ಚಳಿಯನ್ನು ನೀಗಿಸಲು ಬೆಂಕಿ ಬಳಿ ಮಲಗಿದ್ದ ದಂಪತಿಗಳು ಉಸಿರುಗಟ್ಟಿ ಸಾವು

Date:

Advertisements

ತೀವ್ರ ಚಳಿಯನ್ನು ನಿಭಾಯಿಸಲು ‘ಅಗ್ಗಿಸ್ಟಿಕೆ’ಗೆ (ಮನೆಯಲ್ಲಿ ಬೆಂಕಿ ಉರಿಸುವ ಬಾಣಲೆ) ಬೆಂಕಿ ಹೊತ್ತಿಸಿ, ಅದರ ಬಳಿ ಮಲಗಿದ್ದ ದಂಪತಿಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಭಿಲಂಗಣ ಪ್ರದೇಶದಲ್ಲಿ ನಡೆದಿದೆ.

ಭಿಲಂಗಣ ಪ್ರದೇಶದ ದ್ವಾರಿ-ಥಪ್ಲಾ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ದಂಪತಿಗಳಾದ ಮದನ್ ಮೋಹನ್ ಸೆಮ್ವಾಲ್ (52) ಮತ್ತು ಅವರ ಪತ್ನಿ ಯಶೋದಾ ದೇವಿ (48) ಮದುವೆ ಸಮಾರಂಭದಲ್ಲಿ ಭಾಗವಹಿಸಲು ಗ್ರಾಮಕ್ಕೆ ಬಂದಿದ್ದರು. ತೀವ್ರ ಚಳಿಯಿದ್ದ ಕಾರಣ ಅಗ್ಗಿಸ್ಟಿಕೆ ಹೊತ್ತಿಸಿ, ಅದನ್ನು ತಮ್ಮ ಕೋಣೆಯೊಳಗೆ ಇಟ್ಟುಕೊಂಡು, ಬಾಗಿಲು-ಕಿಟಕಿಗಳನ್ನು ಮುಚ್ಚಿ ಮಲಗಿದ್ದರು. ಬೆಂಕಿಯ ಹೊಗೆ ಹೊರಹೋಗದ ಮತ್ತು ಶುದ್ಧ ಗಾಳಿ ಬಾರದ ಕಾರಣ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ದ್ವಾರಿ-ಥಪ್ಲಾ ಗ್ರಾಮ ಆಡಳಿತಾಧಿಕಾರಿ ರಿಂಕಿ ದೇವಿ ತಿಳಿಸಿದ್ದಾರೆ.

ಮಾರನೆ ದಿನ ಬಳಗ್ಗೆ ಅವರನ್ನು ಎಬ್ಬಿಸಲು ಅವರ ಮಗ ಹೋಗಿದ್ದಾರೆ. ಆದರೆ, ಅವರು ಬಾಗಿಲು ತೆರೆಯಲಿಲ್ಲ. ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಸ್ಥಳೀಯರು ಬಾಗಿಲು ಒಡೆದು ನೋಡಿದಾಗ, ದಂಪತಿಗಳು ಹಾಸಿಗೆಯಲ್ಲಿಯೇ ಮೃತಪಟ್ಟಿರುವುದು ಕಂಡುಬಂದಿದೆ. ಅಗ್ಗಿಸ್ಟಿಕೆ ಹೊಗೆಯಿಂದ ಉತ್ಪತ್ತಿಯಾಗುವ ಕಾರ್ಬನ್ ಮಾನಾಕ್ಸೈಡ್ ಅನಿಲದಿಂದಾಗಿ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ರಿಂಕಿ ದೇವಿ ತಿಳಿಸಿದ್ದಾರೆ.

Advertisements

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X