ಕೊಪ್ಪಳದ ಗವಿಮಠ ಜಾತ್ರೆಯ ಸಂಭ್ರಮದಲ್ಲಿ ಇಡೀ ಜಿಲ್ಲೆಯ ಜನ ಸಡಗರದಲ್ಲಿರುವಾಗಲೇ, ದುರುಳನೊಬ್ಬ ಗವಿಮಠದ ಆವರಣದಲ್ಲೇ ಪತ್ನಿಗೆ ಚಾಕು ಇರಿದು ಕೊಂದ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ತುರವೇಕೆರೆ ಬಳಿಯ ಭುವನಹಳ್ಳಿಯ ಗೀತಾ(25) ಎಂಬುವವರನ್ನು ಆರೋಪಿ ರಾಜೇಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಗಂಡ-ಹೆಂಡತಿ ಮಧ್ಯ ವೈಮನಸ್ಸು ಇತ್ತು ಎನ್ನಲಾಗಿದ್ದು, ಇವರು ಇಲ್ಲಿ ಜಾತ್ರೆಯಲ್ಲಿ ಸ್ಟೀಲ್ ಪಾತ್ರೆ ವ್ಯಾಪಾರಿ ಮಾರಾಟ ಮಾಡಲು ಬಂದಿದ್ದರು. ಶನಿವಾರ ಇಬ್ಬರ ನಡುವಿನ ಜಗಳ ತಾರಕಕ್ಕೇರಿತ್ತು. ಅರು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ‘ಇಎಂಐ’ ಕಟ್ಟಿಲ್ಲವೆಂದು ರೈತನ ಮನೆ ‘ಸೀಜ್’ ಮಾಡಿದ ಬ್ಯಾಂಕ್; ಬೀದಿ ಪಾಲಾದ ಕುಟುಂಬ!
ಘಟನೆ ನಡೆದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್, ಅರಸಿದ್ದಿ ಮಠದ ಸಮೀಪದಲ್ಲಿಯೇ ಜಾತ್ರೆಯ ಸಿದ್ಧತಾ ಕಾರ್ಯ ಪರಿಶೀಲನೆಯಲ್ಲಿ ತೊಡಗಿದ್ದರು.
ಎಸ್ಪಿ ಅರಸಿದ್ದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ಅಕ್ರಮ ಸಂಬಂಧದ ಶಂಕೆ ಹಾಗೂ ಪತ್ನಿಯ ಮೇಲೆ ಪದೇ ಪದೆ ಸಂಶಯ ಪಡುತ್ತಿದ್ದನೆಂಬುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ” ಎಂದರು.