ರಕ್ಷಿಸಲ್ಪಟ್ಟು ಪುರ್ನವಸತಿ ಪಡೆದಿದ್ದ, ವೃದ್ಧರ ಮನೆಮಂದಿಯನ್ನು ಪತ್ತೆಗೊಳಿಸಿ, ಹಸ್ತಾಂತರಿಸುವಲ್ಲಿ ಉಡುಪಿಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ಯಶಸ್ವಿಯಾಗಿದೆ. ಕಾರ್ಯಚರಣೆಯಲ್ಲಿ ಆಪ್ತ ಸಮಾಲೋಚಕರಾದ ರೋಶನ್ ಕೆ ಅಮೀನ್, ಪೂರ್ಣಿಮಾ ಭಾಗಿಯಾಗಿದ್ದರು. ವೃದ್ಧರು ಕಳೆದ 15 ವರ್ಷಗಳಿಂದ ಮನೆಯಿಂದ ಹೊರಗುಳಿದಿದ್ದರು. ವೃದ್ಧರ ಹೆಸರು ಮಾದೇಶ ಶಿಂಧೆ, ಬೆಳಗಾವಿಯವರಾಗಿದ್ದರು.
ಬದುಕಿನಲ್ಲಿ ಎದುರಾದ ಅಸಹಾಯಕ ಪರಿಸ್ಥಿತಿಯನ್ನು ಎದುರಿಸಲಾಗದೆ, ಶ್ರೀಕೃಷ್ಣ ಮಠದ ಪರಿಸರದಲ್ಲಿ ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಿದ್ದ ಅಪರಿಚಿತ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿದ್ದರು. ಬಳಿಕವೃದ್ಧರನ್ನು ಕೊರ್ಟ್ ರಸ್ತೆಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದರು. ವೃದ್ಧರು ಕಳೆದ ನಾಲ್ಕು ತಿಂಗಳುಗಳಿಂದ ಹೊಸಬದುಕು ಆಶ್ರಮದ ಸಂಚಾಲಕರಾದ ವಿನಯಚಂದ್ರ, ರಾಜಶ್ರೀಯವರ ಶೂಶ್ರೂಸೆ, ಪೋಷಣೆಯಲ್ಲಿದ್ದರು.
