ಗುಬ್ಬಿ | ದಲಿತ ಕುಟುಂಬ ಒಕ್ಕಲೆಬ್ಬಿಸುವ ಹುನ್ನಾರ : ತಾಲೂಕು ಆಡಳಿತಕ್ಕೆ ದೂರು ನೀಡಿದ ಹಿಂಡಿಸಿಗೆರೆ ಕಾಲೋನಿ ನಿವಾಸಿಗಳು

Date:

Advertisements

ಹಲವು ವರ್ಷಗಳಿಂದ ಕೃಷಿ ನಡೆಸಿಕೊಂಡು ಬದುಕು ಕಟ್ಟಿಕೊಂಡ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿರುವ ಪ್ರಭಾವಿಗಳ ಮಾತಿಗೆ ಮಣೆ ಹಾಕಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹತ್ತು ಕುಟುಂಬವನ್ನು ಬೀದಿಗೆ ತಂದಿದ್ದಾರೆ. ಈ ಜಮೀನು ನಂಬಿ ಬದುಕು ಕಟ್ಟಿಕೊಂಡ ದಲಿತ ಕುಟುಂಬಕ್ಕೆ ತಾಲ್ಲೂಕು ಆಡಳಿತ ನೆರವಾಗಿ ನಿಂತು ಸ್ಥಳ ಪರಿಶೀಲಿಸಿ ಜಮೀನು ಉಳಿಸಿಕೊಡಬೇಕು ಎಂದು ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹಿಂಡಿಸಿಗೆರೆ ಗ್ರಾಮದ ಕಾಲೋನಿಯ ಸಂತ್ರಸ್ತ ದಲಿತ ಕುಟುಂಬ ಸದಸ್ಯರು ಅರ್ಜಿ ಮೂಲಕ ತಮ್ಮ ಅಳಲು ತೋಡಿಕೊಂಡರು.

ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿಗೆ ಬಂದ ಹಿಂಡಿಸಿಗೆರೆ ದಲಿತ ಕುಟುಂಬದ ಸದಸ್ಯರು ತಮ್ಮ ಬದುಕಿಗೆ ಅತ್ಯಗತ್ಯ ಗೋಮಾಳ ಜಮೀನು ನಮಗೆ ನೀಡಿ ಜೀವನ ಕಟ್ಟಿಕೊಡಬೇಕು. ದುರುದ್ದೇಶದಿಂದ ಕೆಲ ಪ್ರಭಾವಿಗಳು ತಮ್ಮ ಜಮೀನಿಗೆ ರಸ್ತೆ ಮಾಡಿಕೊಳ್ಳಲು ಈ ದಲಿತರ ಜಮೀನಿನ ಮೇಲೆ ಕಣ್ಣು ಹಾಕಿದ್ದಾರೆ. ಗ್ರಾಮ ಪಂಚಾಯಿತಿ ಮೂಲಕ ಉದ್ದೇಶವಾಗಿ ಆಶ್ರಯ ಯೋಜನೆಯಡಿ ಇದೇ ಜಮೀನು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ದಲಿತ ಕುಟುಂಬವನ್ನು ಅಮಾನವೀಯವಾಗಿ ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಕೂಡಲೇ ವಾಸ್ತವ ಚಿತ್ರಣ ಪರಿಶೀಲಿಸಿ ದಲಿತರನ್ನು ಉಳಿಸಿ ಎಂದು ಸಂತ್ರಸ್ತರು ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ ಸಲ್ಲಿಸಿದರು.

ಸರ್ವೇ ನಂಬರ್ 48 ರಲ್ಲಿನ 8.13 ಎಕರೆ ಗೋಮಾಳದಲ್ಲಿ ಐದು ದಶಕಗಳಿಂದ ಸುಮಾರು ಹತ್ತು ಕುಟುಂಬ ಬದುಕು ನಡೆಸಿದೆ. ತುಂಡು ಭೂಮಿಯಲ್ಲೇ ಕೃಷಿ ನಡೆಸುವ ಮುಗ್ಧ ದಲಿತ ಕುಟುಂಬದ ಮೇಲೆ ಇಲ್ಲಿನ ಸ್ಥಳೀಯ ಪ್ರಭಾವಿ ಮುಖಂಡರ ಕಣ್ಣು ಬಿದ್ದಿದೆ. ಪ್ರಭಾವಿಗಳ ಜಮೀನಿಗೆ ಸೂಕ್ತ ರಸ್ತೆ ಮಾಡಿಕೊಳ್ಳಲು ಈ ದಲಿತರ ಭೂಮಿ ಕಸಿದು ಆಶ್ರಯ ಹೆಸರಿನಲ್ಲಿ ಅವರ ತೋಟಕ್ಕೆ ರಸ್ತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಕ್ರಮ ಸಕ್ರಮ ಅರ್ಜಿ ಹಾಕಿ ತುಂಡು ಜಮೀನು ಉಳಿಸಿಕೊಳ್ಳುವ ಯತ್ನದಲ್ಲಿದ್ದ ಹತ್ತು ಕುಟುಂಬಕ್ಕೆ ಶಾಕ್ ನೀಡಿದ ಗ್ರಾಮ ಪಂಚಾಯಿತಿ ದಿಢೀರ್ ನಿವೇಶನ ಮಾಡಲು ಮುಂದಾಗಿರುವುದು ದಲಿತ ಕುಟುಂಬಕ್ಕೆ ಆತಂಕ ತಂದಿದೆ. ಈ ಹುನ್ನಾರಕ್ಕೆ ದಲಿತರು ಬಲಿಯಾಗದಂತೆ ತಾಲ್ಲೂಕು ಆಡಳಿತ ಕ್ರಮ ವಹಿಸಬೇಕು. ಈ ಗೋಮಾಳದಲ್ಲಿ ಮೂವರು ದಲಿತರಿಗೆ ಮಾತ್ರ ಸುಮಾರು ಒಂದು ಎಕರೆಯಷ್ಟು ಮಾತ್ರ ಪಹಣಿ ಆಗಿದ್ದು ದುರಸ್ಥಿ ಕಾರ್ಯ ಆಗಿಲ್ಲ. ಈ ಜಮೀನಲ್ಲಿ ಹಿರಿಯರ ಅಂತ್ಯ ಸಂಸ್ಕಾರ ಕೂಡಾ ನಡೆಸಲಾಗಿದೆ ಎಂದು ದಲಿತ ಮುಖಂಡ ಮಂಜುನಾಥ್ ವಾಸ್ತವಾಂಶ ತಿಳಿಸಿದರು.

Advertisements

ಈ ಸಂದರ್ಭದಲ್ಲಿ ತಾಪಂ ಇಓ ಶಿವಪ್ರಕಾಶ್ ಅವರಿಗೂ ಮನವಿ ಸಲ್ಲಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿ ದಲಿತ ಕುಟುಂಬವನ್ನು ಉಳಿಸುವಂತೆ ಮನವಿ ಮಾಡಿದರು.

ಮೂಡಲಗಿರಿ, ವೆಂಕಟೇಶಯ್ಯ, ಮಂಜುನಾಥ್, ತಿಮ್ಮಯ್ಯ, ದೊಡ್ಡಮ್ಮ, ಶಿವಕುಮಾರ್, ಸಿದ್ದಯ್ಯ, ಜಯಲಕ್ಷ್ಮಮ್ಮ, ಮಂಗಳಮ್ಮ, ಕೆಂಪಮ್ಮ, ಲಕ್ಷ್ಮಮ್ಮ, ಸ್ವಾಮಿ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X