ʼಈ ದಿನ ವರದಿʼಗೆ ಎಚ್ಚೆತ್ತ ಅಧಿಕಾರಿಗಳು; ಕೋಣೆಬೈಲು ಗ್ರಾಮಸ್ಥರಿಗೆ ಮೂಲಸೌಕರ್ಯದ ಭರವಸೆ 

Date:

Advertisements

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಮೀಪದಲ್ಲಿರುವ ಕೋಣೆಬೈಲು ಗ್ರಾಮದಲ್ಲಿ ಸುಮಾರು ನೂರಾರು ವರ್ಷದಿಂದ ಬದುಕು ಕಟ್ಟಿಕೊಂಡು ಜನರು ಬದುಕುತ್ತಿದ್ದಾರೆ. ಕೋಣೆಬೈಲು ಗ್ರಾಮದಲ್ಲಿ 55-60ಕ್ಕೂ ಅಧಿಕ ಕುಟುಂಬದವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಈವರೆಗೆ ಸರಿಯಾದ ಮೂಲಸೌಕರ್ಯಗಳು ಸಿಗದೆ ವಂಚಿತರಾಗಿದ್ದಾರೆ.

Screenshot 2025 02 03 23 33 12 05 7352322957d4404136654ef4adb64504
ಕಳಸ ಗ್ರಾಮ ಪಂಚಾಯಿತಿ ಪಿಡಿಓ ಕವಿಶ್ ಅವರನ್ನು ಭೇಟಿ ಮಾಡಿ ಕೋಣೆಬೈಲು ಗ್ರಾಮದ ಸಮಸ್ಯೆ ಕುರಿತು ಮಾತಾಡಿಸಿದ ಸಂದರ್ಭ.

ಕುಡಿಯುವ ನೀರು, ದಾರಿ ದೀಪಗಳು, ಓಡಾಡಲು ಸೂಕ್ತವಾದ ರಸ್ತೆ ಸೇರಿದಂತೆ ಯಾವುದೇ ರೀತಿಯ ಮೂಲಸೌಕರ್ಯಗಳಿಲ್ಲ. ಇಷ್ಟು ವರ್ಷದಿಂದ ವಾಸ ಮಾಡಿದರೂ ಹಕ್ಕುಪತ್ರವಿಲ್ಲದೆ ಪರದಾಡುತ್ತಿರುವುದು ಅಲ್ಲದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸುಮಾರು ವರ್ಷದಿಂದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಗದಿರುವ ಹಿನ್ನೆಲೆಯಲ್ಲಿ ಜನವರಿ 17ರಂದು ಈ ದಿನ.ಕಾಮ್ ತಂಡ ಕಳಸ ತಾಲೂಕಿನ ಗ್ರಾಮ ಪಂಚಾಯಿತಿ ಪಿಡಿಒ ಕವಿಶ್ ಹಾಗೂ ತಹಶೀಲ್ದಾರ್ ಶಾರದ ಅವರನ್ನು ಭೇಟಿ ಮಾಡಿ ಕೋಣೆಬೈಲು ಗ್ರಾಮದ ಸಮಸ್ಯೆ ಬಗ್ಗೆ ಗಮನಕ್ಕೆ ತರಲಾಗಿತ್ತು. 

Screenshot 2025 02 03 23 27 07 41 7352322957d4404136654ef4adb64504
ಈದಿನ.ಕಾಮ್ ವರದಿ ಮಾಡಿದ ಕೂಡಲೇ ಅಧಿಕಾರಿಗಳು ಕೋಣೆಬೈಲು ಗ್ರಾಮಕ್ಕೆ ಬೀದಿದೀಪ ಅಳವಡಿಸಿದ ದೃಶ್ಯ.

ಮುಖ್ಯವಾಗಿರುವ ಮೂಲಸೌಕರ್ಯ ಹಾಗೂ ರಸ್ತೆ ಸಂಬಂಧಿಸಿದಂತೆ ಜನವರಿ 19ರಂದು ಈ ದಿನ.ಕಾಮ್ ವರದಿ ಪ್ರಕಟಿಸಿತ್ತು. ಸುದ್ದಿ ಪ್ರಕಟಿಸಿದ ನಂತರ ಅಧಿಕಾರಿಗಳು ಗಮನವಹಿಸಿ ಜನವರಿ 21ರಂದು ಕಳಸ ಗ್ರಾಮ ಪಂಚಾಯಿತಿಯ ಪಿಡಿಒ ಭೇಟಿ ನೀಡಿ ಬೀದಿ ದೀಪಗಳನ್ನು ಅಳವಡಿಸಿದ್ದಾರೆ. ಹಾಗೆಯೇ, ಆ ದಿನವೇ ತಾಲೂಕಿನ ತಹಶೀಲ್ದಾರ್ ಶಾರದ ಅವರು ಕೋಣೆಬೈಲು ಗ್ರಾಮಕ್ಕೆ ಭೇಟಿನೀಡಿ ಅಲ್ಲಿನ ಸಮಸ್ಯೆ ಕುರಿತು ಸಾರ್ವಜನಿಕರನ್ನು ಮಾತನಾಡಿಸಿ, ಗ್ರಾಮದ ಕುಂದುಕೊರತೆ ಬಗ್ಗೆ ವಿಚಾರಿಸಿದ್ದಾರೆ. ಆ ಗ್ರಾಮದ ಜನರು ತಿರುಗಾಡದಂತೆ ರಸ್ತೆಗೆ ನಿರ್ಬಂಧ ಹಾಕಿದ್ದ ಮಾಲೀಕನನ್ನು ವಿಚಾರಿಸಿ ತಿಳಿಹೇಳಿ, ನಿರ್ಬಂಧ ಹಾಕಿರುವ ಜಾಗವನ್ನು ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisements
Screenshot 2025 02 03 23 32 00 16 7352322957d4404136654ef4adb64504
ಕಳಸ ತಾಲೂಕಿನ ತಹಶೀಲ್ದಾರ್ ಶಾರದ ಹಾಗೂ ಆರ್ ಐ ಅವರು ಕೋಣೆಬೈಲು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು ಸಮಸ್ಯೆ ಆಲಿಸುತ್ತಿರುವ ದೃಶ್ಯ

ಈ ದಿನ.ಕಾಮ್ ಸುದ್ದಿ ಮಾಡಿ ಒಂದು ವಾರದ ನಂತರ ಕೋಣೆಬೈಲು ಗ್ರಾಮಕ್ಕೆ ಕೊಪ್ಪ ತಾಲೂಕಿನ ಡಿವೈಎಸ್‌ಪಿ ಬಾಲಾಜಿ ಸಿಂಗ್ ಭೇಟಿ ಮಾಡಿ ಸಾರ್ವಜನಿಕರಲ್ಲಿ ಗ್ರಾಮದ ಸಮಸ್ಯೆ ಕುರಿತು ಮಾತನಾಡಿದ್ದು, ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

IMG 20250203 WA0454
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅವರು ಕೋಣೆಬೈಲು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ.

ಡಿವೈಎಸ್‌ಪಿ ಭೇಟಿ ನೀಡಿದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅವರು ಕೋಣೆಬೈಲು ಗ್ರಾಮಕ್ಕೆ ಭೇಟಿ ಮಾಡಿ “ತಹಶೀಲ್ದಾರ್ ಅವರು ಸರ್ವೇ ಮಾಡಲು ಕೊಟ್ಟಿದ್ದಾರೆ. ಸರ್ವೇಯಲ್ಲಿ ನಕಾಶೆ ರಸ್ತೆ ಹಾಗೂ ರಸ್ತೆ ಎಲ್ಲಿ ಕಂಡುಬರುತ್ತದೆಂದು ತಿಳಿದ ಕೂಡಲೇ, ನಾವು ಆ ರಸ್ತೆಯನ್ನು ಬಿಡಿಸಿಕೊಡುತ್ತೇವೆ” ಎಂದು ಗ್ರಾಮಸ್ಥರಿಗೆ ಮಾಹಿತಿ ತಿಳಿಸಿದ್ದಾರೆ.

Screenshot 2025 02 03 23 30 01 14 7352322957d4404136654ef4adb64504
ಕೋಣೆಬೈಲು ಗ್ರಾಮಸ್ಥರ ಜೊತೆಗೆ ಸೂಕ್ತ ರಸ್ತೆ ಇಲ್ಲದ ರಸ್ತೆಯಲ್ಲಿ ಹೆಜ್ಜೆ ಹಾಕಿದ ಅಧಿಕಾರಿಗಳು.

ಎಸ್‌ಸಿ/ಎಸ್‌ಟಿ ದಲಿತ ದೌರ್ಜನ್ಯ ನಿಯಂತ್ರಣ ಸಮಿತಿಯಿಂದ ಈ ದಿನ.ಕಾಮ್ ಸುದ್ದಿ ಪ್ರಕಟ ಮಾಡಿರುವುದನ್ನು ಗಮನಿಸಿ ಅನಿಲ್ ಕುಮಾರ್ ಅವರು ಹಾಗೂ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗ ದಂಡಾಧಿಕಾರಿ ರಶ್ಮಿಯವರು ಕಳಸ ತಾಲೂಕಿನ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದು ಫೋನ್ ಮೂಲಕ ಮಾತನಾಡಿಸಿದ್ದಾರೆ” ಎಂದು ಕೋಣೆಬೈಲು ಗ್ರಾಮಸ್ಥರು ಈ ದಿನ.ಕಾಮ್‌ಗೆ ಮಾಹಿತಿ ತಿಳಿಸಿದರು. 

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ʼಸೂಸಲವಾನಿʼ ಗ್ರಾಮದ ರಸ್ತೆಗಿಲ್ಲ ಡಾಂಬರು ಭಾಗ್ಯ; ಗ್ರಾಮಸ್ಥರ ಅಳಲು ಕೇಳೋರೆ ಇಲ್ಲ

ಈ ದಿನ.ಕಾಮ್ ವರದಿ ಮಾಡಿದ್ದರಿಂದ ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಬಂದು ಇಲ್ಲಿನ ಸಮಸ್ಯೆ ಬಗ್ಗೆ ಆಲಿಸಿದ್ದಾರೆಂದು ಕೋಣೆಬೈಲು ಗ್ರಾಮಸ್ಥರು ಈ ದಿನ.ಕಾಮ್‌ಗೆ ಕೃತಜ್ಞತೆ ವ್ಯಕ್ತಪಡಿಸಿದ್ದು, ರಸ್ತೆ ಸಮಸ್ಯೆ ಆದಷ್ಟು ಬೇಗ ಬಗೆಹರಿದರೆ ಸಾಕು ಎಂದು ಕಾಯುತ್ತಿದ್ದಾರೆ.

WhatsApp Image 2024 10 24 at 12.02.30
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

Download Eedina App Android / iOS

X