ಗುಬ್ಬಿ | ಸರ್ಕಾರಿ ಮೂಲ ನಕಾಶೆಯಂತೆ ಖರಾಬು ರಸ್ತೆ ಮಾಡಲಿ : ಹೊನ್ನಶೆಟ್ಟಿಹಳ್ಳಿ ಗ್ರಾಮಸ್ಥರ ಆಗ್ರಹ

Date:

Advertisements

ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಖರಾಬು ರಸ್ತೆ ಬಿಡಿಸಿ ಕೊಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ನೀಡಿರುವ ವಕೀಲ ನವೀನ್ ಕುಮಾರ್ ಅವರ ಅರ್ಜಿಯಂತೆ ಮೂಲ ನಕಾಶೆಯಲ್ಲಿರುವ ಖರಾಬು ಜಾಗವನ್ನು ಗುರುತು ಮಾಡಿ ಸಾರ್ವಜನಿಕ ರಸ್ತೆ ನಿರ್ಮಿಸಬೇಕು ಎಂದು ಮಾಜಿ ಗ್ರಾಪಂ ಅಧ್ಯಕ್ಷ ಎಚ್.ಎನ್.ಧರ್ಮೇಗೌಡ ಒತ್ತಾಯಿಸಿದರು.

ತಾಲ್ಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸರ್ವೇ ನಂಬರ್ 47 ರಲ್ಲಿ ವಕೀಲ ಮನೆ ನಿರ್ಮಾಣ ಮಾಡಿದ್ದು ಅಲ್ಲಿಗೆ ಓಡಾಡಲು ಈವರೆವಿಗೂ ಇದ್ದ ರಸ್ತೆ ನನ್ನ ಸ್ವಂತ ಜಮೀನು ಆಗಿದೆ. ಅನು ತನು ಮೇಲೆ ಬಿಟ್ಟ ಜಾಗ ಈಗ ಸಿಸಿರಸ್ತೆ ಮಾಡಲು ಜಲ್ಲಿ ತಂದು ಸುರಿದಿದ್ದೇನೆ. ನರೇಗಾ ಯೋಜನೆ ರಸ್ತೆ ಕೂಡ ಮಾಡಲಾಗಿದೆ. ಇಡೀ ಗ್ರಾಮವನ್ನೇ ಎದುರು ಮಾಡಿಕೊಂಡು ಕಾನೂನು ಕಟ್ಟಳೆ ಬಗ್ಗೆ ಮಾತನಾಡಿದ ವಕೀಲ ನವೀನ್ ಕುಮಾರ್ ದೇವಸ್ಥಾನಕ್ಕೆ ಸಂಬಂಧಿಸಿದ ಕೊಡಗಿ ಜಮೀನು ಬರೆಸಿಕೊಂಡಿರುವುದು ಇಡೀ ಗ್ರಾಮಕ್ಕೆ ಬೇಸರ ತಂದಿದೆ. ಈ ನಿಟ್ಟಿನಲ್ಲಿ ಅನುತನು ರಸ್ತೆಯನ್ನು ಮುಚ್ಚಿದ್ದೇವೆ ಎಂದು ಸಮರ್ಥಿಸಿಕೊಂಡರು.

ಕೂಡಗಿ ಜಮೀನು ದೇವಾಲಯಕ್ಕೆ ಸಂಬಂಧಿಸಿದ್ದು ಬಿಟ್ಟುಕೊಡಲು ಮನವಿ ಮಾಡಿದರೆ ವಕೀಲ ನವೀನ್ ಹೊನ್ನಶೆಟ್ಟಿಹಳ್ಳಿ ಸುಪ್ರೀಂ ಕೋರ್ಟ್ ಆಗಿದೆಯೇ ಅಥವಾ ವಿಧಾನಸೌಧವೇ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಗ್ರಾಮಕ್ಕೆ ಅಪಮಾನ ಮಾಡಿದ ವಕೀಲರು ಕಾನೂನು ಕಟ್ಟಳೆ ಮೂಲಕವೇ ಖಾರಬು ರಸ್ತೆ ನಿರ್ಮಿಸಿಕೊಳ್ಳಲಿ. ಮೂಲ ನಕಾಶೆಯಂತೇ ಖರಾಬು ಜಾಗ ತಾಲ್ಲೂಕು ಆಡಳಿತ ಗುರುತಿಸಿಕೊಡಲಿ ಎಂದು ಒತ್ತಾಯಿಸಿದ ಅವರು ಊರಿನ ಪಟೇಲ್ ವಂಶಸ್ಥರಾದ ಲಾಯರ್ ನವೀನ್ ತಾಲ್ಲೂಕು ಕಚೇರಿ ಮುಂದೆ ಧರಣಿ ಮಾಡುವುದಾಗಿ ಮಾಧ್ಯಮ ಮೂಲಕ ತಿಳಿಸಿದ್ದಾರೆ. ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿ ಮೂಲ ನಕಾಶೆಯಂತೆ ಖರಾಬು ಗುರುತಿಸಲಿ. ಇಡೀ ಊರು ಒಂದಾಗಿ ದೇವಸ್ಥಾನದ ಜಮೀನು ಬಿಟ್ಟು ಕೊಡಲು ಮನವಿ ಮಾಡಿದ್ದೇವೆ. ಮರಳಿ ನರಸಿಂಹಯ್ಯ ಅವರಿಗೆ ಬಿಟ್ಟಲ್ಲಿ ಅದನ್ನು ಗ್ರಾಮವೇ ದೇವಾಲಯಕ್ಕೆ ಬರೆದುಕೊಡಲಿದೆ ಎಂದು ತಿಳಿಸಿದರು.

Advertisements

ಸ್ಥಳೀಯ ಮುಖಂಡ ಹರೀಶ್ ಮಾತನಾಡಿ ಕೊಡಗೀ ಜಮೀನು ಬರೆಸಿಕೊಂಡಿರುವ ವಕೀಲ ನವೀನ್ ಇಲ್ಲಸಲ್ಲದ ಆರೋಪ ಮಾಡಿ ಎಂಟು ಜನರ ಮೇಲೆ ಪೊಲೀಸ್ ದೂರು ನೀಡಿದ್ದಾರೆ. ಊರಿನ ಸ್ವಾಸ್ಥ್ಯ ಹಾಳು ಮಾಡುವುದು ಹಾಗೂ ಗ್ರಾಮದಲ್ಲಿ ಸಂಘರ್ಷಕ್ಕೆ ದಾರಿ ಮಾಡುವುದು ಹಾಗೂ ನಮ್ಮಲ್ಲೇ ಎತ್ತಿಕಟ್ಟಿ ಗುಂಪು ಮಾಡುವ ಕೆಲಸ ಮಾಡುತ್ತಿದ್ದಾರೆ. ಅರ್ಚಕ ನರಸಿಂಹಯ್ಯ ವಯೋವೃದ್ದರಾಗಿದ್ದು ಅವರನ್ನು ನಾಪತ್ತೆ ಮಾಡಿ ಜಮೀನು ಬರೆಸಿಕೊಂಡಿದ್ದಾರೆ. ಈ ಹಿಂದೆ ನರಸಿಂಹಯ್ಯ ಅವರಿಂದ ಅವರ ಸಂಬಂಧಿ ಶೇಷಗಿರಿ ಎಂಬುವವರು ಜಮೀನು ದಾನ ಮೂಲಕ ಬರೆಸಿಕೊಂಡಿದ್ದರು. ಆದರೆ ದೂರದ ಸಂಬಂಧಿಗೆ ದಾನ ನೀಡಲು ಕಾನೂನು ತೊಡಕು ಬಂತು. ಆಗ ಉಪ ವಿಭಾಗಾಧಿಕಾರಿ ಕೋರ್ಟ್ ಮೂಲಕ ಮರಳಿ ನರಸಿಂಹಯ್ಯ ಅವರಿಗೆ ಜಮೀನು ಬಂತು. ಆದರೆ ವಿಚಾರ ತಿಳಿದ ವಕೀಲ ನವೀನ್ ಹಾಗೂ ಶೇಷಗಿರಿ ಇಬ್ಬರು ಸೇರಿ ನರಸಿಂಹಯ್ಯ ಅವರನ್ನು ಕಿಡ್ನಾಪ್ ಮಾಡಿ ವಕೀಲರ ಹೆಸರಿಗೆ ಕ್ರಯ ಮಾಡಿಸಲಾಗಿದೆ. ಈ ಕಿಡ್ನಾಪ್ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಲಿಸರು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಇಂದಿಗೂ ನರಸಿಂಹಯ್ಯ ಎಲ್ಲಿದ್ದಾರೆ ಯಾರಿಗೂ ತಿಳಿದಿಲ್ಲ. ಕೊಡಗಿ ಜಮೀನು ಖರೀದಿ ನಂತರ ಮತ್ತೊಂದು ಭಾಗದಲ್ಲಿ ಜಮೀನು ಖರೀದಿಸಿ ಮನೆ ನಿರ್ಮಾಣ ಮಾಡಿದ್ದು ಅಲ್ಲಿ ರಸ್ತೆಗೆ ತಕರಾರು ತೆಗೆದಿದ್ದಾರೆ. ಸುಳ್ಳು ದೂರು ದಾಖಲಿಸಿ ಊರಿನಲ್ಲಿ ಘರ್ಷಣೆಗೆ ಕಾರಣವಾಗುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಕಾಂತರಾಜು, ರಮೇಶ್, ಯೋಗೀಶ್, ಪಾಂಡುರಂಗಯ್ಯ, ಮಂಜುನಾಥ್, ನಾಗರಾಜು, ಸೋಮಶೇಖರ್, ಬೇವಿನಗುಡ್ಡಯ್ಯ, ದೇವೇಗೌಡ, ರಾಘವೇಂದ್ರ, ಸಾಗರ್, ಅರ್ಚಕ ನರಸಿಂಹಮೂರ್ತಿ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X