ಜನಸ್ನೇಹಿ ಕೇಂದ್ರಗಳ ಸೇವಾ ಶುಲ್ಕ ಹೆಚ್ಚಳ ವಿರೋಧಿಸಿ, ಹಾಗೂ ಸ್ಥಳೀಯ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ವಿಜಯನಗರದ ಹೊಸಪೇಟೆಯ ತಹಶೀಲ್ದಾರ್ಗೆ ಮನವಿ ಸಲ್ಲಿಸಿತು.
“ನಿರಂತರ ಬೆಲೆ ಏರಿಕೆ ಇಂದ ಬೇಸತ್ತ ಜನ ಈ ಬಾರಿ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ನೀಡಿದ್ದರು. ಆದರೆ ಬಿಜೆಪಿಯ ಇನ್ನೊಂದು ಮುಖದಂತೆ ಕಾಂಗ್ರೆಸ್ ಸರ್ಕಾರ ನೆಡೆದುಕೊಳ್ಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಜೊತೆಗೆ ಈಗ ಜನಸ್ನೇಹಿ ಕೇಂದ್ರಗಳ ಸೇವಾ ಶುಲ್ಕ ಹೆಚ್ಚಳ ಮಾಡಿದ್ದು, ಇದು ವಸೂಲಾತಿ ಕ್ರಮ ಆಗಿದೆ. ಇದನ್ನು ಕೂಡಲೇ ಕೈಬಿಡಬೇಕು. ಹೊಸ ರೇಷನ್ ಕಾರ್ಡ್ ವ್ಯವಸ್ಥೆ ಕೂಡ ಆಗಬೇಕು ಮತ್ತು ಸರ್ವರ್ ಸಮಸ್ಯೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ಇದೆಲ್ಲದರ ಜೊತೆಗೆ ಸಂಘಟನೆಯ ನ್ಯಾಯಯುತ ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು” ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.
ಮಧ್ಯವರ್ತಿ ಹಾವಳಿ ತಡೆಗಟ್ಟಬೇಕು, ಜಾತಿ ಆದಾಯ, ವಾಸಸ್ಥಳ, ವಂಶ ವೃಕ್ಷ ಇತರೆ ಪ್ರಮಾಣ ಪತ್ರ ನೀಡುವ 21ದಿನದ ಅವಧಿಯಯನ್ನ ಒಂದು ವಾರಕ್ಕೆ ಇಳಿಸಬೇಕು, ಫಹಣಿ ನೀಡಲು ಇರುವ ಸೇವಾ ಶುಲ್ಕ ಕಡಿತಗೊಳಿಸಬೇಕು. ಜನಸ್ನೇಹಿ, ಆಧಾರ್ ಕಾರ್ಡ್, ಕೇಂದ್ರಗಳ ಸಂಖ್ಯೆ ಹೆಚ್ಚುಗೊಳಿಸಬೇಕು. ಯುವಜನ ಸಬಲೀಕರಣ ಮತ್ತು ಕ್ರೀಡೆಯ ಬಗ್ಗೆ ಇರುವ ಯೋಜನೆಗಳ ವಿವರಣೆಯನ್ನ ಯುವಜನತೆಗೆ ನೀಡಲು ತಾಲೂಕು ಆಡಳಿತ ಯೋಜನೆ ರೂಪಿಸಬೇಕು. ಜನನ-ಮರಣ ಪತ್ರ ನೋಂದಾಯಿಸಿಕೊಳ್ಳುವ ಸೇವಾ ಶುಲ್ಕ ಹೆಚ್ಚಳವನ್ನು ಕೈಬಿಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಯಿತು.
ಈ ಸುದ್ದಿ ಓದಿದ್ದೀರಾ?: ವಿಜಯನಗರ | ಕನ್ನಡ ವಿಶ್ವವಿದ್ಯಾಲಯ ತಳಸಮುದಾಯಗಳ ಅಧ್ಯಯನ ಕ್ಷೇತ್ರ: ಡಾ ಎಫ್ ಟಿ ಹಳ್ಳಿಕೇರಿ
ಈ ವೇಳೆ ಈಡಿಗರ ಮಂಜುನಾಥ, ವಿ.ಸ್ವಾಮಿ, ಬಂಡೆ ತಿರುಕಪ್ಪ, ಅಲ್ತಾಫ್, ದಿವಾಕರ್, ಸೂರಿ, ಪವನ್, ಶಿವ ರೆಡ್ಡಿ, ರೆಹಮಾನ್, ಸುಧಾಕರ್ ಹಾಗೂ ಇತರರಿದ್ದರು.
