ಶಿವಮೊಗ್ಗ | ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ದರ್ಪ; ಸಾರ್ವಜನಿಕರ ಆಕ್ರೋಶ

Date:

Advertisements

ನಿಗದಿತ ನಿಲ್ದಾಣಗಳಲ್ಲಿ ಬಸ್‌ ನಿಲ್ಲಿಸದೆ, ಕೇಳಿದ ಸ್ಥಳಕ್ಕೆ ಟಿಕೆಟ್‌ ನೀಡದೆ ಸಾರ್ವಜನಿಕರ ಮೇಲೆ ಕೆಎಸ್‌ಆರ್‌ಟಿಸಿ ಬಸ್‌‌ (ಸಂಖ್ಯೆ: ಕೆಎ-42 ಎಫ್-2005) ಚಾಲಕ ಹಾಗೂ ನಿರ್ವಾಹಕರು ದರ್ಪ ತೋರಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಪ್ರಯಾಣಿಕರೊಬ್ಬರಿಗೆ ಭದ್ರಾವತಿ ಬದಲು ಹಾಲಿನ ಡೈರಿ ಸ್ಟಾಪ್‌ಗೆ ಟಿಕೆಟ್ ನೀಡಿದ್ದಾರೆ. ʼಎಲ್ಲಿಗೋ ಟಿಕೆಟ್ ಕೇಳಿದರೆ ಇನ್ನೆಲ್ಲಿಗೋ ಟಿಕೆಟ್ ನೀಡುತ್ತೀರಿ, ಚೆಕಿಂಗ್ ಬಂದರೆ ನಾನು ದಂಡ ಕಟ್ಟಬೇಕು ಪ್ರಯಾಣಿಕ ಸಿಟ್ಟಾದಾಗ, ನೀನು ಡೈರಿ ಬಂದಾಗ ಪುನಃ ಭದ್ರಾವತಿಗೆ ಟಿಕೆಟ್ ತಗೊ ಎಂದು ಕಂಡಕ್ಟರ್ ಉಡಾಫೆಯಾಗಿ ಮಾತನಾಡಿದ್ದಾರೆ. ಇದರಿಂದ ಪ್ರಯಾಣಿಕ ಹಾಗೂ ಕಂಡಕ್ಟರ್ ನಡುವೆ ವಾಗ್ವಾದ ನಡೆದಿದೆ.

ಅದೇ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಈದಿನ ಮಾಧ್ಯಮ ಪ್ರತಿನಿಧಿ ‘ಅವಾಗಿನಿಂದಲೂ ಯಾಕೆ ಹೀಗೆ ಪ್ರಯಾಣಿಕರಿಗೆ ತೊಂದರೆ ಮಾಡ್ತಿದ್ದೀರಿʼ ಎಂದು ಪ್ರಶ್ನೆ ಮಾಡಿದ್ದಕ್ಕೆ ಕುಪಿತಗೊಂಡ ಬಸ್ ನಿರ್ವಾಹಕ‌, ನೀನು ಯಾವ ಸ್ಟಾಪ್, ಎಲ್ಲಿ ಇಳಿಬೇಕು ಅಲ್ಲಿ ಇಳಿ, ಬೇರೆ ಅವರ ಉಸಾಬರಿ ನಿನಗೆ ಏನಕ್ಕೆ? ನೀನು ಯಾವನು ಕೇಳುವುದಕ್ಕೆ, ಅವರ ಅವರ ಹಣೆಬರಹ ನಡೆದುಕೊಂಡು ಹೋಗುತ್ತಾರೆ ಅವರಿಗೆ ನಡೆಯೋ ಶಕ್ತಿ ಇದೆ. ನನ್ನ ಕೆಲಸ ಮಾಡೋದ್ ನನಗೆ ಗೊತ್ತಿದೆ. ಅನವಶ್ಯಕ ಮಾತಾಡಬೇಡ ಎಂದೆಲ್ಲಾ ನಿಂದಿಸಿದ್ದಾರೆ.

Advertisements

ರಾತ್ರಿ ಸಮಯದಲ್ಲಿ ಮಹಿಳೆಯರು, ಮಕ್ಕಳು, ವಿದ್ಯಾರ್ಥಿನಿಯರು, ವಯಸ್ಸಾದವರು ಬಸ್‌ಗಳಿಗಾಗಿ ನಿಗದಿತ ಸ್ಟಾಪ್‌ಗಳಲ್ಲಿ ಕಾಯುತ್ತಿರುತ್ತಾರೆ. ಆದರೆ ಈ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ಲಿಸುವುದೇ ಇಲ್ಲ. ಬೆಳಗ್ಗೆ ಸಮಯದಲ್ಲೂ ಹೀಗೇ ಮಾಡುತ್ತಾರೆ. ಒಂದು ಸ್ಥಳಕ್ಕೆ ಟಿಕೆಟ್‌ ಕೇಳಿದರೆ ಇನ್ಯಾವುದೋ ಸ್ಟಾಪಿಗೆ ಟಿಕೆಟ್‌ ಕೊಡುತ್ತಾರೆ. ಪ್ರಶ್ನಿಸಿದರೆ ಬಾಯಿಗೆ ಬಂದದ್ದು ಮಾತನಾಡುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಮದುವೆಯಾಗುವುದಾಗಿ ನಂಬಿಸಿ ವಂಚನೆ; ಮಹಿಳೆಯಿಂದ ₹7 ಲಕ್ಷ ಪೀಕಿಸಿದ ಖದೀಮ

ಶಿವಮೊಗ್ಗ ಕೆಎಸ್‌ಆರ್‌ಟಿಸಿಯ ಆಡಳಿತ ಅಧಿಕಾರಿ (ಎಂಡಿ) ಇಂತಹ ಚಾಲಕ, ನಿರ್ವಹಕರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಾರೆ, ಹಾಗೂ ಸಾಕಷ್ಟು ಬಸ್‌ ನಿಯೋಜಿಸಿ ಪ್ರಯಾಣಿಕರ ಅನುಕೂಲ ಮಾಡುವಲ್ಲಿ ಮುಂದಿನ ದಿನಗಳಲ್ಲಿ ಏನು ಪರ್ಯಾಯ ವ್ಯವಸ್ಥೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

ಭಾರದ್ವಾಜ್
ರಾಘವೇಂದ್ರ, ಶಿವಮೊಗ್ಗ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X