ಚಿಕ್ಕಮಗಳೂರು l ಮುಖ್ಯವಾಹಿನಿಗೆ 6 ಜನ ನಕ್ಸಲ್: ಶ್ರಮಿಸಿದ ಪ್ರತಿಯೊಬ್ಬರಿಗೆ ಅಭಿನಂದನೆ ಸಲ್ಲಿಸಿದ ಶಾಂತಿಗಾಗಿ ನಾಗರಿಕ ವೇದಿಕೆ

Date:

Advertisements

ಸುಮಾರು 25-30 ವರ್ಷಗಳಿಂದ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳಲ್ಲಿ ಮೂಲಸೌಕರ್ಯ, ಭೂಮಿಯ ಹಕ್ಕು, ಆದಿವಾಸಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಹಲವಾರು ವರ್ಷಗಳಿಂದ ಸರ್ಕಾರಗಳ ಮುಂದೆ ಬೇಡಿಕೆ ಇಟ್ಟು ಅನೇಕ ಹೋರಾಟಗಳು ನಡೆಸುತ್ತಾ, ಅರಣ್ಯ ಇಲಾಖೆಯ ಕಿರುಕುಳಗಳನ್ನು ವಿರೋಧಿಸುತ್ತಾ ನಕ್ಸಲ್‌ ಚಳುವಳಿ ಅಥವಾ ಮಾವೋವಾದಿ ಹೋರಾಟದ ಕಡೆಗೆ ಒಲವು ಹೊಂದಿದ್ದ. ನಾಡನ್ನು ತ್ಯಜಿಸಿ, ತಮ್ಮ ಕುಟುಂಬ ಪರಿವಾರವನ್ನು ತ್ಯಜಿಸಿ, ತಮ್ಮ ಯೌವನವನ್ನು, ಸುಖ ಸಂತೋಷಗಳನ್ನು ತ್ಯಜಿಸಿ ಕಾಡಿನ ಪಾಲಾಗಿ ಭೂಗತರಾಗಿದ್ದರು.

Screenshot 2025 01 26 19 30 54 35 965bbf4d18d205f782c6b8409c5773a4
ನಕ್ಸಲ್ ಹೋರಾಟಗಾರರನ್ನು ಮುಖ್ಯವಾಹಿನಿಗೆ ಕರೆತರಲು ಶ್ರಮಿಸಿದ ಸಾರ್ವಜನಿಕರು.

ಅಂತಹವರಲ್ಲಿ ಈ ಹಿಂದೆ ಅದೆಷ್ಟೋ ಜನ ಈ ಹಿಂದೆಯೇ ಮುಖ್ಯ ವಾಹಿನಿಗೆ ಬಂದಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಉಳಿದ 7 ಜನ ನಕ್ಸಲರಲ್ಲಿ 6 ಜನ ನಕ್ಸಲರು, ನಕ್ಸಲ್ ಚಳುವಳಿಯಿಂದ ಮುಖ್ಯವಾಹಿನಿಗೆ ಇತ್ತೀಚೆಗೆ ಬಂದಿದ್ದಾರೆ. ಇನ್ನೊಬ್ಬರನ್ನು ಹುಡುಕುವ ಪ್ರಯತ್ನ ಆಗುತ್ತಿದೆ. ಆದರೆ ಈ 6 ಜನರನ್ನು ಮುಖ್ಯವಾಹಿನಿಗೆ ಕರೆತರಲು ಗುಡ್ಡಗಾಡು ಪ್ರದೇಶವಿರುವ ಜಾಗದಲ್ಲಿ ವಾಸಮಾಡುತ್ತಿರುವ ಸಾರ್ವಜನಿಕರ ಸಹಾಯವನ್ನೂ ಪಡೆಯಲಾಗಿತ್ತು. ಹಾಗೆಯೇ, ವಿಶೇಷವಾಗಿ ಚಿಂತಕರು ಮತ್ತು ಪ್ರಗತಿಪರ ಹಾಗೂ ಮಾವೋವಾದಿ ಹೋರಾಟಗಾರರು ಸೇರಿ “ಶಾಂತಿಗಾಗಿ ನಾಗರಿಕ ವೇದಿಕೆ”ಯನ್ನು ಮಾಡಲಾಗಿತ್ತು.

Screenshot 2025 01 26 19 32 47 62 965bbf4d18d205f782c6b8409c5773a4 1
ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆ ಹಿಡಿದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಸಂದರ್ಭ.

ಶಾಂತಿಗಾಗಿ ನಾಗರಿಕರ ವೇದಿಕೆಯಿಂದ ನಕ್ಸಲ್ ಚಳುವಳಿಯಲ್ಲಿ ಇದ್ದ 6 ಜನರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಸಂಪೂರ್ಣ ಯಶಸ್ಸನ್ನು ಕಂಡಿದೆ. ಆದ್ದರಿಂದ ಆರು ಜನರನ್ನು ಕರೆತರಲು ಶ್ರಮಿಸಿದ ಪ್ರತಿಯೊಬ್ಬರಿಗೂ, “ಶಾಂತಿಗಾಗಿ ನಾಗರಿಕ ವೇದಿಕೆ”ಯಿಂದ ಶನಿವಾರ ಶೃಂಗೇರಿ ತಾಲ್ಲೂಕಿನ ಹಾಗಲಗಂಚಿ ಗ್ರಾಮದಲ್ಲಿ, ಪರಸ್ಪರ ಪರಿಚಯಿಸುವ ಮೂಲಕ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

Advertisements
Screenshot 2025 01 26 19 35 58 45 965bbf4d18d205f782c6b8409c5773a4
ಸಂತೋಷದಿಂದ ಔತಣ ಕೂಟ ಏರ್ಪಡಿಸಿ ಊಟ ಬಡಿಸಿದ ಸಂದರ್ಭ.

ಜೊತೆಗೆ, ಬಹಳ ಖುಷಿಯಿಂದ ಔತಣ ಕೂಟವನ್ನು ಏರ್ಪಡಿಸಿದರು. ಹಾಗೆಯೇ, 6 ಜನ ಮುಖ್ಯವಾಹಿನಿಗೆ ಬರಲು ಅವಕಾಶ ಕಲ್ಪಿಸಿಕೊಟ್ಟ ರಾಜ್ಯ ಸರ್ಕಾರಕ್ಕೆ ಧನ್ಯವಾದವನ್ನು ವ್ಯಕ್ತಪಡಿಸಿದರು.

Screenshot 2025 01 26 20 06 28 50 7352322957d4404136654ef4adb64504
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X