ಚಿಕ್ಕಮಗಳೂರು l ಸರ್ಕಾರಿ ಗಿರಿಜನ ಆಶ್ರಮ ಶಾಲೆ; ಸಂಕ್ರಾಂತಿ ಜಾನಪದ ಸುಗ್ಗಿ ಸಂಭ್ರಮ 

Date:

Advertisements

ಕನ್ನಡ ಜಾನಪದ ಸಾಹಿತ್ಯ ಪರಿಷತ್ ಮಹಿಳಾ ಘಟಕ ಹಾಗೂ ಕನ್ನಡ ಜಾನಪದ ಸಾಹಿತ್ಯ ಪರಿಷತ್ ಮೇಗುಂದ ಹೋಬಳಿ ಘಟಕದ ವತಿಯಿಂದ ಆಯೋಜಿಸಲಾದ, ಸಂಕ್ರಾಂತಿ ಜಾನಪದ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಶುಕ್ರವಾರ ಮೇಗೂರು ಗಿರಿಜನ ಆಶ್ರಮ ಶಾಲೆಯಲ್ಲಿ ನಡೆಸಲಾಯಿತು.

Screenshot 2025 01 25 13 50 00 24 7352322957d4404136654ef4adb64504 2
ಸಂಕ್ರಾಂತಿ ಜಾನಪದ ಸುಗ್ಗಿ ಸಂಭ್ರಮ ಕಾರ್ಯಕ್ರಮ

ಜಾನಪದ ಕಲೆ, ಸಾಹಿತ್ಯ, ಜಾನಪದ ಹಳ್ಳಿಯ ಸೊಗಡು ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿದೆ. ಹಳ್ಳಿಯ ಸೊಗಡಿನ ಹಾಡಿನ ಮೂಲಕ ನೃತ್ಯಗಳು ಬಹಳ ಚೆನ್ನಾಗಿರುತ್ತದೆ.ಇವತ್ತಿನ ದಿನದ ನಗರಗಳಲ್ಲಿ ಪರಕೀಯರ ಹಾಡಿಗೆ ನೃತ್ಯ ಮಾಡಿಸಿ ಹೊಗಳುತ್ತಾರೆ. ಜಾನಪದ ಹಳ್ಳಿಯ ಸೊಗಡನ್ನು ನಾವು ಈ ಕಾರ್ಯಕ್ರಮಗಳ ಮೂಲಕ ಎಲ್ಲಾ ಭಾಗದಲ್ಲಿ ಕಾರ್ಯರೂಪಕ್ಕೆ ತರಬೇಕು, ಎಂದು ಮೇಗುಂದ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಮುರೊಳ್ಳಿ ಮಾತಾಡಿದರು.

Screenshot 2025 01 25 12 56 29 44 965bbf4d18d205f782c6b8409c5773a4 1
ಹಳ್ಳಿಯ ಸೊಗಡಿನ ಹಾಡಿಗೆ ನೃತ್ಯ ಮಾಡಿದ ವಿದ್ಯಾರ್ಥಿಗಳು

ಕೊಪ್ಪ ತಾಲ್ಲೂಕು ಕನ್ನಡ ಜಾನಪದ ಪರಿಷತ್‌ ಮಹಿಳಾ ಘಟಕದ ಅಧ್ಯಕ್ಷೆ ಶ್ರೀನಿಧಿ ದಿನೇಶ್‌ ಅಧ್ಯಕ್ಷತೆ ವಹಿಸಿ ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು, ಹೆಣ್ಣು ಕೇವಲ ಮನೆ ಕೆಲಸ ಮಾಡಲು ಸೀಮಿತವಲ್ಲ, ಮಹಿಳೆಯರು ಈ ದೇಶದ ಬೆನ್ನೆಲುಬು ಆಗಿದ್ದಾರೆ, ಎಂದು ಕಾರ್ಯಕ್ರಮದಲ್ಲಿ ಮಾತಾಡಿದರು.

Advertisements
Screenshot 2025 01 25 14 01 52 22 965bbf4d18d205f782c6b8409c5773a4
ಮಹಿಳೆಯರ ಒಗ್ಗಟ್ಟು

ಸರ್ಕಾರಿ ಶಾಲೆ ಉಳಿಯಬೇಕು ಹಾಗೆಯೇ, ಮಲೆನಾಡಿನಲ್ಲಿ ದೂರದ ಊರುಗಳಿಂದ ದಿನ ನಿತ್ಯ ಓದಲು ಬರುವುದಕ್ಕೆ ವಿದ್ಯಾರ್ಥಿಗಳು ಕಷ್ಟ ಪಡುತ್ತಾರೆ. ಈ ಭಾಗದಲ್ಲಿ ಆಶ್ರಮ ಶಾಲೆ ಮಾಡಿರುವುದು ಬಹಳ ಅನುಕೂಲವಾಗಿದೆ. ಈವತ್ತಿನ ದಿನಗಳಲ್ಲಿ ಜಾನಪದ ಕಲೆಗಳು ಮತ್ತಷ್ಟು ಸರ್ಕಾರಿ ಶಾಲೆ ಹಾಗೂ ಎಲ್ಲಾ ಭಾಗಗಳಲ್ಲಿ ಜಾನಪದ ಅರಿವು ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಮೇಗುಂದ ಹೋಬಳಿ ಕನ್ನಡ ಜಾನಪದ ಪರಿಷತ್‌ ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ರತ್ನಾಕ‌ರ್ ಮಾತಾಡಿದರು.

Screenshot 2025 01 25 12 55 50 93 965bbf4d18d205f782c6b8409c5773a4
ಜಾನಪದ ಹಾಡಿನೊಂದಿಗೆ ಆನಂದಿಸಿದ ವಿದ್ಯಾರ್ಥಿಗಳು

ಶಿಲೆ ಹೆಚ್ಚು ಪೆಟ್ಟು ತಿಂದರೆ ದೇವರ ವಿಗ್ರಹವಾಗುತ್ತದೆ, ಕಮ್ಮಿ ಪೆಟ್ಟು ತಿಂದ ಶಿಲೆಯು ಮೆಟ್ಟಿಲಾಗುತ್ತದೆ. ಜೀವನದಲ್ಲಿ ಹೆಚ್ಚು ಕಷ್ಟ ಪಟ್ಟವರು, ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ಹಾಗೆಯೇ ಪ್ರೀತಿಯಿಂದ ಮಕ್ಕಳಿಗೆ ವಿದ್ಯೆ ಹೇಳಿಕೊಡುವ  ಕಲೆ ಇರುವುದು ಸರ್ಕಾರಿ ಶಾಲೆಯ ಶಿಕ್ಷಕರಿಗೆ ಮಾತ್ರ  ಎಂದು ಮೇಗುಂದ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶಾಂತಕುಮಾರ್ ಜೈನ್ ಕಾರ್ಯಕ್ರಮದಲ್ಲಿ ಮಾತಾಡಿದರು.

ಗುಡ್ಡೆತೋಟ ಗ್ರಾಮ ಪಂಚಾಯಿತಿ ಸದಸ್ಯ ಯಡಗುಂದ ವಾಸು ಕಾರ್ಯಕ್ರಮವನ್ನು ಉದ್ಘಾಟಿಸಿ, ಎರಡು ವರ್ಷದ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಈದಿನ .ಕಾಮ್ ಜಿಲ್ಲಾ ವರದಿಗಾರರು ಗಿರಿಜಾ ಅವರು ಗಿರಿಜನರ ಆಶ್ರಮ ಶಾಲೆಗೆ ಭೇಟಿ ನೀಡಿ ಶಾಲೆಯ ಕುರಿತು ಲೇಖನ ಬರೆದಿದ್ದರು.ಇದರಿಂದ ಮತ್ತಷ್ಟು ವಿದ್ಯಾರ್ಥಿಗಳು ಬೇರೆ ಬೇರೆ ಭಾಗದಿಂದ ಮೇಗೂರು ಶಾಲೆಗೆ ಬಂದಿದ್ದಾರೆ. ಈದಿನ.ಕಾಮ್ ಮಾಧ್ಯಮದಲ್ಲಿ ಸತ್ಯವನ್ನು ಬಿತ್ತುವ ಮೂಲಕ ಎಲ್ಲೆಡೆ ಜನರಿಗೆ ಮಾಹಿತಿ ತಿಳಿಯುತ್ತಿದೆ ಎಂದು ಮಾತಾಡಿದರು.

Screenshot 2025 01 25 14 07 31 03 965bbf4d18d205f782c6b8409c5773a4
ಹಿಂದಿನ ಜಾನಪದ ನೃತ್ಯ ಮಾಡಿದ ಶಾಲೆಯ ವಿದ್ಯಾರ್ಥಿಗಳು

ಸಂಕ್ರಾಂತಿ ಜಾನಪದ ಸುಗ್ಗಿ ಸಂಭ್ರಮದಲ್ಲಿ ಜನಮಿತ್ರ ವರದಿಗಾರರಾದ ಪ್ರದೀಪ್‌ ಹೆಬ್ಬಾರ್, ಈದಿನ.ಕಾಮ್ ಜಿಲ್ಲಾ ವರದಿಗಾರರಾದ ಗಿರಿಜಾ ಎಸ್ .ಜಿ ಅವರನ್ನು ಜಿಲ್ಲಾ ವರದಿ ಹಾಗೂ ಕೆಲಸ ಮಾಡಿರುವುದನ್ನು ಗಮನಿಸಿ, ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿ ಸನ್ಮಾನಿಸಲಾಯಿತು.

ಪಿಯೋನ್ ನುಡಿಸುವ ವಾಜಕರಾದ ಆಶಿಶ್ ದೇವಾಡಿಗ ಅವರ ಕಲೆ ಗುರುತಿಸಿ ಸನ್ಮಾನಿದರು. ಹಾಗೆಯೇ ಬೈರೇದೇವರು,ಅತ್ತಿಕುಳಿ, ಮೇಗೂರು, ಶಾಂತಿಗ್ರಾಮ ಶಾಲೆಯ ಶಿಕ್ಷಕರು ಹಾಗೂ ಅಂಗನವಾಡಿ ಮತ್ತು ಅಡುಗೆ ಸಿಬ್ಬಂದಿಗಳಿಗೆ ಅಭಿನಂದಿಸಿದರು.

Screenshot 2025 01 25 14 10 43 31 965bbf4d18d205f782c6b8409c5773a4 1
ಶಾಲಾ ವಿದ್ಯಾರ್ಥಿಗಳು ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿರುವುದು

ಮಕ್ಕಳು ಉತ್ಸುಕತೆಯಿಂದ ಹಾಡು, ನೃತ್ಯ, ಜಾನಪದ ಹಳ್ಳಿಯ ಸೊಗಡಿನ ಕಲೆಯನ್ನು ಬಹಳ ಅದ್ಧೂರಿಯಿಂದ ಅಕ್ಕಪಕ್ಕದ ಶಾಲಾ ಮಕ್ಕಳು ಪ್ರದರ್ಶನ ಮಾಡಿದರು. ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ನೀಡುವ ಮೂಲಕ ಸೋಲು ಗೆಲವು ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂದು ಕಾರ್ಯಕ್ರಮವನ್ನು ಯಶಸ್ವಿಯಿಂದ ನೆರವೇರಿಸಲಾಯಿತು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಹೊರಗುತ್ತಿಗೆ ನೌಕರರ ಪ್ರತಿಭಟನೆ; ಜಿಲ್ಲಾಧಿಕಾರಿಗೆ ಮನವಿ

ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೃಪಾಲ ಅರೆಹಳ್ಳ, ಭಾಗ್ಯ ಚಂದ್ರಶೇಖ‌ರ್, ರೇವಣ್ಣ, ಮಹೇಶ್‌, ಪುಷ್ಪ , ಮೇಗೂರು ಗ್ರಾಮಸ್ಥರು, ಕಲಾವಿದರು, ಪತ್ರಕರ್ತರು, ಸುತ್ತಮುತ್ತಲಿನ ಸರ್ಕಾರಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಕನ್ನಡ ಜಾನಪದ ಮಹಿಳಾ ಘಟಕ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮುಖಂಡರು, ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತಿಯಲ್ಲಿದ್ದರು.

WhatsApp Image 2024 10 24 at 12.02.30
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X