ದೆಹಲಿ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ ಜೊತೆಯಾಗಿ ಸ್ಪರ್ಧಿಸಬೇಕಿತ್ತು: ಅಮರ್ತ್ಯ ಸೇನ್

Date:

Advertisements

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಜೊತೆಯಾಗಿ ಸ್ಪರ್ಧಿಸಬೇಕಿತ್ತು. ಉಭಯ ಪಕ್ಷಗಳ ನಡುವೆ ಒಗ್ಗಟ್ಟು ಅತೀ ಮುಖ್ಯವಾಗಿತ್ತು. ಬಹುತೇಕ ಭಾರತೀಯರಿಗೆ ಹಿಂದೂ ರಾಷ್ಟ್ರ ಬೇಕಾಗಿಲ್ಲ ಎಂದು ನೊಬೆಲ್ ಪುರಸ್ಕೃತ, ಭಾರತದ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪಿಟಿಐ ಜೊತೆ ಸಂದರ್ಶನದಲ್ಲಿ ಮಾತನಾಡಿದ ಅಮರ್ತ್ಯ ಸೇನ್ ಅವರು, “ಭಾರತದಲ್ಲಿ ಜಾತ್ಯತೀತತೆ ಉಳಿಯಬೇಕಾದರೆ ಒಗ್ಗಟ್ಟು ಇರುವುದು ಮಾತ್ರ ಮುಖ್ಯವಲ್ಲ. ಬಹುತ್ವಕ್ಕೆ ಉತ್ತಮ ಉದಾಹರಣೆಯಾದ ಭಾರತದಲ್ಲಿ ಇಂತಹ ವಿಚಾರದಲ್ಲಿ ಒಪ್ಪಂದ ಮಾಡಿಕೊಳ್ಳುವುದು ಅತೀ ಮುಖ್ಯ” ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ದೆಹಲಿ ಚುನಾವಣೆ | ಎಎಪಿ ಕೈಬಿಟ್ಟ ದಲಿತರು; ಮೀಸಲು ಕ್ಷೇತ್ರಗಳ ಸಮೀಕರಣ ಬದಲಾಗಿದ್ದೇಗೆ?

Advertisements

“ದೆಹಲಿ ಚುನಾವಣೆ ಫಲಿತಾಂಶವನ್ನು ಉತ್ಪ್ರೇಕ್ಷಿಸಬೇಕೆಂದು ನನಗೆ ಅನಿಸುವುದಿಲ್ಲ. ಆದರೆ ಅದಕ್ಕೆ ಅದರದ್ದೇ ಆದ ಪ್ರಾಮುಖ್ಯತೆಯಿದೆ. ಎಎಪಿ ಅಲ್ಲಿ ಗೆದ್ದಿದ್ದರೆ ಆ ಗೆಲುವಿಗೆ ಒಂದು ತೂಕ ಇರುತ್ತಿತ್ತು” ಎಂದು ಹೇಳಿದರು.

ದೆಹಲಿಯಲ್ಲಿ ಹಿಂದುತ್ವಪರವಾದ ಸರ್ಕಾರವನ್ನು ಬಯಸದವರ ಜೊತೆ ಒಗ್ಗಟ್ಟು ಇಲ್ಲದಿರುವುದೇ ದೆಹಲಿಯಲ್ಲಿ ಎಎಪಿ ಸೋಲಲು ಕಾರಣ ಎಂದು ಅಮರ್ತ್ಯ ಸೇನ್ ಅಭಿಪ್ರಾಯಿಸಿದ್ದಾರೆ. “ಮತ ಲೆಕ್ಕಾಚಾರವನ್ನು ನೋಡಿದಾಗ ಬಿಜೆಪಿಯ ಮತ ಅಂತರ ಎಎಪಿಗಿಂತ ಕಡಿಮೆಯಾಗಿದೆ. ಕೆಲವೆಡೆ ಕಾಂಗ್ರೆಸ್ ಪಡೆದ ಮತಕ್ಕಿಂತ ಕಡಿಮೆಯಾಗಿದೆ” ಎಂದು ವಿವರಿಸಿದರು.

“ಎಎಪಿಯ ಹೊಣೆಗಾರಿಕೆಯೇನು? ಎಎಪಿ ಜಾತ್ಯಾತೀತ ಪಕ್ಷವೆಂದು ಎಲ್ಲರಿಗೂ ಸ್ಪಷ್ಪಪಡಿಸುವಲ್ಲಿ ಎಎಪಿ ಯಶಸ್ವಿಯಾಗಿದೆ ಎಂದು ನನಗನಿಸುವುದಿಲ್ಲ. ಎಎಪಿ ಈ ವಿಚಾರದಲ್ಲಿ ಸ್ಪಷ್ಟ ನಿಲುವನ್ನು ತೆಗೆದುಕೊಂಡಿಲ್ಲ” ಎಂದು ಹೇಳಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X