ಚಿಕ್ಕಮಗಳೂರು | ಶಾಸಕರಿಗೆ ಪದೇಪದೆ ಮನವಿ ಮಾಡಿದರೂ, ಡಾಂಬರೀಕರಣವಾಗದ ರಸ್ತೆ

Date:

Advertisements

ಪ್ರಕೃತಿ ಸೌಂದರ್ಯ ಪ್ರವಾಸಿ ತಾಣವಾಗಿರುವ ಮಲೆನಾಡಿನ ಚಿಕ್ಕಮಗಳೂರು ಭಾಗದಲ್ಲಿ ವಾಸ ಮಾಡುತ್ತಿರುವ ಜನರು ಅದೆಷ್ಟೋ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನಾವು ಪ್ರತಿದಿನ ನೋಡಬಹುದು.

Screenshot 2025 01 31 12 28 13 70 6012fa4d4ddec268fc5c7112cbb265e7
ಇಲ್ಲಿಯವರೆಗೂ ಡಾಂಬರೀಕರಣ ಕಾಣದ ರಸ್ತೆ.

ಚಿಕ್ಕಮಗಳೂರು ಜಿಲ್ಲೆಯ, ಶೃಂಗೇರಿ ತಾಲೂಕಿನ ಅಗಲಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗಲಗಂಚಿ ಗ್ರಾಮದ ನಿವಾಸಿಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅದರಲ್ಲೂ ನಿತ್ಯ ಓಡಾಡಲು ಹಾಗೂ ದಿನಸಿ ಸಾಮಗ್ರಿಗಳನ್ನು ಕೊಂಡೊಯ್ಯಲು ಸೂಕ್ತವಾದ ರಸ್ತೆ ಎನ್ನುವುದನ್ನೇ ಇಲ್ಲಿನ ನಿವಾಸಿಗಳು ಕಂಡಿಲ್ಲ.

Screenshot 2025 01 31 12 28 21 34 6012fa4d4ddec268fc5c7112cbb265e7
ವಿದ್ಯಾರ್ಥಿಗಳು ಶಾಲಾ,ಕಾಲೇಜಿಗೆ ಹೋಗಲು ಸೂಕ್ತ ರಸ್ತೆ ಇಲ್ಲದೆ ಪರದಾಡುತ್ತಿರುವ ದೃಶ್ಯ.

“ಹಾಗಲಗಂಚಿ ಗ್ರಾಮದಲ್ಲಿ ಸುಮಾರು 70ಕ್ಕೂ ಅಧಿಕ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಎಂಟರಿಂದ ಹತ್ತು ಗ್ರಾಮಗಳ ಜನರು ಹಾಗಲಗಂಚಿ ಗ್ರಾಮದ ಮಾರ್ಗವಾಗಿಯೇ ಸಾಗಬೇಕು. ಹಾಗೆಯೇ ಶೃಂಗೇರಿ ಮತ್ತು ಕೊಪ್ಪ ತಾಲೂಕಿಗೆ ಹಾದು ಹೋಗುವ ಸಂಪರ್ಕ ರಸ್ತೆಯಾಗಿದೆ. ಸಾವಿರಾರು ಸಂಖ್ಯೆಯ ಜನರು ಈ ಜಾಗದಲ್ಲಿ ಓಡಾಡುತ್ತಾರೆ. ನೂರಾರು ಜನರು ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಆದರೆ ನಮಗೆ ಈವರೆಗೂ ಯಾವುದೇ ಸರ್ಕಾರದಿಂದ ಸವಲತ್ತು ಸಿಕ್ಕಿಲ್ಲ. ಅದರಲ್ಲೂ ರಸ್ತೆಗಳು ಹಳ್ಳ, ದಿಣ್ಣೆಗಳಿಂದ ಕೂಡಿವೆ. ಮಳೆಗಾಲ ಬಂತೆಂದರೆ ಇಲ್ಲಿ ಪರಿಸ್ಥಿತಿ ನೋಡಲಾಗುವುದೇ ಇಲ್ಲ. ಏಕೆಂದರೆ ಮಕ್ಕಳ ಪಠ್ಯ ಪುಸ್ತಕಗಳಿಗೆ ಕೆಸರು ಅಂಟಿರುತ್ತದೆ, ರಸ್ತೆಯ ಅವ್ಯವಸ್ಥೆ ಕಂಡು ಆಟೋದವರು ನಮ್ಮ ಗ್ರಾಮಕ್ಕೆ ಬರುವುದಿಲ್ಲ” ಎಂದು ಗ್ರಾಮಸ್ಥರು ಈ ದಿನ.ಕಾಮ್ನೊಂದಿಗೆ ತಮ್ಮ ನೋವನ್ನು ಹಂಚಿಕೊಂಡರು.

Advertisements
Screenshot 2025 01 31 12 28 39 95 6012fa4d4ddec268fc5c7112cbb265e7
ಸರಿಯಾದ ರಸ್ತೆ ಇಲ್ಲದ ಕಾರಣ ಹಾಗೂ ವಾಹನಗಳು ಬಾರದೆ ಇರುವುದರಿಂದ, ರಸ್ತೆಯಲ್ಲಿರುವ ಕಲ್ಲುಗಳನ್ನು ಸರಿಸಿ ನಡೆದುಕೊಂಡು ಹೋಗುತ್ತಿರುವ ವಿದ್ಯಾರ್ಥಿಗಳು.

“ಆಟೋದವರಿಗೆ, ನಾವು ನಮ್ಮ ಗ್ರಾಮಕ್ಕೆ ಏಕೆ ಬರುವುದಿಲ್ಲವೆಂದರೆ. ʼನಿಮ್ಮ ಗ್ರಾಮಕ್ಕೆ ಬಾಡಿಗೆ ಬಂದರೆ ₹100ರಿಂದ ₹300 ಬಾಡಿಗೆ ಪಡೆಯುತ್ತೇವೆ. ಗಾಡಿ ಕೆಟ್ಟು ನಿಂತರೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆʼ ಎನ್ನುತ್ತಾರೆ. ಸದ್ಯದ ಮಟ್ಟಿಗಿನ ಸಾರಿಗೆ ವ್ಯವಸ್ಥೆಗೆ ನಮ್ಮ ಊರಿನ ಕಾರ್ತಿಕ್ ಎಂಬುವವರು ಆಟೋ ತೆಗೆದುಕೊಂಡಿದ್ದಾರೆ. ಅವರ ಹೊಸ ಗಾಡಿಗೂ ಸಮಸ್ಯೆಯಾಗಿದೆ. ನಮ್ಮೂರಿಂದ ಬಸ್ ಬರುವ ಜಾಗಕ್ಕೆ ಹೋಗಬೇಕಂದ್ರೆ 5 ನಿಮಿಷ ಸಾಕು. ಆದರೆ ಈ ರಸ್ತೆಯಿಲ್ಲಿ ತಲುಪಲು 30-40 ನಿಮಿಷ ಬೇಕಾಗುತ್ತದೆ” ಎಂದು ಗ್ರಾಮದ ಜನರು ಬೇಸರ ವ್ಯಕ್ತಪಡಿಸಿದರು.

Screenshot 2025 01 31 12 28 50 80 6012fa4d4ddec268fc5c7112cbb265e7 1
ನನ್ನ ಮಗಳು ಗರ್ಭವತಿಯಾದರೂ, ಈ ರಸ್ತಯಿಂದ ತವರು ಮನೆಗೆ ಬರುವ ಆಸೆ ಮಣ್ಣು ಪಾಲಾಗಿದೆ: ಗ್ರಾಮದ ಶಾರದಮ್ಮ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮುಖ್ಯವಾಹಿನಿಗೆ 6 ಜನ ನಕ್ಸಲ್: ಶ್ರಮಿಸಿದ ಪ್ರತಿಯೊಬ್ಬರಿಗೆ ಅಭಿನಂದನೆ ಸಲ್ಲಿಸಿದ ಶಾಂತಿಗಾಗಿ ನಾಗರಿಕ ವೇದಿಕೆ

“ವೃದ್ಧರು ಈ ರಸ್ತೆಯಿಲ್ಲಿ ತುಂಬಾ ಸಲ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಹಾಗೆಯೇ ನಮ್ಮ ಗ್ರಾಮದ ಅನಾರೋಗ್ಯ ಪೀಡಿತರನ್ನು ಈ ರಸ್ತೆಯ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಿಲ್ಲ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅದೆಷ್ಟೋ ಮಂದಿ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ” ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

“ಇನ್ನು ಮುಂದೆಯಾದರೂ, ಈ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರು ಗಮನವಹಿಸಿ ಹಾಗಲಗಂಚಿ ಗ್ರಾಮದ ಸಮಸ್ಯೆಯನ್ನು ಬಗೆಹರಿಸುವರೇ ಎಂಬುದನ್ನು ಕಾದು ನೋಡಬೇಕಿದೆ” ಎಂದರು.

WhatsApp Image 2024 10 24 at 12.02.30
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X