ಬಾಗಲಕೋಟೆ | ಕವಿ ಚಕ್ರವರ್ತಿ ʼರನ್ನ ಮುಧೋಳʼವೆಂಬ ಮರುನಾಮಕರಣಕ್ಕೆ ಒತ್ತಾಯ

Date:

Advertisements

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆಯುವ ರನ್ನ ವೈಭವಕ್ಕೆ ಮುಧೋಳ ಹೆಸರನ್ನು ಕವಿ ಚಕ್ರವರ್ತಿ ರನ್ನ ಮುಧೋಳ ಎಂದು ಮರುನಾಮಕರಣ ಮಾಡಲು ರನ್ನ ವೈಭವದ ಕಾರ್ಯಕ್ರಮದಲ್ಲಿ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕು ಎಂದು ಪ್ರಗತಿಪರ ಯುವರೈತ ಮುಖಂಡ ಡಾ. ಯಲ್ಲಪ್ಪ ಹೆಗಡೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕೆ ಪ್ರಕಟಣೆ ನೀಡಿರುವ ಅವರು, “ಕವಿ ಚಕ್ರವರ್ತಿ ರನ್ನನ ಜನ್ಮಭೂಮಿಯಾದ ಮುಧೋಳದಲ್ಲಿ ಫೆಬ್ರವರಿ 22ರಿಂದ 24ರವರೆಗೆ ರನ್ನ ವೈಭವ ಅದ್ದೂರಿಯಾಗಿ ನಡೆಯಲಿದೆ. ಈ ಸಂದರ್ಭದಲ್ಲಿ ರನ್ನನ ಇತಿಹಾಸ, ಸಾಹಿತ್ಯ ಮತ್ತು ಕಾವ್ಯಗಳ ಪ್ರಸಾರವನ್ನು ನಾಡಿನ ಜನರಿಗೆ ಮುಟ್ಟಿಸುವ ಕಾರ್ಯ ನಡೆಯುತ್ತದೆ” ಎಂದರು.

ರನ್ನ ಮುಧೋಳ ಹೆಸರಿಡುವಂತೆ ಯುವರೈತ ಆಗ್ರಹ

“ಕವಿ ಚಕ್ರವರ್ತಿ ರನ್ನನ ಹೆಸರನ್ನು ಶಾಶ್ವತವಾಗಿ ನೆನಪು ಮಾಡಿಕೊಳ್ಳಲು ಮತ್ತು ತಾಲೂಕಿನ ಜನರನ್ನು ರಾಜ್ಯದಲ್ಲಿ ಗುರುತಿಸಲು ಮುಧೋಳ ಹೆಸರನ್ನು ಕವಿ ಚಕ್ರವರ್ತಿ ರನ್ನ ಮುಧೋಳ ಎಂದು ನಾಮಕರಣ ಮಾಡಲು ನಾವೆಲ್ಲರೂ ಆಗ್ರಹಿಸಲು ಕಾರಣಗಳಿವೆ. ಅವುಗಳೆಂದರೆ ನಮ್ಮ ಮುಧೋಳ ನಗರವನ್ನು ಹೊರತುಪಡಿಸಿ ರಾಜ್ಯದಲ್ಲಿ 3 ಕಡೆ ಮುಧೋಳ ಎಂಬ ಹೆಸರು ಹೊಂದಿರುವ ಹಳ್ಳಿಗಳಿವೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ, ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮುಧೋಳ ಹಾಗೂ ಬೀದರ್ ಜಿಲ್ಲೆಯ ಆರೋಡ ತಾಲೂಕಿನ ಮುಧೋಳ ಬಿ ಎಂಬ ಊರುಗಳಿವೆ” ಎಂದು ತಿಳಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ವಿಜಯನಗರ | ಜನಸ್ನೇಹಿ ಕೇಂದ್ರಗಳ ಸೇವಾ ಶುಲ್ಕ ಇಳಿಸುವಂತೆ ಡಿವೈಎಫ್‌ಐ ಮನವಿ

“ಮುಧೋಳ ಎಂಬ ಊರುಗಳು ಮೂರ್ನಾಲ್ಕು ಕಡೆ ಇರುವುದರಿಂದ ನಮ್ಮ ಮುಧೋಳ ನಗರವನ್ನು ʼರನ್ನ ಮುಧೋಳʼ ಎಂಬ ಹೆಸರಿನಲ್ಲಿ ಮರುನಾಮಕಾರಣ ಮಾಡಬೇಕು. ಹೀಗೆ ಗುರುತಿಸುವುದರಿಂದ ನಮ್ಮ ನಾಡಿನಲ್ಲಿ ನಮಗೆ ಒಂದು ಹೆಮ್ಮೆಯ ಸಂಕೇತವಾಗುತ್ತದೆ. ಹಾಗಾಗಿ ಮುಧೋಳದ ಹೆಸರನ್ನು ಕವಿ ಚಕ್ರವರ್ತಿ ʼರನ್ನ ಮುಧೋಳʼವೆಂದು ನಾಮಕರಣ ಮಾಡುವಂತೆ ಎಲ್ಲ ನಾಗರಿಕ ಬಂಧುಗಳು ಹಕ್ಕೊತ್ತಾಯ ಮಾಡಬೇಕು” ಎಂದು ಮನವಿ ಮಾಡಿದರು.

    ಈದಿನ 1
    ಈ ದಿನ ಡೆಸ್ಕ್
    + posts

    ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

    ಪೋಸ್ಟ್ ಹಂಚಿಕೊಳ್ಳಿ:

    LEAVE A REPLY

    Please enter your comment!
    Please enter your name here

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

    ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

    ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

    ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

    ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

    ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

    Download Eedina App Android / iOS

    X