ಕೊಪ್ಪಳ | ಮಾರಕ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

Date:

Advertisements

ಕೊಪ್ಪಳ ತಾಲೂಕಿನ 30 ಹಳ್ಳಿಗಳ ಜನ ಜಾನುವಾರು ಸಾವು, ರೋಗ ರುಜಿನಗಳಿಗೆ ಕಾರಣವಾದ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಆಗ್ರಹಿಸಿತು.

ತುಂಗಭದ್ರಾ ನೀರು, ಫಲವತ್ತಾದ ಅಗ್ಗದ ದರದ ಭೂಮಿಯ ಮೇಲೆ ಕಣ್ಣಿಟ್ಟ ಕಾರ್ಪೊರೇಟ್ ಕಂಪನಿಗಳು ಹೊಸಪೇಟೆ, ಸಂಡೂರು, ಬಳ್ಳಾರಿಯಲ್ಲಿ ಸಂಪದ್ಭರಿತ ಮ್ಯಾಂಗನೀಸ್ ಗಣಿಗಾರಿಕೆ ಮಾಡಿ, ಯಥೇಚ್ಛವಾಗಿ ನೈಸರ್ಗಿಕ ಸಂಪನ್ಮೂಲ ಕೊಳ್ಳೆ ಹೊಡೆದು, ಪರಿಸರ ನಾಶ ಮಾಡಿ, ಸ್ಪಾಂಜ್ ಐರನ್, ಉಕ್ಕು ತಯಾರಿಸಲು ಶುದ್ಧ ಆಹ್ಲಾದಕರ ಹವಾಗುಣ ಇರುವ ಕೊಪ್ಪಳಕ್ಕೆ ಬಂದು ಕಾರ್ಖಾನೆ ಸ್ಥಾಪಿಸಿದವು. ಮೊಟ್ಟಮೊದಲು ಕಿರ್ಲೋಸ್ಕರ್ ರ್ಫೆರಸ್ 1991ರಲ್ಲಿ ಬೇವಿನಹಳ್ಳಿಯ್ಲಲ್ಲಿ ಕಾರ್ಖಾನೆ ಸ್ಥಾಪಿಸಿತು. ಈ ಕಾರ್ಖಾನೆಗಾಗಿ ಭೂಮಿ ಖರೀದಿಸುವಾಗ ನಡೆದ ದೊಡ್ಡ ದೌರ್ಜನ್ಯವನ್ನು ಎದುರಿಸಲಾಗದೆ, ರೈತರು ಉದ್ಯೋಗ ಸಿಗುವ ಆಸೆಯಿಂದ ಭೂಮಿ ಕೊಟ್ಟರು. ನಂತರ ಬಂದ ಕಲ್ಯಾಣಿ ಗಿಣಿಗೇರಿಯಲ್ಲಿ ಸ್ಥಾಪನೆಯಾಗಿ ವಸಾಹತು ರೀತಿ ಬದಲಾಯಿತು. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿನ ಜನರ ಆರೋಗ್ಯ ಸ್ಥಿತಿ ಸಾಮಾಜಿಕ ಸ್ಥಿತಿ ಗಮನಿಸುವವರು ಯಾರೂ ಇತ್ತ ಬಂದಿಲ್ಲ” ಎಂದು ಸಮಿತಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

“2008ರಿಂದ ಸ್ಪಾಂಜ್ ಐರನ್ ಉತ್ಪಾದಿಸಲು ಮುಂದಾದ ಎಂಎಸ್‌ಪಿಎಲ್ ಕಳೆದ 15 ವರ್ಷಗಳಲ್ಲಿ ಕೊಪ್ಪಳದ 1.5 ಲಕ್ಷ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿದೆ. ಇದರಲ್ಲಿ ಜಿಲ್ಲಾಡಳಿತ ಭವನ, ಜಿಲ್ಲಾ ಆಸ್ಪತ್ರೆ, ಕಿಮ್ಸ್ ಮೆಡಿಕಲ್ ಕಾಲೇಜು, ಪ್ರತಿಷ್ಠಿತ ಡಾಲರ್ಸ್ ಕಾಲೋನಿ, ಗವಿಶ್ರೀನಗರ, ಶ್ರೀ ಗವಿಸಿದ್ದೇಶ್ವರ ಮಠ, ಕುವೆಂಪು ನಗರ, ಹೂವಿನಾಳ, ಹಮಾಲರ ಕಾಲೋನಿ, ಹೊಸ ಮತ್ತು ಹಳೆ ಎಪಿಎಂಸಿ, ಜಿಲ್ಲಾ ಸತ್ರ ನ್ಯಾಯಾಲಯ, ಬಿಟಿ ಪಾಟೀಲ ನಗರ, ಕಾಳಿದಾಸ ನಗರ, ಸಿದ್ದೇಶ್ವರನಗರ, ಅಂಬೇಡ್ಕರ್ ನಗರ, ನಿರ್ಮಿತಿ ಕೇಂದ್ರ, ಶ್ರೀಶೈಲನಗರ, ಜೆಪಿ ಮಾರುಕಟ್ಟೆ ಎಂಎಸ್‌ಪಿಎಲ್ ಕಂಪನಿ ಹೊರ ಸೂಸುವ ಕಪ್ಪು ದೂಳು ಮತ್ತು ಹೊಗೆಯಿಂದ ಬಾಧಿತವಾಗಿವೆ. ಇಲ್ಲಿನ ಜನರ ಉಸಿರಾಟದ ಮೇಲೆ ಗಂಭೀರ ಪರಿಣಾಮ ಉಂಟಾಗಿದ್ದು, ರೋಗರುಜಿನಗಳಿಗೆ ಒಳಾಗುತ್ತಿದ್ದಾರೆ. ಈ ಜನರ ಉತ್ತಮ ಆರೋಗ್ಯ ಮರೀಚಿಕೆಯಾಗಿದೆ. ನಗರದಲ್ಲಿ ಕಾರ್ಖಾನೆ ಬರುವ ಮುಂಚೆ ನಾಲ್ಕು ವೈದ್ಯರಿದ್ದರು ಈಗ ನೂರಾರು ವೈದ್ಯರು ಆಸ್ಪತ್ರೆ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡುವಂತಾಗಿದೆ. ಕಳೆದ 10 ವರ್ಷಗಳಲ್ಲಿ ಈ ಪ್ರಮಾಣದಲ್ಲಿ ವೈದ್ಯರು ಹೆಚ್ಚಾಗಿದ್ದೇಕೆ ಎಂದು ತಿಳಿಸಬೇಕು” ಎಂದು ಆಗ್ರಹಿಸಿದರು.

Advertisements

“ಕಾರ್ಖಾನೆಗಳು ತುಂಗಭದ್ರಾ ಜಲಾಶಯಕ್ಕೆ ಬಿಡುತ್ತಿರುವ ತ್ಯಾಜ್ಯದಿಂದ ಜಲಾಶಯದ ನೀರು ಸಂಪೂರ್ಣ ವಿಷವಾಗಿದೆ. ಅಲ್ಲದೆ ಜಲಾಶಯದ ಅರ್ಧದಷ್ಟು ನೀರನ್ನು ಬಳ್ಳಾರಿಯ ಜಿಂದಾಲ್, ವಿಜಯನಗರ, ಕೊಪ್ಪಳದ ಈ ಉಕ್ಕಿನ ಕಾರ್ಖಾನೆಗಳು ಬಳಸಿಕೊಳ್ಳುತ್ತಿರುವುದರಿಂದ ಈ ನೀರನ್ನೇ ಅವಲಂಬಿಸಿದ ಎಡ ಮತ್ತು ಬಲದಂಡೆಗಳ 1 ಕೋಟಿ ಜನರು 12,ಲಕ್ಷ ಎಕರೆಯಲ್ಲಿ ಎರಡು ಬೆಳೆ ಭತ್ತ ಬೆಳೆಯುವುದನ್ನು ಬಹುತೇಕ ನಿಲ್ಲಿಸಿದ್ದಾರೆ. ಬಳ್ಳಾರಿ, ವಿಜಯನಗರ, ಕೊಪ್ಪಳದ ಈ ಕಾರ್ಖಾನೆಗಳು ಕೇವಲ 40 ಸಾವಿರ ಉದ್ಯೋಗ ಸೃಷ್ಟಿಸಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ 3 ಕೋಟಿ ಜನರ ಬದುಕನ್ನು ಕಸಿದುಕೊಂಡಿವೆ ಇದರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದರು.

ಇದನ್ನೂ ಓದಿ: ಕೊಪ್ಪಳ | ಆನೆಗೊಂದಿ ಉತ್ಸವ ವಿಳಂಬ; ಸಚಿವ ತಂಗಡಗಿಗೆ ಹೋರಾಟಗಾರರ ಎಚ್ಚರಿಕೆ

ಮಾಲಿನ್ಯಕ್ಕೆ ಕಾರಣವಾದ ಎಲ್ಲಾ ತರಹದ ಕಾರ್ಖಾನೆಗಳನ್ನು ಮುಲಾಜಿಗೊಳಗಾಗದೇ ಕಾರ್ಖಾನೆ ಮುಚ್ಚುವ ತೀರ್ಮಾನವನ್ನು ಮಾಡಬೇಕು. ಇನ್ನು ಬಿಹಾರ, ಜಾರ್ಖಂಡ, ಒರಿಸ್ಸಾದ ಕಾರ್ಮಿಕರು ಕಾರ್ಖಾನೆಯ ಅಪಾಯಕಾರಿ ಕೆಲಸದಲ್ಲಿ ತೊಡಗಿ ಸಾಯುತ್ತಿದ್ದು, ವಲಸೆ ಕಾರ್ಮಿಕರ ಸಮೀಕ್ಷೆ ನಡೆಸಬೇಕು ಹಾಗೂ ಸಾವಿನ ಪ್ರಕರಣಗಳ ಮೇಲೆ ತನಿಖೆ ನಡೆಸಬೇಕು. ಎಂದು ಒತ್ತಾಯಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X