಯದಿಂದಾಗಿ ರತ್ನಮ್ಮ ಜ.8ರಂದು ಅಕಾಲಿಕ ಮರಣ ಹೊಂದಿದರು. ಆದರೆ ಅವರ ಮೃತದೇಹವನ್ನು ಹೂಳಲು ಸ್ಥಳವಿರಲಿಲ್ಲ. ತಾನು ವಾಸವಿದ್ದ ಊರಿನಲ್ಲಿ ಹೂಳಲು ಸ್ಮಶಾನವಿಲ್ಲದೆ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡಿ ನೂರಾರು ಕಿ. ಮೀ ದೂರದಲ್ಲಿರುವ ತವರೂರು ದಾವಣಗೆರೆಗೆ ಮೃತದೇಹ ಕೊಂಡೊಯ್ಯುವಂತಾಗಿದ್ದು ನಾಗರಿಕ ಸಮಾಜದ ದುರಂತವಾಗಿದೆ. ಸ್ಥಳೀಯ ಆಡಳಿತ ಕೂಡ ಶೋಷಿತ ಸಮುದಾಯದ ಈ ಕುಟುಂಬಗಳಿಗೆ ಮೂಲಭೂತವಾಗಿ ನೀಡಬೇಕಾದ ಸೂರು, ಸ್ಮಶಾನ ಮುಂತಾದವನ್ನು ನೀಡದೆ ಅನ್ಯಾಯವೆಸಗಿದೆ.

ಕಳೆದ ಮೂವತ್ತು ವರ್ಷಗಳಿಂದ ಸ್ವಂತ ನೆಲೆ ಮತ್ತು ಸೂರಿಗಾಗಿ ಹೋರಾಟ ಮಾಡುತ್ತಿರುವ ತಿ.ನರಸೀಪುರ ಪಟ್ಟಣದ ಪರಿಶಿಷ್ಟ ಅಲೆಮಾರಿ ಕೊರಚ ಸಮುದಾಯದ ಮೂವತ್ತು ಕುಟುಂಬಗಳಿಗೆ ಮೈಸೂರು ಜಿಲ್ಲಾಡಳಿತ ಇನ್ನಾದರೂ ಸ್ವಂತ ಸೂರು, ಸ್ಮಶಾನದ ಜಾಗಗಳನ್ನು ಕಲ್ಪಿಸಿ ಗೌರವಿತವಾಗಿ ಬದುಕಲು ಅವಕಾಶ ನೀಡಬೇಕಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X