ಉಡುಪಿ | ಕೊನೆಗೂ ಬರಲಿಲ್ಲ ಸರಕಾರಿ ಬಸ್ ! ನಿರಾಸೆಯಿಂದ ಮರಳಿದ ಪ್ರಯಾಣಿಕರು, ಖಾಸಗಿ ಬಸ್ ನವರ ಲಾಬಿ ?

Date:

Advertisements

ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಅಂಗಾರಕಟ್ಟೆಗೆ ಬಹು ನಿರೀಕ್ಷಿತ ಸಾರ್ವಜನಿಕರಿಗೆ ಕೊಟ್ಟಿರುವ ಭರವಸೆಯಂತೆ ಉಡುಪಿ ಹಾಗೂ ಅಂಗಾರಕಟ್ಟೆಯ ನಡುವೆ ಸರಕಾರಿ ಬಸ್ ಸಂಚಾರ ಫೆಬ್ರವರಿ 3 ಸೋಮವಾರದಂದು ವಿಸ್ತರಣೆಯಾಗಿ ಈ ಮಾರ್ಗದಲ್ಲಿ ಸರಕಾರಿ ಬಸ್ಸು ಸಂಚಾರ ಮಾಡುತ್ತಿದೆ ಎಂದು ಸಾರ್ವಜನಿಕರು ಆ ಭಾಗದಲ್ಲಿ ಬಸ್ಸನ್ನು ಸ್ವಾಗತಿಸಲು ಬ್ಯಾನರ್ ಬಂಟೀಸ್ ಅಳವಡಿಸಿ, ಬಸ್ಸಿಗೆ ಕಟ್ಟಲು ಬಾಳೆ, ಶೃಂಗಾರ ಮಾಡಲು ಹೂವು ತೆಗೆದುಕೊಂಡು ಬಸ್ಸನ್ನ ಸ್ವಾಗತಿಸಲು ಸಜ್ಜಾಗಿದ್ದರು ಕಾರಣಾಂತರದಿಂದ ಸರಕಾರಿ ಬಸ್ಸು ಬಾರದೆ ಈ ಮಾರ್ಗದಲ್ಲಿ ಸಂಚರಿಸದೆ ಸಾರ್ವಜನಿಕರಿಗೆ ನಿರಾಸೆ ಉಂಟು ಮಾಡಿದ ಘಟನೆ ಇಂದು ಮುಂಜಾನೆ ನಡೆದಿದೆ.

1004321228

ಗುಂಡು ಪಾದೆಯಲ್ಲಿಯೂ ಸಾರ್ವಜನಿಕರು ಸರಕಾರಿ ಬಸ್ಸು ಈ ಮಾರ್ಗದಲ್ಲಿ ಸಂಚರಿಸುತ್ತದೆ ಎಂದು ತಿಳಿದು ಸರಕಾರಿ ಬಸ್ಸನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದರು ಅಲ್ಲಿಯ ಪ್ರಯಾಣಿಕರಿಗೂ ನಿರಾಸೆ ಉಂಟು ಮಾಡಿದೆ ಮೊದಲೇ ನಿಗದಿಯಾಗಿದ್ದ ಸರಕಾರಿ ಬಸ್ಸು ಅಂಗಾರಕಟ್ಟೆ ಹೆಲ್ತ್ ಸೆಂಟರ್ ತನಕ (ಪ್ರಾರ್ಥಮಿಕ ಆರೋಗ್ಯ ಕೇಂದ್ರ ) ಅಲ್ಲಿಯ ತನಕ ಸರಕಾರಿ ಬಸ್ ಓಡಾಟ ನಡೆಸುತ್ತದೆ ಎಂದು ದೂರವಾಣಿಯ ಮೂಲಕ ಮಾಹಿತಿ ಒದಗಿತ್ತು. ಮಂಗಳೂರು ಸಂಚಾರಿ ಆಯುಕ್ತರು ಹಾಗೂ ಉಡುಪಿಯ ಬಸ್ ಡಿಪೋ ಮ್ಯಾನೇಜರ್ ಮಾಹಿತಿಯಂತೆ ಬಸ್ ಬರುವುದು ಖಚಿತವಾಗಿದ್ದರಿಂದ ಸ್ಥಳೀಯರು ಸಾರ್ವಜನಿಕರೇ ಸ್ವಾಗತಿಸಲು ಸಿದ್ದರಾಗಿದ್ದರು.

1004325837

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಗಣೇಶ್ ಸರಳಬೆಟ್ಟು ತಾಂತ್ರಿಕ ದೋಷದಿಂದ ಬಸ್ಸು ಹೊರಡಲಿಲ್ಲ ಎಂದು ಡಿಪೋ ಮ್ಯಾನೇಜರ್ ತಿಳಿಸಿದ್ದಾರೆ, ಇದರ ಹಿಂದೆ ಖಾಸಗೀ ಬಸ್ ನವರ ಲಾಭಿ ಇದೆಯೋ ಎಂದು ಸಹ ತಿಳಿಯುತ್ತಿಲ್ಲ ಇತ್ತ ಖಾಸಗೀ ಬಸ್ಸು ಸಂಚಾರಿಸದೆ. ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಸಂಚರಿಸುವ ಉದ್ಯೋಗಸ್ಥರು ಸರಕಾರಿ ಬಸ್ಸು ಬರುತ್ತದೆ ಎಂದು ಹುಮ್ಮಸ್ಸಿನಿಂದ ಸ್ವಾಗತಿಸಲು ಸನ್ನದ್ದರಾಗಿದ್ದರು. ಸರಕಾರಿ ಬಸ್ಸು ಬಾರದೆ ಪ್ರಯಾಣಿಕರಿಗೆ ನಿರಾಸೆ ಉಂಟು ಮಾಡಿದೆ. ಈಗಾಗಲೇ ಉಡುಪಿ ಭಾಗದಿಂದಲೂ ಸರಕಾರಿ ಬಸ್ಸು ಹೊರಟು, ಓಂತಿ ಬೆಟ್ಟಿನ ಮೂಲಕ ಪೆರ್ಲಂಕಿಲ ಮಹಾಗಣಪತಿ ದೇವಸ್ಥಾನದ ತನಕ ಸರ್ಕಾರಿ ಬಸ್ಸು ಸಂಚರಿಸಬೇಕೆಂದು ಉಡುಪಿಯ ಡಿಪೋ ಮ್ಯಾನೇಜರ್ ಗೆ ನಿಟ್ಟೂರಿನ ಬಸ್ ಡಿಪೋಗೆ ಹೋಗಿ ಈ ಹಿಂದೆ ಸ್ಥಳೀಯ ನಿವಾಸಿಗಳ ಸೇರಿಕೊಂಡು ಸರಕಾರಿ ಬಸ್ಸು ಬೇಕೆಂದು ಮನವಿ ಸಲ್ಲಿಸಿದ್ದೆವು. ಮೂಡುಬೆಳ್ಳೆ ಮೂಲಕವಾದರೂ ಸರಕಾರಿ ಬಸ್ಸು ಸಂಚರಿಸುತ್ತೇವೆ ಎಂದು ಮಾಹಿತಿ ನೀಡಿದ್ದರು ಆದರೆ ಈ ಭಾಗದ ಜನರಿಗೆ ಅತ್ಯಂತ ಹೆಚ್ಚಿನ ನಿರಾಸೆಯಾಗಿದೆ ಎಂದು ಹೇಳಿದರು.

Advertisements

ಒಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಿಸಿದ ಶಕ್ತಿ ಯೋಜನೆಯನ್ನು ಪಡೆಯುವಲ್ಲಿ ಕರಾವಳಿಯ ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಪಡೆಯುವಲ್ಲಿ ವಿಫಲರಾಗಿದ್ದಾರೆ ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನವಹಿಸಿ ಗ್ರಾಮೀಣ ಭಾಗದ ಜನರಿಗೂ ಅನುಕೂಲ ಮಾಡಬೇಕಾಗಿದೆ..

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X