ಈ ದಿನ ಇಂಪ್ಯಾಕ್ಟ್ | ‘ಗೋಣಿಗದ್ದೆ ಹಾಡಿ’ ವರದಿಗೆ ಕಂದಾಯ ಸಚಿವರ ಸ್ಪಂದನೆ; ಅರಣ್ಯ ಸಚಿವರ ಜತೆಗೆ ಚರ್ಚಿಸುವ ಭರವಸೆ

Date:

Advertisements

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕೊಡಗಿನ ‘ಗೋಣಿಗದ್ದೆ ಹಾಡಿ’ ವರದಿಗೆ ಸ್ಪಂದಿಸಿದ್ದು, ಅರಣ್ಯ ಸಚಿವರ ಜತೆಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ನಾಲ್ಕೇರಿ ಪಂಚಾಯಿತಿಗೆ ಒಳಪಡುವ ಗೋಣಿಗದ್ದೆಯಲ್ಲಿ ಬದುಕುತ್ತಿರುವ ಹಾಡಿ ಆದಿವಾಸಿಗಳ ದಿನನಿತ್ಯದ ಕಷ್ಟ ಹೇಳತೀರದು. ಕಾಡು ಪ್ರಾಣಿಗಳ ಹಾವಳಿಗಳಿಂದಷ್ಟೇ ಭಯಪಡುವುದಲ್ಲದೆ ಅಲ್ಲಿನ ಜೀವನವೇ ನರಕವಾಗಿದೆ. ಮನುಷ್ಯರು ಸಾಮಾಜಿಕವಾಗಿ ಬದುಕಲು ನಾಡಿನ ಆಸರೆ ಅಗತ್ಯವಿದೆ. ಯಾಕಂದರೆ ಕಾಡಿನಲ್ಲಿ ಬದುಕಲು ಇವತ್ತಿನ ಅರಣ್ಯ ಇಲಾಖೆಯ ಕಾನೂನು ಬಿಡುವುದಿಲ್ಲ. ಅಲ್ಲಿಯ ಉತ್ಪನ್ನವನ್ನೂ ಬಳಸಲು ಆಗದ ಪರಿಸ್ಥಿತಿ. ಕಾಡಿನಲ್ಲಿ ಆಸರೆಗಾಗಿ ಉಳಿಸಿಕೊಂಡಿದ್ದ ಅಷ್ಟೋ ಇಷ್ಟು ಗದ್ದೆ ಜಾಗ ಎಲ್ಲ ಅರಣ್ಯ ಕಾಯ್ದೆ ಹೆಸರಿನಲ್ಲಿ ಕಿತ್ತುಕೊಂಡಾಗ ಭಯದ ನಡುವೆಯೇ ಬದುಕು ನಡೆಯುತ್ತಿದ್ದು, ಮುಂದಿನ ಜೀವನದ ಗತಿಯೇನು? ಎಂಬ ಕಳವಳ ಉಂಟಾಗಿದೆ.

ಗೋಣಿಗದ್ದೆ ಹಾಡಿ ನಿವಾಸಿಗಳ ಬದುಕಿನ ಬವಣೆಯನ್ನು ಕಂಡು ಈ ದಿನ.ಕಾಮ್‌ ಫೆಬ್ರವರಿ 15ರಂದು “ಭಯದಲ್ಲೇ ದಿನ ದೂಡುವ ಆದಿವಾಸಿಗಳು; ಪರ್ಯಾಯ ವ್ಯವಸ್ಥೆಗೆ ಮನವಿ” ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟ ಮಾಡಲಾಗಿತ್ತು. ಜತೆಗೆ ಇಲ್ಲಿಯ ನಿಯೋಗವು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿ ಮಾಡಿದಾಗ ಸ್ಪಂದಿಸಿದ್ದು, ಸಮಸ್ಯೆ ಆಲಿಸಿದ ಸಚಿವರು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆಯವರ ಜತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

Advertisements

ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಸ್ವಗೃಹದಲ್ಲಿ ಕೊಡಗು ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಮುಖಂಡರನ್ನು ಭೇಟಿ ಮಾಡಿದ್ದು, ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಗೋಣಿಗದ್ದೆ ಹಾಡಿ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಸಚಿವರು ಈ ದಿನ.ಕಾಮ್ ವಿಶೇಷ ವರದಿ ಹಾಗೂ ನಿಯೋಗದಲ್ಲಿದ್ದ ಮುಖಂಡರ ಮಾತುಗಳನ್ನು ಆಲಿಸಿ, ಕೊಡಗಿನಲ್ಲಿ ದಲಿತರಿಗೆ, ಶೋಷಿತ ವರ್ಗಗಳಿಗೆ ನಿವೇಶನ, ಮನೆ, ಭೂಮಿ ಇಲ್ಲದಿರುವುದರ ಕುರಿತಾಗಿಯೂ ಚರ್ಚೆ ಮಾಡಿದ್ದಾರೆ. ಈ ವೇಳೆ ದಲಿತ ಮುಖಂಡರ ನಿಯೋಗ, “ಭೂಗುತ್ತಿಗೆ ಆದೇಶ ಹಿಂಪಡೆಯುವಂತೆ ಸರ್ಕಾರದ ಗಮನಕ್ಕೆ ತಂದು ಮುಂದಾಗುವ ಅಪಾಯವನ್ನು ತಪ್ಪಿಸಬೇಕು” ಎಂದು ಕೋರಿದ್ದಾರೆ.

“ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮ ಪಂಚಾಯಿತಿಯ ಗೋಣಿಗದ್ದೆ ಹಾಡಿಯಲ್ಲಿ ಬದುಕುತ್ತಿರುವ ಗಿರಿಜನ ನಿವಾಸಿಗಳು, ಜೇನು ಕುರುಬ ಸಮುದಾಯಗಳಿಗೆ ಈ ಹಿಂದೆ, ಅರಣ್ಯ ಕಾಯ್ದೆಯಡಿ ನಾಗರಹೊಳೆ ಅರಣ್ಯದ ಮಧ್ಯೆ ಸುಮಾರು 30 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಈ ಸ್ಥಳದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಹಾಗೂ ಕ್ರೂರ ಪ್ರಾಣಿಗಳ ಪ್ರಾಣ ಭಯದಿಂದ ಬದುಕುತ್ತಿರುವ ಹಾಡಿ ಜನಗಗಳಿಗೆ ಈ ಹಿಂದೆ ಅರಣ್ಯ ಕಾಯ್ದೆಯಡಿ ಮಂಜೂರಾಗಿದ್ದ ಸ್ಥಳದಿಂದ ಅದೇ ಅರಣ್ಯ ಪ್ರದೇಶದ ಮುಖ್ಯ ರಸ್ತೆಯ ಅಂಚಿಗೆ ಪುನರ್ವಸತಿಗೊಳಿಸಿ ಮೂಲಸೌಕರ್ಯಗಳನ್ನು ಒದಗಿಸಬೇಕು” ಎಂದು ಕೋರಿದ್ದಾರೆ.

IMG 20250219 WA0030

ಈ ಕುರಿತಂತೆ ಪರಿಶೀಲಿಸಿ, ಪುನರ್ವಸತಿಗೊಳಿಸಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕೋರಿದೆಯೆಂದು ಕಂದಾಯ ಇಲಾಖೆ ಸಚಿವಾಲಯದಿಂದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಿಗೆ ಹಾಗೂ ಸಂಭಂದಪಟ್ಟ ಇಲಾಖೆಗಳಿಗೆ ಪತ್ರ ಕಳುಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ‘ ಸರ್ಕಾರಿ ಭೂಮಿ ಒತ್ತುವರಿ ‘ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಒತ್ತಾಯ

ನಿಯೋಗದಲ್ಲಿ ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘಟನೆಯ ಕೊಡಗು ಜಿಲ್ಲಾ ಮುಖಂಡ ಡಿ ಎಸ್ ನಿರ್ವಾಣಪ್ಪ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ, ಆದಿವಾಸಿ ಮುಖಂಡ ಮುತ್ತಣ್ಣ ಹಾಗೂ ಜನಶಕ್ತಿ ಸಂಘಟನೆಯ ರಂಗಾಚಾರ್ ಇದ್ದರು.

WhatsApp Image 2025 02 05 at 18.09.20
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಅರಣ್ಯ ಅಂಚಿನಲ್ಲಿ ಬಧುಕು ತಿರುವ.. ಕಂದಾಯ ಜಮೀನು ಗಳಲ್ಲರುವ.. ರೈತರು ಅರಣ್ಯ ಇಲಾಖೆ ಯವರಿಂದ ಅನುಭವಿಸು ತಿರುವ. ತೊಂದ್ರೆ ಗಳನ್ನು. ಭಗೆಹರಿಸಲು. ತಮ್ನ ಪ್ರಯತ್ನ ಮುಂದು ವರೆಯಲಿ..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

Download Eedina App Android / iOS

X